ಬದಲಿ ಆಟಗಾರನಾಗಿ ಅವಕಾಶ ಪಡೆದು ಮಿಂಚಿದ ಕೆಎಸ್ ಭರತ್; ಹೊಸ ದಾಖಲೆ
Team Udayavani, Nov 27, 2021, 4:31 PM IST
ಕಾನ್ಪುರ: ಇಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಕೆಎಸ್ ಭರತ್ ಬದಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದು ಗಮನ ಸೆಳೆದರು. ತಂಡದಲ್ಲಿ ಸ್ಥಾನ ಪಡೆದಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾಗೆ ಕುತ್ತಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭರತ್ ಗೆ ಅವಕಾಶ ಲಭಿಸಿದೆ.
ಬದಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಅವಕಾಶವನ್ನು ಭರತ್ ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಮೊದಲ ವಿಕೆಟ್ ಪಡೆಯಲು ಪರದಾಡುತ್ತಿದ್ದ ತಂಡಕ್ಕೆ ಭರತ್ ಹಿಡಿದ ಲೋ ಕ್ಯಾಚ್ ಸಹಕಾರಿಯಾಯಿತು. ಅಶ್ವಿನ್ ಎಸೆತದಲ್ಲಿ ವಿಲ್ ಯಂಗ್ ಅವರು ಭರತ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಶತಕದತ್ತ ಮುನ್ನುಗ್ಗುತ್ತಿದ್ದ ಟಾಮ್ ಲ್ಯಾಥಂ (95 ರನ್) ರನ್ನು ಭರತ್ ಸ್ಪಂಪ್ ಔಟ್ ಮಾಡಿದರು. ಅನುಭವಿ ಆಟಗಾರ ರಾಸ್ ಟೇಲರ್ ಕ್ಯಾಚ್ ಕೂಡಾ ಭರತ್ ಭದ್ರ ಬೊಗಸೆ ಸೇರಿತು.
ಇದನ್ನೂ ಓದಿ:ಅಕ್ಷರ್, ಅಶ್ವಿನ್ ಸ್ಪಿನ್ ಜಾದೂ: ಆಲೌಟಾದ ನ್ಯೂಜಿಲ್ಯಾಂಡ್, ಭಾರತಕ್ಕೆ 49 ರನ್ ಮುನ್ನಡೆ
ಇದೇ ವೇಳೆ ಬದಲಿ ಕೀಪರ್ ಆಗಿ ಆಡಿ ಸ್ಟಂಪ್ ಮಾಡಿದ ಭಾರತದ ಮೊದಲ ಮತ್ತು ವಿಶ್ವದ ಕೇವಲ ಮೂರನೇ ಆಟಗಾರ ಎಂಬ ದಾಖಲೆಯನ್ನು ಕೆ.ಎಸ್.ಭರತ್ ಬರೆದರು.
ಕೆಎಸ್ ಭರತ್ ವಿಕೆಟ್ ಕೀಪಿಂಗ್ ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಸಾಹಾರನ್ನು ಕೈಬಿಟ್ಟು, ಕೆಎಸ್ ಭರತ್ ಗೆ ಅವಕಾಶ ನೀಡಬೇಕು ಎಂದಿದ್ದಾರೆ.
KS Bharat takes a good low catch to dismiss Will Young ?? Ravi Ashwin the wicket taker ❤️#INDvNZ #INDvsNZ#NZvIND #NZvsINDpic.twitter.com/Fo4JOdtn7T
— CRICKET VIDEOS ? (@AbdullahNeaz) November 27, 2021
Very impressed with the way KS Bharat has kept on this wkt and against quality spinners. Great hands and outstanding foot work. Definitely has a very bright future. #NZvIND pic.twitter.com/tvLk9RbBne
— VVS Laxman (@VVSLaxman281) November 27, 2021
Catching, Stumping, Talking!
KS Bharat was highly impressive as a substitute keeper…!!! ???#INDvsNZ #KSBharat #Ashwin pic.twitter.com/147OJIzDIM— ????? (@Aamir_Capri) November 27, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್