![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಸೂಪರ್ನೋವಾಸ್-ವೆಲೋಸಿಟಿ ಪ್ರಶಸ್ತಿ ಫೈಟ್
ವನಿತಾ ಟಿ20 ಚಾಲೆಂಜ್ ಸರಣಿ ; ಇಂದು 7.30ಕ್ಕೆ ಫೈನಲ್
Team Udayavani, May 11, 2019, 6:00 AM IST
![aaaa](https://www.udayavani.com/wp-content/uploads/2019/05/aaaa-620x457.jpg)
ಜೈಪುರ: ವನಿತಾ ಟಿ20 ಚಾಲೆಂಜ್ ಸರಣಿಯ ಪ್ರಶಸ್ತಿ ಸಮರಕ್ಕೆ ಸೂಪರ್ನೋವಾಸ್ ಮತ್ತು ವೆಲೋಸಿಟಿ ತಂಡಗಳು ಅಣಿಯಾಗಿವೆ. ಶನಿವಾರ ರಾತ್ರಿ 7.30ಕ್ಕೆ ಜೈಪುರದ ‘ಸವಾಯ್ ಮಾನ್ಸಿಂಗ್ ಸ್ಟೇಡಿಯಂ’ನಲ್ಲಿ ಈ ಮುಖಾಮುಖೀ ಮೊದಲ್ಗೊಳ್ಳಲಿದೆ.
ಗುರುವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲೂ ಈ ತಂಡಗಳು ಎದುರಾಗಿದ್ದವು. ಇದರಲ್ಲಿ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಸೂಪರ್ನೋವಾಸ್ 12 ರನ್ನುಗಳಿಂದ ವೆಲೋಸಿಟಿ ತಂಡವನ್ನು ಮಣಿಸಿತು. ಇದರೊಂದಿಗೆ ಮೂರೂ ತಂಡಗಳು ತಲಾ ಒಂದು ಗೆಲುವು, ಒಂದು ಸೋಲಿನೊಂದಿಗೆ ಲೀಗ್ ವ್ಯವಹಾರ ಮುಗಿಸಿದವು. ಆದರೆ ರನ್ರೇಟ್ನಲ್ಲಿ 3ನೇ ಸ್ಥಾನಕ್ಕಿಳಿದ ಸ್ಮತಿ ಮಂಧನಾ ನೇತೃತ್ವದ ಟ್ರೈಬ್ಲೇಜರ್ ಕೂಟದಿಂದ ಹೊರಬಿತ್ತು.
ಫೈನಲ್ಗೆ ಅಡ್ಡಿಯಾಗದ ಸೋಲು
ಅಂತಿಮ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೂಪರ್ನೋವಾಸ್ 3 ವಿಕೆಟಿಗೆ 142 ರನ್ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ವೆಲೋಸಿಟಿ ಮಧ್ಯಮ ಕ್ರಮಾಂಕದ ಉತ್ತಮ ಹೋರಾಟದ ಹೊರತಾಗಿಯೂ 3 ವಿಕೆಟಿಗೆ 130 ರನ್ ಮಾತ್ರ ಗಳಿಸಿ ಶರಣಾಯಿತು. ಆದರೆ ಈ ಸೋಲಿನಿಂದ ಮಿಥಾಲಿ ರಾಜ್ ಪಡೆಯ ಫೈನಲ್ಗೆ ಯಾವುದೇ ಅಡ್ಡಿಯಾಗಲಿಲ್ಲ.
ಚೇಸಿಂಗ್ ವೇಳೆ ಹ್ಯಾಲಿ ಮ್ಯಾಥ್ಯೂಸ್ (11) ಮತ್ತು ಶಫಾಲಿ ವರ್ಮ (2) ಅವರನ್ನು ವೆಲೋಸಿಟಿ ಬೇಗನೆ ಕಳೆದುಕೊಂಡಿತು. ಬಳಿಕ ಡೇನಿಯಲ್ ವ್ಯಾಟ್ (43), ಮಿಥಾಲಿ ರಾಜ್ (ಔಟಾಗದೆ 40) ಮತ್ತು ವೇದಾ ಕೃಷ್ಣಮೂರ್ತಿ (ಔಟಾಗದೆ 30) ಉತ್ತಮ ಹೋರಾಟವನ್ನೇನೋ ಸಂಘಟಿಸಿದರು, ಆದರೆ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫಲರಾದರು.
ಪೂನಂ ಯಾದವ್ ಅಮೋಘ ದಾಳಿ ಸಂಘಟಿಸಿ ವೆಲೋಸಿಟಿ ಆಟಗಾರ್ತಿಯರಿಗೆ ಕಡಿವಾಣ ಹಾಕಿದರು. ಪೂನಂ 4 ಓವರ್ಗಳಲ್ಲಿ ಕೇವಲ 13 ರನ್ ನೀಡಿದರು. ಕೊನೆಯ 3 ಓವರ್ಗಳಲ್ಲಿ ವೆಲೋಸಿಟಿ ಗೆಲುವಿಗೆ 37 ರನ್ ಬೇಕಿತ್ತು. 18ನೇ ಓವರ್ ಎಸೆದ ಪೂನಂ ಕೇವಲ 5 ರನ್ ನೀಡಿ ಎದುರಾಳಿ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದರು.
ಸಂಕ್ಷಿಪ್ತ ಸ್ಕೋರ್
ಸೂಪರ್ನೋವಾಸ್-3 ವಿಕೆಟಿಗೆ 142 (ಜೆಮಿಮಾ ಔಟಾಗದೆ 77, ಚಾಮರಿ 31, ಅಮೇಲಿಯಾ ಕೆರ್ 21ಕ್ಕೆ 2). ವೆಲೋಸಿಟಿ-3 ವಿಕೆಟಿಗೆ 130 (ವ್ಯಾಟ್ 43, ಮಿಥಾಲಿ ಔಟಾಗದೆ 40, ವೇದಾ ಔಟಾಗದೆ 30, ಪೂನಂ 13ಕ್ಕೆ 1).
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.