ಅಂಧರ ಟಿ 20 ವಿಶ್ವಕಪ್ : ಬಾಂಗ್ಲಾದೇಶವನ್ನು ಸೋಲಿಸಿ ಪ್ರಶಸ್ತಿ ಗೆದ್ದ ಭಾರತ
ಹ್ಯಾಟ್ರಿಕ್ ಪ್ರಶಸ್ತಿಗಳನ್ನು ಗೆದ್ದ ಟೀಮ್ ಇಂಡಿಯಾ
Team Udayavani, Dec 17, 2022, 8:18 PM IST
ಬೆಂಗಳೂರು: ನಾಯಕ ಅಜಯ್ ಕುಮಾರ್ ರೆಡ್ಡಿ ಮತ್ತು ಸುನೀಲ್ ರಮೇಶ್ ಅವರ ಅದ್ಭುತ ಶತಕಗಳ ನೆರವಿನಿಂದ ಭಾರತ ಶನಿವಾರ ಇಲ್ಲಿ ನಡೆದ ಅಂಧರ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶವನ್ನು 120 ರನ್ಗಳಿಂದ ಸೋಲಿಸಿ ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ.
ರಮೇಶ್ 63 ಎಸೆತಗಳಲ್ಲಿ 24 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 136 ರನ್ ಸಿಡಿಸಿದರೆ, ರೆಡ್ಡಿ 50 ಎಸೆತಗಳಲ್ಲಿ 100 ರನ್ ಬಾರಿಸಿದರು. ಇಬ್ಬರು ಮೂರನೇ ವಿಕೆಟ್ಗೆ 248 ರನ್ಗಳ ಅಜೇಯ ಜತೆಯಾಟವನ್ನು ನಡೆಸಿದರು. ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ 20 ಓವರ್ಗಳಲ್ಲಿ ಎರಡು ವಿಕೆಟ್ಗಳಿಗೆ 277 ರನ್ ಗಳಿಸಿತು.
ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶ ಪರ ಸಲ್ಮಾನ್ ಔಟಾಗದೆ 77 ರನ್ ಗಳಿಸಿದರು. ಚಾಂಪಿಯನ್ಸ್ ಭಾರತ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿತ್ತು.
29ಕ್ಕೆ 2 ಭಾರತವು ಹೊಡೆತವನ್ನು ಅನುಭವಿಸಿತು. ವಿಕೆಟ್ ಕಳೆದುಕೊಂಡ ಅದರ ನಂತರ ಬಾಂಗ್ಲಾದೇಶದ ಬೌಲಿಂಗ್ ದಾಳಿಯನ್ನು ಎದುರಿಸಿದ ರಮೇಶ್ ಮತ್ತು ರೆಡ್ಡಿ ಅವರು ಅಮೋಘ ಆಟವಾಡಿದರು. ರೆಡ್ಡಿ ಅವರು ಇನ್ನಿಂಗ್ಸ್ನ ಅಂತಿಮ ಓವರ್ನಲ್ಲಿ ತಮ್ಮ ಶತಕದ ಗುರಿ ತಲುಪಿದರು. ರಮೇಶ್ ಬೌಂಡರಿಯೊಂದಿಗೆ ಪಂದ್ಯಾವಳಿಯ ಅವರ ಮೂರನೇ ಶತಕವನ್ನು ದಾಖಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Must win ಡೆಲ್ಲಿ ಪ್ಲೇ ಆಫ್ ಆಸೆ ಜೀವಂತ: ರಾಜಸ್ಥಾನ್ ರಾಯಲ್ಸ್ ಸವಾಲು
CSK; ಬಸ್ ಕಂಡಕ್ಟರ್ಗಳಿಗೆ ಚೆನ್ನೈ ಕಿಂಗ್ಸ್ನಿಂದ 8 ಸಾವಿರ ಅಗತ್ಯ ಗಿಫ್ಟ್ !
Central government ಒಪ್ಪಿದರೆ ಪಾಕ್ಗೆ ಭಾರತ ಕ್ರಿಕೆಟ್ ತಂಡ: ರಾಜೀವ್ ಶುಕ್ಲ
T20 ಸರಣಿ; ಬಾಂಗ್ಲಾ ಎದುರು ಭಾರತ ವನಿತೆಯರಿಗೆ 56 ರನ್ ಗೆಲುವು: 4-0 ಮುನ್ನಡೆ
Pakistan ಟಿ20 ವಿಶ್ವಕಪ್ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್ ಬಹುಮಾನ
MUST WATCH
ಹೊಸ ಸೇರ್ಪಡೆ
LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ
LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು
Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು
ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ