ಸಯ್ಯದ್ ಮುಷ್ತಾಕ್ ಅಲಿ: ಬಂಗಾಳದ ಕೈಯಿಂದ ಜಯ ಕಸಿದ ಕರ್ನಾಟಕಕ್ಕೆ ‘ಸೂಪರ್’ ಜಯ
Team Udayavani, Nov 18, 2021, 4:56 PM IST
ಹೊಸದಿಲ್ಲಿ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಇಂದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಗೆದ್ದ ಕರ್ನಾಟಕ ತಂಡ ಸೆಮಿ ಫೈನಲ್ ಗೆ ಲಗ್ಗೆ ಇರಿಸಿದೆ. ಬಂಗಾಳ ವಿರುದ್ಧ ರೋಮಾಂಚನಕಾರಿ ಪಂದ್ಯದಲ್ಲಿ ಸೋಲಿನ ಬಾಯಿಯಿಂದ ಜಯ ಕಸಿದ ಕರ್ನಾಟಕ ಹುಡುಗರು ಸೆಮಿ ಗೆ ಎಂಟ್ರಿ ನೀಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ರೋಹನ್ ಕದಂ 30 ರನ್, ನಾಯಕ ಮನೀಷ್ ಪಾಂಡೆ 29 ಮತ್ತು ಕರುಣ್ ನಾಯರ್ ಅಜೇಯ 55 ರನ್ ಗಳಿಸಿದರು. ಬಂಗಾಳ ಪರ ಐವರು ಬೌಲರ್ ಗಳು ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:“ಎಲ್ಲವೂ ಹೋಯಿತು..ಅಳುವುದೋ ಏನು ಮಾಡುವುದು ಗೊತ್ತಿಲ್ಲ”: ಮಿಮಿ ಚಕ್ರವರ್ತಿ
ಗುರಿ ಬೆನ್ನತ್ತಿದ ಬಂಗಾಳಕ್ಕೆ ಅನುಭವಿ ಶ್ರೀವತ್ಸ ಗೋಸ್ವಾಮಿ ಭರ್ಜರಿ ಆರಂಭ ನೀಡಿದರು. ವಿಜಯ್ ಕುಮಾರ್ ಎಸೆದ ಮೊದಲ ಓವರ್ ನಲ್ಲೇ 20 ರನ್ ಸಿಡಿಸಿದರು. ಬಂಗಾಳ ಉತ್ತಮ ರನ್ ರೇಟ್ ನಲ್ಲಿ ರನ್ ಗಳಿಸಿದರೂ ಸತತ ವಿಕೆಟ್ ಕಳೆದುಕೊಂಡಿತು. ವೃತ್ತಿಕ್ ಚಟರ್ಜಿ 51 ರನ್ ಗಳಿಸಿದರೆ, ಕೊನೆಯಲ್ಲಿ ಕೇವಲ 18 ಎಸೆತಗಳಲ್ಲಿ ರಿತ್ವಿಕ್ ಚೌಧರಿ 36 ರನ್ ಸಿಡಿಸಿದರು.
ಅಂತಿಮ ಓವರ್ ರೋಮಾಂಚನ: ವಿದ್ಯಾಧರ್ ಪಾಟಿಲ್ ಎಸೆದ ಅಂತಿಮ ಓವರ್ ನಲ್ಲಿ ಬಂಗಾಳ ಗೆಲುವಿಗೆ 20 ರನ್ ಅಗತ್ಯವಿತ್ತು. ರಿತ್ವಿಕ್ ಚೌಧರಿ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು. ಮೂರನೇ ಎಸೆತಕ್ಕೆ ಒಂಟಿ ರನ್, ನಾಲ್ಕನೇ ಎಸೆತಕ್ಕೆ ಬೌಂಡರಿ. ಐದನೇ ಎಸೆತಕ್ಕೆ ಮಿಸ್ ಫೀಲ್ಡ್ ಸೇರಿ ಎರಡು ರನ್. ಪಂದ್ಯ ಟೈ. ಕೊನೆಯ ಎಸೆತಕ್ಕೆ ಒಂದು ರನ್ ಅಗತ್ಯವಿತ್ತು. ಆದರೆ ಮನೀಷ್ ಪಾಂಡೆಯ ಅದ್ಭುತ ಥ್ರೋ ಗೆ ಬ್ಯಾಟ್ಸಮನ್ ರನ್ ಔಟ್. ಪಂದ್ಯ ಟೈ.
ಸೂಪರ್ ಓವರ್: ಮೊದಲು ಬ್ಯಾಟಿಂಗ್ ಬಂದ ಬಂಗಾಳದ ಆಟಗಾರರು ಕರಿಯಪ್ಪ ಬೌಲಿಂಗ್ ಗೆ ನಲುಗಿದರು. ಸೂಪರ್ ಓವರ್ ನ ಮೊದಲ ಬಾಲ್ ಡಾಟ್, ಎರಡನೇ ಎಸೆತದಲ್ಲಿ ಕೈಫ್ ಅಹಮದ್ ಔಟ್. ಮೂರನೇ ಎಸೆತಕ್ಕೆ ಬೌಂಡರಿ ಬಾರಿಸಿದರೆ, ನಾಲ್ಕನೇ ಎಸೆತದಕ್ಕೆ ಎರಡು ರನ್ ಕದಿಯುವ ಭರದಲ್ಲಿ ಗೋಸ್ವಾಮಿ ರನ್ ಔಟಾದರು.
ಆರು ಎಸೆತದಲ್ಲಿ ಆರು ರನ್ ಗಳಿಸಬೇಕಾದ ಗುರಿ ಪಡೆದ ಕರ್ನಾಟಕಕ್ಕೆ ನಾಯಕ ಮನೀಷ್ ಪಾಂಡೆ ಕೇವಲ ಎರಡು ಎಸೆತದಲ್ಲಿ ಜಯ ತಂದಿತ್ತರು. ಮೊದಲ ಎಸೆತದಲ್ಲಿ ಎರಡು ರನ್ ಓಡಿದರೆ, ಮುಂದಿನ ಎಸೆತವನ್ನು ಸಿಕ್ಸರ್ ಗೆ ಅಟ್ಟಿದರು.
Manish pandey hits winning runs in super over helped Karnataka to qualify for semis.#SMAT #Benvskar pic.twitter.com/tmUpI9s4DT
— WORLD TEST CHAMPIONSHIP NEWS (@RISHItweets123) November 18, 2021
ಕರ್ನಾಟಕ ಸೆಮಿ ಫೈನಲ್ ಗೇರಿದರೆ, ಬಂಗಾಳದ ಅಭಿಯಾನ ಅಂತ್ಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ