ಮಂಧನಾ, ಕೌರ್‌, ಕಾಪ್‌, ವೋಲ್ವಾರ್ಟ್‌ ಶತಕ: ವನಿತೆಯರಿಗೆ ಏಕದಿನ ಸರಣಿ


Team Udayavani, Jun 19, 2024, 11:45 PM IST

ಮಂಧನಾ, ಕೌರ್‌, ಕಾಪ್‌, ವೋಲ್ವಾರ್ಟ್‌ ಶತಕ: ವನಿತೆಯರಿಗೆ ಏಕದಿನ ಸರಣಿ

ಬೆಂಗಳೂರು: ಬೃಹತ್‌ ಮೊತ್ತದ ಅಮೋಘ ಹೋರಾಟವೊಂದರಲ್ಲಿ ಭಾರತದ ವನಿತೆಯರು ದಕ್ಷಿಣ ಆಫ್ರಿಕಾವನ್ನು ನಾಲ್ಕೇ ನಾಲ್ಕು ರನ್ನಿನಿಂದ ಮಣಿಸಿ ಏಕದಿನ ಸರಣಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬುಧವಾರದ ಬೆಂಗಳೂರು ಮುಖಾಮುಖೀಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 3 ವಿಕೆಟಿಗೆ 325 ರನ್‌ ರಾಶಿ ಹಾಕಿದರೆ, ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 321 ರನ್‌ ಮಾಡಿ ಶರಣಾ ಯಿತು. ಮೊದಲ ಪಂದ್ಯವನ್ನು ಭಾರತ 143 ರನ್ನುಗಳಿಂದ ಜಯಿಸಿತ್ತು. ಅಂತಿಮ ಪಂದ್ಯ ರವಿವಾರ ನಡೆಯಲಿದೆ.

ನಾಯಕಿ, ಉಪನಾಯಕಿಯರ ಶತಕ
ಮೊದಲ ಪಂದ್ಯದಲ್ಲಿ 117 ರನ್‌ ಬಾರಿಸಿದ ಸ್ಮತಿ ಮಂಧನಾ, ಬುಧವಾರ ಇದೇ ಆಟದ ಮುಂದುವರಿದ ಭಾಗ ವೆಂಬಂತೆ ಬ್ಯಾಟ್‌ ಬೀಸಿ ಜೀವನಶ್ರೇಷ್ಠ 136 ರನ್‌ ಹೊಡೆದರು. ಮಂಧನಾ ಸತತ 2 ಏಕದಿನ ಪಂದ್ಯ ಗಳಲ್ಲಿ ಸೆಂಚುರಿ ಹೊಡೆದ ಭಾರತದ ಮೊದಲ ಆಟಗಾರ್ತಿ. ರನ್‌ ಬರಗಾಲದಲ್ಲಿದ್ದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೊನೆಯ ಓವರ್‌ನಲ್ಲಿ ಅಬ್ಬರಿಸಿ ಶತಕ ಪೂರ್ತಿ ಗೊಳಿಸು ವಲ್ಲಿ ಯಶಸ್ವಿಯಾದರು.

ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 136 ಎಸೆತಗಳಿಂದ 171 ರನ್‌ ಹರಿದು ಬಂತು.

ಬಹಳ ವಿಳಂಬವಾಗಿ, 18ನೇ ಎಸೆತದಲ್ಲಿ ರನ್‌ ಖಾತೆ ತೆರೆದ ಮಂಧನಾ 120 ಎಸೆತ ಎದುರಿಸಿ 136 ರನ್‌ ಬಾರಿಸಿದರು. ಇದು 18 ಬೌಂಡರಿ, 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧವೇ 2018ರ ಕಿಂಬರ್ಲಿ ಪಂದ್ಯದಲ್ಲಿ 135 ರನ್‌ ಹೊಡೆದದ್ದು ಮಂಧನಾ ಅವರ ಈವರೆಗಿನ ಸರ್ವಾಧಿಕ ಗಳಿಕೆ ಆಗಿತ್ತು. ಇದು ಮಂಧನಾ ಅವರ 7ನೇ ಶತಕ. ಮಿಥಾಲಿ ರಾಜ್‌ ಕೂಡ 7 ಶತಕ ಹೊಡೆದಿದ್ದು, ಜಂಟಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಕೌರ್‌ 6ನೇ ಶತಕದ ಮೂಲಕ ಮಿಂಚಿದರು. ನಾಯಕಿಯ ಕೊಡುಗೆ 88 ಎಸೆತಗಳಿಂದ ಅಜೇಯ 103 ರನ್‌ (9 ಬೌಂಡರಿ, 3 ಸಿಕ್ಸರ್‌). ಅಂತಿಮ ಓವರ್‌ನಲ್ಲಿ ಕೌರ್‌ ಸೆಂಚುರಿಗೆ 12 ರನ್‌ ಅಗತ್ಯವಿತ್ತು. ಮಲಾಬಾ ಅವರ ಸತತ 3 ಎಸೆತಗಳಲ್ಲಿ 4, 6, 4 ರನ್‌ ಮಾಡಿ ಶತಕ ಸಂಭ್ರಮ ಆಚರಿಸಿದರು.

ತವರಲ್ಲಿ ಗರಿಷ್ಠ ಸ್ಕೋರ್‌
ಭಾರತ ತವರಿನಂಗಳದಲ್ಲಿ ಮೊದಲ ಸಲ 300 ರನ್‌ ಗಡಿ ದಾಟಿತು. ವೆಸ್ಟ್‌ ಇಂಡೀಸ್‌ ಎದುರಿನ 2018ರ ಧನ್‌ಬಾದ್‌ ಪಂದ್ಯದಲ್ಲಿ 2ಕ್ಕೆ 298 ರನ್‌ ಹೊಡೆದದ್ದು ಈವರೆಗಿನ ಗರಿಷ್ಠ ಮೊತ್ತವಾಗಿತ್ತು.

ಇದು ಏಕದಿನದಲ್ಲಿ ಭಾರತದ 3ನೇ ಗರಿಷ್ಠ ಗಳಿಕೆ. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ ಪೊಚೆಫ್ಸೂಮ್‌ನಲ್ಲಿ 2ಕ್ಕೆ 358 ರನ್‌, 2022ರಲ್ಲಿ ಇಂಗ್ಲೆಂಡ್‌ ಎದುರು ಕ್ಯಾಂಟರ್‌ಬರಿಯಲ್ಲಿ 5ಕ್ಕೆ 333 ರನ್‌ ಹೊಡೆದಿತ್ತು. ಈ ಇನ್ನಿಂಗ್ಸ್‌ನಲ್ಲಿ ಗರಿಷ್ಠ 8 ಸಿಕ್ಸರ್‌ ಬಾರಿಸಿದ್ದು ಭಾರತದ ದಾಖಲೆ ಎನಿಸಿತು.

184 ರನ್‌ ಜತೆಯಾಟ
ನಾಯಕಿ ಲಾರಾ ವೋಲ್ವಾರ್ಟ್‌ ಮತ್ತು ಮರಿಜಾನ್‌ ಕಾಪ್‌ 184 ರನ್‌ ಜತೆಯಾಟದ ಮೂಲಕ ಭಾರತಕ್ಕೆ ಸಡ್ಡು ಹೊಡೆ ದರು. ಆದರೆ ಕೊನೆಯ ಹಂತದಲ್ಲಿ ವಿಕೆಟ್‌ ಕಳೆದು ಕೊಂಡ ಪರಿಣಾಮ ದಕ್ಷಿಣ ಆಫ್ರಿಕಾ ಗೆಲುವಿನ ಗಡಿಯಲ್ಲಿ ಮುಗ್ಗರಿಸಿತು. ವೋಲ್ವಾರ್ಟ್‌ ಎಸೆತಕ್ಕೊಂದರಂತೆ ಅಜೇಯ 135 (12 ಬೌಂಡರಿ, 3 ಸಿಕ್ಸರ್‌), ಕಾಪ್‌ 94 ಎಸೆತಗಳಿಂದ 114 ರನ್‌ ಬಾರಿಸಿದರು (11 ಬೌಂಡರಿ, 3 ಸಿಕ್ಸರ್‌).

Ad

ಟಾಪ್ ನ್ಯೂಸ್

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

Tragedy: ಶಾಲಾ ಬಸ್ಸಿಗೆ ರೈಲು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃ*ತ್ಯು, ಹಲವರಿಗೆ ಗಾಯ

Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

Wimbledon 2025; ಕ್ವಾರ್ಟರ್‌ ಫೈನಲ್‌ಗೆ ಜೊಕೋ, ಅನಿಸಿಮೋವಾ

Wimbledon 2025; ಕ್ವಾರ್ಟರ್‌ ಫೈನಲ್‌ಗೆ ಜೊಕೋ, ಅನಿಸಿಮೋವಾ

ಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕ

ಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕ

ಅಂಡರ್‌-19 ಏಕದಿನ: ಭಾರತಕ್ಕೆ 7 ವಿಕೆಟ್‌ ಸೋಲು

ಅಂಡರ್‌-19 ಏಕದಿನ: ಭಾರತಕ್ಕೆ 7 ವಿಕೆಟ್‌ ಸೋಲು

T20I Series; ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ

T20I Series; ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.