ಅಂತಿಮ T20 : ಮನ್ರೋ ಮಿಂಚು ; Team India ಟಾರ್ಗೆಟ್ 213
Team Udayavani, Feb 10, 2019, 8:41 AM IST
ಹ್ಯಾಮಿಲ್ಟನ್: ನ್ಯೂಝಿಲ್ಯಾಂಡ್ ವಿರುದ್ಧ ಅವರದೇ ನೆಲದಲ್ಲಿ ಟಿ20 ಸರಣಿಯನ್ನು ಗೆದ್ದು ಬೀಗಲು ಟೀಂ ಇಂಡಿಯಾಗೆ ಕಠಿಣ ಸವಾಲು ಲಭಿಸಿದೆ. ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಗೆಲುವಿಗೆ 213 ರನ್ನುಗಳ ಗುರಿ ನಿಗದಿಯಾಗಿದೆ. ಈ ಸವಾಲನ್ನು ನಮ್ಮ ಬ್ಯಾಟ್ಸ್ ಮನ್ ಗಳ ಯಶಸ್ವಿಯಾಗಿ ಬೆನ್ನತ್ತಿದ್ದೇ ಆದಲ್ಲಿ ಕಿವೀಸ್ ನೆಲದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ. ಆರಂಭಿಕ ಆಟಗಾರ ಕಾಲಿನ ಮನ್ರೋ ಅವರ ಜಬರ್ದಸ್ತ್ ಅರ್ಧಶತಕದ ನೆರವಿನಿಂದ ಕಿವೀಸ್ ಸ್ಪರ್ಧಾತ್ಮಕ ಮೊತ್ತ ಪೇರಿಸುವಂತಾಯಿತು. 40 ಎಸೆತಗಳಲ್ಲಿ 72 ರನ್ನುಗಳನ್ನು ಬಾರಿಸಿದ ಮನ್ರೋ ಅವರು ತಮ್ಮ ಈ ಬಿರುಸಿನ ಇನ್ನಿಂಗ್ಸ್ ನಲ್ಲಿ 5 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರೆ, 5 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿ ಮಿಂಚಿದರು.
ಈ ಬಾರಿ ಟಾಸ್ ಗೆಲ್ಲುವ ಅದೃಷ್ಟ ರೋಹಿತ್ ಶರ್ಮಾ ಪಾಲಾಯಿತು. ಟಾಸ್ ಗೆದ್ದ ಅವರು ಆತಿಥೇಯರಿಗೆ ಮೊದಲು ಬ್ಯಾಟಿಂಗ್ ಅವಕಾಶವನ್ನು ಬಿಟ್ಟುಕೊಟ್ಟರು. ಉತ್ತಮ ಪ್ರಾರಂಭ ಪಡೆದ ಕಿವೀಸ್ ಆರಂಭಿಕ ಆಟಗಾರರ ಭರವಸೆಯ ಆಟದ ನೆರವಿನಿಂದ ಮತ್ತು ಮಧ್ಯಮ ಕ್ರಮಾಂಕದ ಬಿರುಸಿನ ಆಟದ ನೆರವಿನಿಂದ ನಿಗದಿತ 20 ಓವರುಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 212 ರನ್ನುಗಳನ್ನು ಕಲೆಹಾಕಿತು.
ಕಿವೀಸ್ ಪರ ಆರಂಭಿಕ ಆಟಗಾರರಾದ ಲೂಯಿಸ್ ಸೀಫರ್ಟ್ (43) ಮತ್ತು ಕಾಲಿನ್ ಮನ್ರೋ (72) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಕಪ್ತಾನ ಕೇನ್ ವಿಲಿಯಮ್ಸನ್ 27 ರನ್ ಹೊಡೆದರು. ಕೊಲಿನ್ ಡಿ ಗ್ರ್ಯಾಂಡ್ ಹೋಮ್ ಅಂತಿಮ ಹಂತದಲ್ಲಿ ಬಿರುಸಿನ ಆಟವಾಡಿ ಕೇವಲ 16 ಎಸೆತಗಳಲ್ಲಿ 30 ರನ್ನುಗಳನ್ನು ಹೊಡೆದರು. ಇವರಿಗೆ ಮಿಶೆಲ್ (19) ಅವರು ಉತ್ತಮ ಬೆಂಬಲ ಒದಗಿಸಿದರು. ಕೊನೇ ಹಂತದಲ್ಲಿ ಬ್ಯಾಟಿಂಗ್ ಗೆ ಇಳಿದ ಅನುಭವಿ ರಾಸ್ ಟಯ್ಲರ್ ಕೇವಲ 7 ಎಸೆತಗಳಲ್ಲಿ 14 ರನ್ನುಗಳನ್ನು ಸಿಡಿಸಿ ತಂಡದ ಮೊತ್ತ ಏರಲು ಕಾರಣರಾದರು.
ಭಾರತದ ಬೌಲರ್ ಗಳ ಪ್ರದರ್ಶನ ಇಂದು ನಿರಾಶಾದಾಯಕವಾಗಿತ್ತು. ವೇಗಿಗಳ ಸಹಿತ ಎಲ್ಲಾ ಬೌಲರ್ ಗಳು ಇವತ್ತು ದುಬಾರಿಯಾದರು. ಸ್ಪಿನ್ನರ್ ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಖಲೀಲ್ ಅಹಮ್ಮದ್ ಮತ್ತು ಭುನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ