ತಾಲಿಬ್ ತಂಡ ತಾಲಿಬಾನ್ ಆಯ್ತು!: ರಾಜಸ್ಥಾನದ ಕ್ರಿಕೆಟ್ನಲ್ಲಿ ಎಡವಟ್ಟು
Team Udayavani, Aug 28, 2021, 10:14 AM IST
ಜೈಪುರ: ಇದು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಜೆಸುರಾನಾ ಹಳ್ಳಿಯಲ್ಲಿ ನಡೆದ ಘಟನೆ. ಸ್ಥಳೀಯ ಕ್ರಿಕೆಟ್ ತಂಡವೊಂದರ ಹೆಸರನ್ನು ತಾಲಿಬ್ ಕ್ರಿಕೆಟ್ ಕ್ಲಬ್ ಎಂದು ಆ್ಯಪ್ನಲ್ಲಿ ಬರೆಯಲು ಹೋದಾಗ, ತಂತಾನೇ (ಆಟೋ ಕರೆಕ್ಟ್ ಆಯ್ಕೆ ಪ್ರಕಾರ) ತಾಲಿಬಾನ್ ಕ್ರಿಕೆಟ್ ಕ್ಲಬ್ ಎಂದು ಹೆಸರು ನಮೂದಾಗಿದೆ.
ಇದನ್ನು ಅಲ್ಲಿಯ ಬಲಪಂಥೀಯ ಸಂಘಟನೆಗಳು ಬಲವಾಗಿ ವಿರೋಧಿಸಿದ ಪರಿಣಾಮ, ತಂಡವನ್ನೇ ಅಮಾನತು ಮಾಡಲಾಗಿದೆ. ನಂತರ ಜಿಲ್ಲಾ ಪೊಲೀಸರು ಇದು ಅಚಾನಕ್ಕಾಗಿ ನಡೆದ ಘಟನೆ, ದುರುದ್ದೇಶವಿಲ್ಲ ಎಂದು ಖಚಿತಪಡಿಸಿದ್ದಾರೆ.
ಆಗಿದ್ದೇನು?: ದಿವಂಗತ ಸಮಾಜ ಸೇವಕರೊಬ್ಬರ ಹೆಸರಲ್ಲಿ “ಮಾರ್ಹಮ್ ಅಧ್ಯಕ್ಷ ಅಲ್ಲಾದಿನ್ ಸ್ಮತಿ ಕ್ರಿಕೆಟ್ ಪ್ರತಿಯೋಗಿತಾ’ ಜೈಸಲ್ಮೇರ್ನ ಜೆಸುರಾನಾದಲ್ಲಿ ನಡೆದಿತ್ತು. ಈ ಕೂಟಕ್ಕೆ ತಂಡಗಳ ಹೆಸರನ್ನು ಆನ್ಲೈನ್ ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಲಾಗಿತ್ತು. ಎಡವಟ್ಟಾಗಿದ್ದು ಇಲ್ಲೇ. ಚೌದ್ರಿಯ ಹಳ್ಳಿಯ ತಾಲಿಬ್ ಕ್ರಿಕೆಟ್ ಕ್ಲಬ್ ತಂಡದ ಹೆಸರನ್ನು ಬರೆಯುವಾಗ ಅದು ತಾಲಿಬಾನ್ ಎಂದು ಬದಲಾಗಿದೆ. ಇದು ಯಾರ ಗಮನಕ್ಕೂ ಬಂದಿಲ್ಲ.
ಇದನ್ನೂ ಓದಿ:ಪ್ಯಾರಾಲಂಪಿಕ್ಸ್: ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಭವಿನಾ ಪಟೇಲ್
ಆ.22ರಂದು ಡಬ್ಲಾ ತಂಡದೆದುರಿನ ಪಂದ್ಯದಲ್ಲಿ ತಾಲಿಬ್ ಗೆದ್ದಿತ್ತು.ಆಗ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯಲು ಹೋದಾಗ ತಂಡದ ಹೆಸರನ್ನು ತಾಲಿಬಾನ್ ಎಂದು ಕರೆಯಲಾಗಿತ್ತು. ಆಗಲೇ ಎಲ್ಲರಿಗೂ ಗೊತ್ತಾಗಿದ್ದು. ಇದರ ವಿರುದ್ಧ ಬಲವಾದ ಪ್ರತಿಭಟನೆ ನಡೆಯಿತು. ತಂಡದ ನಾಯಕ ಕಮಾಲ್ ಖಾನ್ ಪೊಲೀಸರಿಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಪೊಲೀಸರೂ ಅದನ್ನು ಮಾನ್ಯ ಮಾಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್