ಸೂಪರ್‌-12 ಹಂತಕ್ಕೆ ಶ್ರೀಲಂಕಾ, ನೆದರ್ಲೆಂಡ್ಸ್‌


Team Udayavani, Oct 20, 2022, 6:38 AM IST

ಸೂಪರ್‌-12 ಹಂತಕ್ಕೆ ಶ್ರೀಲಂಕಾ, ನೆದರ್ಲೆಂಡ್ಸ್‌

ಗೀಲಾಂಗ್‌: ಟಿ20 ವಿಶ್ವಕಪ್‌ “ಎ’ ವಿಭಾಗದ ಅರ್ಹತಾ ಸುತ್ತಿನ ಮುಖಾಮುಖೀಯಲ್ಲಿ ಗುರುವಾರ ಅಚ್ಚರಿಯೊಂದು ಸಂಭವಿಸಿತು. ಶ್ರೀಲಂಕಾದ ಜತೆಗೆ ಇವರೆದುರು ಪರಾಭವಗೊಂಡ ನೆದರ್ಲೆಂಡ್ಸ್‌ ಕೂಡ ಸೂಪರ್‌-12 ಹಂತವನ್ನು ಪ್ರವೇಶಿಸಿತು. ನಮೀಬಿಯಾ ಮತ್ತು ಯುಎಇ ಹೊರಬಿದ್ದವು.

ಸೂಪರ್‌-12 ಹಂತದಲ್ಲಿ ಶ್ರೀಲಂಕಾ ಗ್ರೂಪ್‌ ಒಂದರಲ್ಲಿ ಹಾಗೂ ನೆದರ್ಲೆಂಡ್ಸ್‌ ಗ್ರೂಪ್‌ ಎರಡರಲ್ಲಿ ಆಡಲಿವೆ.

“ಮಸ್ಟ್‌ ವಿನ್‌’ ಮುಖಾಮುಖೀಯಲ್ಲಿ ಶ್ರೀಲಂಕಾ 16 ರನ್ನುಗಳಿಂದ ನೆದರ್ಲೆಂಡ್ಸ್‌ಗೆ ಸೋಲುಣಿಸಿತು. ಇದರಿಂದ ಲಂಕಾ ಅಂಕ 4ಕ್ಕೆ ಏರಿದ್ದರಿಂದ ಮತ್ತು ರನ್‌ರೇಟ್‌ ಪ್ಲಸ್‌ನಲ್ಲಿ ಇದ್ದುದರಿಂದ (+0.667) ಅದು ಮುಂದಿನ ಸುತ್ತಿಗೆ ನೆಗೆಯಿತು.

ಸೋತರೂ ನೆದರ್ಲೆಂಡ್ಸ್‌ ದ್ವಿತೀಯ ಸ್ಥಾನಿಯಾಯಿತು (4 ಅಂಕ, -0.162 ರನ್‌ರೇಟ್‌). ಆದರೆ ಸೂಪರ್‌-12 ಅಧಿಕೃತಗೊಂಡಿರಲಿಲ್ಲ. ಅದು ನಮೀಬಿಯಾ-ಯುಎಇ ನಡುವಿನ ಫ‌ಲಿತಾಂಶವನ್ನು ಕಾಯಬೇಕಿತ್ತು.

ಇಲ್ಲಿ ಯುಎಇ 7 ರನ್ನುಗಳ ರೋಚಕ ಜಯ ಸಾಧಿಸಿತು. ಇದು ಯುಎಇಗೆ ಒಲಿದ ಮೊದಲ ಜಯ. ಆದರೆ ಇಲ್ಲಿ ನಮೀಬಿಯಾ ಜಯಿಸಿದ್ದೇ ಆದರೆ ಉತ್ತಮ ರನ್‌ರೇಟ್‌ ಲೆಕ್ಕಾಚಾರದಲ್ಲಿ ಅಗ್ರಸ್ಥಾನಿಯಾಗಿ ಸೂಪರ್‌-12 ಸುತ್ತಿಗೆ ನೆಗೆಯುತ್ತಿತ್ತು. ಆಗ ನೆದರ್ಲೆಂಡ್ಸ್‌ ಹೊರಬೀಳುತ್ತಿತ್ತು. ನಮೀಬಿಯಾದ ಆಸೆಗೆ ಯುಎಇ ತಣ್ಣೀರೆರಚಿತು. ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 55 ರನ್ನುಗಳಿಂದ ಕೆಡವಿದ್ದಷ್ಟೇ ನಮೀಬಿಯಾದ ಸಾಧನೆ ಎನಿಸಿತು.

ಆಪತ್ಭಾಂಧವ ಮೆಂಡಿಸ್‌:

ಶ್ರೀಲಂಕಾ ಮೊದಲು ಬ್ಯಾಟಿಂಗ್‌ ನಡೆಸಿ 6 ವಿಕೆಟಿಗೆ 162 ರನ್‌ ಪೇರಿಸಿತು. ಜವಾಬಿತ್ತ ಡಚ್ಚರ ಪಡೆ 9 ವಿಕೆಟ್‌ ಕಳೆದುಕೊಂಡು 146 ರನ್‌ ಮಾಡಿ ಶರಣಾಯಿತು.

ಅಂತಿಮ ಓವರ್‌ ತನಕ ಕ್ರೀಸ್‌ ಆಕ್ರಮಿಸಕೊಂಡ ಆರಂಭಕಾರ ಕುಸಲ್‌ ಮೆಂಡಿಸ್‌ 44 ಎಸೆತಗಳಿಂದ 79 ರನ್‌ ಹೊಡೆದು ಲಂಕಾ ಪಾಲಿನ ಆಪತಾºಂಧವರಾದರು (5 ಬೌಂಡರಿ, 5 ಸಿಕ್ಸರ್‌).

ಚೇಸಿಂಗ್‌ ವೇಳೆ ನೆದರ್ಲೆಂಡ್ಸ್‌ ಓಪನರ್‌ ಮ್ಯಾಕ್ಸ್‌ ಒಡೌಡ್‌ ಅಜೇಯ 71 ರನ್‌ (53 ಎಸೆತ, 6 ಬೌಂಡರಿ, 3 ಸಿಕ್ಸರ್‌) ಮಾಡಿದರೂ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫ‌ಲರಾದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-6 ವಿಕೆಟಿಗೆ 162 (ಮೆಂಡಿಸ್‌ 79, ಅಸಲಂಕ 31, ಮೀಕೆರೆನ್‌ 25ಕ್ಕೆ 2, ಲೀಡ್‌ 31ಕ್ಕೆ 2). ನೆದರ್ಲೆಂಡ್ಸ್‌-9 ವಿಕೆಟಿಗೆ 146 (ಒಡೌಡ್‌ ಔಟಾಗದೆ 71, ಎಡ್ವರ್ಡ್ಸ್‌ 21, ಹಸರಂಗ 28ಕ್ಕೆ 3, ತೀಕ್ಷಣ 32ಕ್ಕೆ 2).

ಪಂದ್ಯಶ್ರೇಷ್ಠ: ಕುಸಲ್‌ ಮೆಂಡಿಸ್‌.

ನಮೀಬಿಯಾವನ್ನು ಹೊರದಬ್ಬಿದ ಯುಎಇ :

ಮೊದಲ ಎರಡೂ ಪಂದ್ಯಗಳನ್ನು ಸೋತ ಬಳಿಕ ಎದ್ದು ನಿಂತ ಯುಎಇ 7 ರನ್ನುಗಳಿಂದ ನಮೀಬಿಯಾವನ್ನು ಮಣಿಸಿತು. ಇದರಿಂದ ಯುಎಇಗೆ ಯಾವುದೇ ಲಾಭವಾಗಲಿಲ್ಲ, ಆದರೆ ಅದು ಸೂಪರ್‌-12 ಕನಸಿನಲ್ಲಿ ವಿಹರಿಸುತ್ತಿದ್ದ ನಮೀಬಿಯಾವನ್ನು ಕೂಟದಿಂದ ಹೊರದಬ್ಬಿತು.

ಯುಎಇ 3 ವಿಕೆಟ್‌ ನಷ್ಟಕ್ಕೆ 148 ರನ್‌ ಹೊಡೆದರೆ, ನಮೀಬಿಯಾ 8 ವಿಕೆಟಿಗೆ 141ರ ತನಕ ಬಂದು ಶರಣಾಯಿತು. ಕೊನೆಯಲ್ಲಿ ಡೇವಿಡ್‌ ವೀಸ್‌ (55) ಮತ್ತು ರುಬೆನ್‌ ಟ್ರಂಪಲ್‌ಮಾÂನ್‌ (ಅಜೇಯ 25) ಸಿಡಿದು ನಿಂತರೂ ಗೆಲುವು ಸ್ವಲ್ಪದರಲ್ಲೇ ಕೈಕೊಟ್ಟಿತು.

ಸಂಕ್ಷಿಪ್ತ ಸ್ಕೋರ್‌: ಯುಎಇ-3 ವಿಕೆಟಿಗೆ 148 (ಮುಹಮ್ಮದ್‌ ವಾಸಿಮ್‌ 50, ರಿಜ್ವಾನ್‌ ಔಟಾಗದೆ 43, ಬಾಸಿಲ್‌ ಹಮೀದ್‌ ಔಟಾಗದೆ 25, ಬೆನ್‌ ಶಿಕೊಂಗೊ 8ಕ್ಕೆ 1). ನಮೀಬಿಯಾ-8 ವಿಕೆಟಿಗೆ 141 (ವೀಸ್‌ 55, ಟ್ರಂಪಲ್‌ಮಾÂಬ್‌ ಔಟಾಗದೆ 25, ಬಾಸಿಮ್‌ ಹಮೀದ್‌ 17ಕ್ಕೆ 2, ಝಹೂರ್‌ ಖಾನ್‌ 20ಕ್ಕೆ 2). ಪಂದ್ಯಶ್ರೇಷ್ಠ: ಮುಹಮ್ಮದ್‌ ವಾಸೀಮ್‌.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.