
ವಿಶ್ವಕಪ್ ಇರುವುದು ಮುಂದಿನ ವರ್ಷ, ಈಗಲೇ ಯೋಚಿಸಬೇಕಿಲ್ಲ: ನಾಯಕ ರೋಹಿತ್ ಶರ್ಮಾ
Team Udayavani, Dec 4, 2022, 10:27 AM IST

ಢಾಕಾ: ಮುಂದಿನ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಗ್ಗೆ ಇಷ್ಟು ಬೇಗನೇ ಯೋಚಿಸಬೇಕಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೂ ಮೊದಲು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿತ್, “ವಿಶ್ವಕಪ್ಗಾಗಿ ತಮ್ಮ ಯೋಜನೆಗಳ ಬಗ್ಗೆ ತನಗೆ ಮತ್ತು ಕೋಚ್ ರಾಹುಲ್ ದ್ರಾವಿಡ್ ಗೆ ಒಂದು ಲೆಕ್ಕಾಚಾರವಿದೆ ಎಂದರು.
“ಇದೀಗ ಬಾಂಗ್ಲಾದೇಶದಲ್ಲಿ ಸರಣಿ ಗೆಲ್ಲುವತ್ತ ಗಮನ ಹರಿಸಬೇಕಿದೆ. ನಾವು ಪ್ರತಿ ಬಾರಿ ಆಟ ಆಡುವಾಗಲೂ ಅದು ಭವಿಷ್ಯದಲ್ಲಿ ಬರಲಿರುವ ಯಾವುದೋ ಒಂದು ದೊಡ್ಡ ಕೂಟದ ತಯಾರಿಯಾಗಿರುತ್ತದೆ. ಆದರೆ ವಿಶ್ವಕಪ್ಗೆ ಇನ್ನೂ 8-9 ತಿಂಗಳುಗಳಿವೆ. ನಾವು ಈಗಲೇ ಅಷ್ಟು ಮುಂದಕ್ಕೆ ಯೋಚಿಸಲು ಸಾಧ್ಯವಿಲ್ಲ” ರೋಹಿತ್ ಹೇಳಿದ್ದಾರೆ.
ಇದನ್ನೂ ಓದಿ:ವಿಭಜನೆಯ ನಂತರ ಸನಾತನ ಧರ್ಮದ ಅನುಯಾಯಿಗಳು ಮಾತ್ರ ಉಳಿಯಬೇಕಿತ್ತು: ಗಿರಿರಾಜ್ ಸಿಂಗ್
“ನಾವು ತಂಡವಾಗಿ ಏನು ಮಾಡಬೇಕು, ನಾವು ಎಲ್ಲಿ ಸುಧಾರಿಸಬಹುದು ಎಂಬುದರ ಮೇಲೆ ನಾವು ಕಣ್ಣಿಡುತ್ತೇವೆ. ವಿಶ್ವಕಪ್ ಬಗ್ಗೆ ಹಲವು ವಿಷಯಗಳ ಬಗ್ಗೆ ಯೋಚಿಸಲು ಪ್ರಾರಂಭಿಸದಿರುವುದು ನಮಗೆ ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾವು ವಿಶ್ವಕಪ್ ಬರುವವರೆಗೆ ಉತ್ತಮ ಕ್ರಿಕೆಟ್ ಆಡುತ್ತೇವೆ. ಆದರೆ ಮೊದಲು, ನಾವು ಸರಣಿ ಗೆಲ್ಲುವತ್ತ ಗಮನ ಹರಿಸುತ್ತೇವೆ. ನಾವು ಒಂದೊಂದು ಪಂದ್ಯವನ್ನು ನೋಡುತ್ತಿದ್ದೇವೆ, ಆ ಆಟದಲ್ಲಿ ನಾವು ಹೇಗೆ ಚೆನ್ನಾಗಿ ಆಡಬಹುದು ಎಂದು ನೋಡುತ್ತಿದ್ದೇವೆ. ತುಂಬಾ ಮುಂದಕ್ಕೆ ಯೋಚಿಸುವುದು ಕೆಲವೊಮ್ಮೆ ಸಹಾಯ ಮಾಡುವುದಿಲ್ಲ” ಎಂದು ರೋಹಿತ್ ಶರ್ಮಾ ಹೇಳಿದರು.
ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಢಾಕಾದಲ್ಲಿ ನಡೆಯಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಿಲ್ ಶತಕದ ಕಮಾಲ್; ನ್ಯೂಜಿಲೆಂಡ್ ಗೆ ಸೋಲಿನ ಶಾಕ್ ನೀಡಿ ಸರಣಿ ಗೆದ್ದ ಟೀಮ್ ಇಂಡಿಯಾ

ಭಾರತಕ್ಕೆ ಬಂದ ಆಸ್ಟ್ರೇಲಿಯಾ ತಂಡ; ಉಸ್ಮಾನ್ ಖವಾಜಾಗೆ ಮತ್ತೆ ವೀಸಾ ಸಮಸ್ಯೆ

ವನಿತಾ ಪ್ರೀಮಿಯರ್ ಲೀಗ್; ಆಟಗಾರ್ತಿಯರ ಹರಾಜು ದಿನಾಂಕ ಮುಂದೂಡಿಕೆ

ಆಸೀಸ್ ವಿರುದ್ಧದ ಮೊದಲ ಟೆಸ್ಟ್ ನಿಂದ ಹೊರಬಿದ್ದ ಸ್ಟಾರ್ ಬ್ಯಾಟರ್: ಸೂರ್ಯಗೆ ಅವಕಾಶ ಸಾಧ್ಯತೆ

ಅಗ್ರ ಕ್ರಮಾಂಕ ಮಿಂಚಿದರೆ ಸರಣಿ ಒಲಿದೀತು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಗಿಲ್ ಶತಕದ ಕಮಾಲ್; ನ್ಯೂಜಿಲೆಂಡ್ ಗೆ ಸೋಲಿನ ಶಾಕ್ ನೀಡಿ ಸರಣಿ ಗೆದ್ದ ಟೀಮ್ ಇಂಡಿಯಾ

ಚಿನ್ನದ ಬ್ರೇಸ್ಲೆಟ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬ್ಲೂ ಫ್ಲ್ಯಾಗ್ ಸಿಬಂದಿ

ಗ್ರಾಚ್ಯುಟಿಗೆ ಒಪ್ಪಿಗೆ: ಧರಣಿ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು

ಶಾಲಾ ಮಕ್ಕಳ ಸಮವಸ್ತ್ರ: ಸರಕಾರದ ವಿರುದ್ಧ ಎಚ್ಡಿಕೆ ಕಿಡಿ

ರಾಜ್ಯ ಸರಕಾರದ ಕಮಿಷನ್ ಶೇ.80ಕ್ಕೆ: ಟ್ವೀಟ್ ಮೂಲಕ ಕುಟುಕಿದ ಕಾಂಗ್ರೆಸ್