ಪ್ರೊ ಕಬಡ್ಡಿ: ಬೆಂಗಾಲ್ಗೆ ಶರಣಾದ ತಲೈವಾಸ್
Team Udayavani, Aug 29, 2019, 10:20 PM IST
ಹೊಸದಿಲ್ಲಿ: ಕೆ. ಪ್ರಪಂಜನ್ (10 ಅಂಕ), ಮಣಿಂದರ್ ಸಿಂಗ್ (9 ಅಂಕ) ಜೋಡಿಯ ಪ್ರಚಂಡ ರೈಡಿಂಗ್ ಹಾಗೂ ರಿಂಕು ನರ್ವಾಲ್ (5 ಅಂಕ) ಅವರ ಅಬ್ಬರದ ಟ್ಯಾಕ್ಲಿಂಗ್ ನೆರವಿನಿಂದ ಪ್ರೊ ಕಬಡ್ಡಿ 7ನೇ ಆವೃತ್ತಿ ಹೊಸದಿಲ್ಲಿ ಚರಣದ ಗುರುವಾರದ ಏಕೈಕ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಾಲ್ ವಾರಿಯರ್ 35-26 ಅಂಕಗಳ ಗೆಲುವು ಸಾಧಿಸಿತು.
ಇಲ್ಲಿನ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್ ಆಟಗಾರರು ಬಿರುಸಿನ ಆಟ ಪ್ರದರ್ಶಿಸಿದರು. ಮತ್ತೂಂದು ಕಡೆಗೆ ತಮಿಳ್ ತಲೈವಾಸ್ ಪ್ರಬಲ ಹೋರಾಟ ಪ್ರದರ್ಶಿಸಿತಾದರೂ ಕೊನೆಯಲ್ಲಿ ಎಡವಟ್ಟು ಮಾಡಿಕೊಂಡು ಮುಗ್ಗರಿಸಿತು.
ತಲೈವಾಸ್ ಪರ ಅಜಯ್ ಠಾಕೂರ್ (11 ಅಂಕ) ಏಕಾಂಗಿ ಹೋರಾಟ ನಡೆಸಿದರು. ಶಬ್ಬೀರ್ ಬಾಪು (4 ಅಂಕ) ಸ್ವಲ್ಪಮಟ್ಟಿಗೆ ಮಿಂಚಿದರೆ, ಖ್ಯಾತ ಆಟಗಾರರಾದ ಮಂಜಿತ್ ಚಿಲ್ಲಾರ್ (3 ಅಂಕ) ಹಾಗೂ ರಾಹುಲ್ ಚೌಧರಿ (1 ಅಂಕ) ಭಾರೀ ವೈಫಲ್ಯ ಅನುಭವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos