ಪ್ರೊ ಕಬಡ್ಡಿ ಹಣಾಹಣಿ: ಯುಪಿ ಯೋಧಾಸ್-ಬೆಂಗಾಲ್ ವಾರಿಯರ್ ಟೈ
ತೆಲುಗು ಟೈಟಾನ್ಸ್ ವಿರುದ್ಧ ದಬಾಂಗ್ ಡೆಲ್ಲಿ ಗೆಲುವು
Team Udayavani, Nov 8, 2022, 10:42 PM IST
ಪುಣೆ: ನಿಕಟ ಸ್ಪರ್ಧೆ ಕಂಡ ಯುಪಿ ಯೋಧಾಸ್-ಬೆಂಗಾಲ್ ವಾರಿಯರ್ ನಡುವಿನ ಪ್ರೊ ಕಬಡ್ಡಿ ಹಣಾಹಣಿ 41-41 ಅಂಕಗಳ ಸಮಬಲದಲ್ಲಿ ಮುಗಿದಿದೆ.
ಕೊನೆಯ ಕೆಲವು ಸೆಕೆಂಡ್ಗಳ ನಾಟಕೀಯ ಆಟದಲ್ಲಿ ಪಂದ್ಯ ಏರಿಳಿತ ಕಾಣುತ್ತ ಹೋಯಿತು. ಯುಪಿ ಯೋಧಾಸ್ನ ರೋಹಿತ್ ಕೊನೆಯ ಕ್ಷಣದಲ್ಲಿ ರೈಡ್ ನಡೆಸಿ ಒಂದಂಕ ತಂದು, ಅಂಕ ವ್ಯತ್ಯಾಸವನ್ನು ಒಂದಕ್ಕೆ ತಂದು ನಿಲ್ಲಿಸಿದರು. ಆಗ ಪಂದ್ಯದ ಮುಕ್ತಾಯಕ್ಕೆ ಇನ್ನೂ 2 ಸೆಕೆಂಡ್ ಬಾಕಿ ಇದ್ದುದರಿಂದ ಅಂಪಾಯರ್ ಇನ್ನೊಂದು ರೈಡ್ಗೆ ಅವಕಾಶ ನೀಡಿದರು. ಬೆಂಗಾಲ್ ಪಾಲಿಗೆ ಇದು ಡು ಆರ್ ಡೈ ರೈಡ್ ಆಗಿತ್ತು. ಗೆಲ್ಲಲು ಅದು ಅಂಕ ಗಳಿಸುವುದು ಅನಿವಾರ್ಯವಾಗಿತ್ತು. ಸ್ವತಃ ಬೆಂಗಾಲ್ ನಾಯಕ ಮಣಿಂದರ್ ರೈಡ್ಗೆ
ಇಳಿದರೂ ಸುಮಿತ್ ಸಾಹಸ ಪ್ರದರ್ಶಿಸಿದರು; ಮಣಿಂದರ್ ಅವರನ್ನು ಅಂಕಣದಿಂದ ಹೊರತಳ್ಳುವ ಮೂಲಕ ಪಂದ್ಯವನ್ನು ಸಮಬಲದಲ್ಲಿ ಮುಗಿಸಿದರು.
ಬೆಂಗಾಲ್ ಪರ ಮಣಿಂದರ್ ಅತ್ಯಧಿಕ 18 ಅಂಕ ಗಳಿಸಿದರು. ಯೋಧಾಸ್ ಪರ ರೈಡರ್ ರೋಹಿತ್ ತೋಮರ್ 16 ಅಂಕ, ಪದೀìಪ್ ನರ್ವಾಲ್ 11 ಅಂಕ ಗಳಿಸಿದರು.
ದಬಾಂಗ್ ಡೆಲ್ಲಿ ಗೆಲುವು
ಮತ್ತೊಂದು ಪಂದ್ಯದಲ್ಲಿ ಡೆಲ್ಲಿ 40-33ರಿಂದ ಟೈಟಾನ್ಸ್ಗೆ ಸೋಲುಣಿಸಿತು. ಡೆಲ್ಲಿ ಜಯದಲ್ಲಿ ರೈಡರ್ ಆಶು ಮಲಿಕ್ ಪಾತ್ರ ಮಹತ್ವದ್ದಾಗಿತ್ತು (12 ಅಂಕ). ನಾಯಕ ನವೀನ್ ಕುಮಾರ್ 9 ಅಂಕ ಗಳಿಸಿದರು. ಟೈಟಾನ್ಸ್ ಸಿದ್ಧಾರ್ಥ್ ದೇಸಾಯಿ ಅವರನ್ನು ಹೆಚ್ಚು ಅವಲಂಬಿಸಿತು. ಅವರು 14 ಅಂಕ ತಂದು ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ