ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ


Team Udayavani, May 17, 2022, 11:13 PM IST

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಮುಂಬಯಿ: ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ನೂತನವಾಗಿ ಪ್ರಸ್ತುತಪಡಿಸಿದ “ಆರ್‌ಸಿಬಿ ಹಾಲ್‌ ಆಫ್ ಫೇಮ್‌’ ಗೌರವಕ್ಕೆ ಕ್ರಿಸ್‌ ಗೇಲ್‌ ಮತ್ತು ಎಬಿ ಡಿ ವಿಲಿಯರ್ ಆಯ್ಕೆಯಾಗಿದ್ದಾರೆ.

ಇವರಿಬ್ಬರೂ ವೀಡಿಯೋ ಕಾನ್ಫರೆನ್ಸ್‌ ಮೂಲಕ ಆರ್‌ಸಿಬಿಯೊಂದಿಗಿನ ತಮ್ಮ ನಂಟನ್ನು ಬಣ್ಣಿಸಿದರು. ಮುಂದಿನ ವರ್ಷ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆ ಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುವುದು.

ಹಾಲ್‌ ಆಫ್ ಫೇಮ್‌ ಪೂರ್ವಭಾವಿ ಸಮಾರಂಭದಲ್ಲಿ “ರೆಡ್‌ ಆರ್ಮಿ’ಯ ಸದಸ್ಯರೆಲ್ಲ ಪಾಲ್ಗೊಂಡಿದ್ದರು. ಮೊದಲು ವಿರಾಟ್‌ ಕೊಹ್ಲಿ, ಬಳಿಕ ತಂಡದ ಡೈರೆಕ್ಟರ್‌ ಆಫ್ ಕ್ರಿಕೆಟ್‌ ಮೈಕ್‌ ಹೆಸ್ಸನ್‌ ಸಮಾರಂಭವನ್ನು ಉದ್ದೇಶಿಸಿ ಮಾತಾ ಡಿದರು. ಬಳಿಕ ಪ್ರಶಸ್ತಿ ಪುರಸ್ಕೃತರಾದ ಗೇಲ್‌ ಮತ್ತು ಎಬಿಡಿ ಅವರಿಗೆ ಚಿನ್ನದ ತಟ್ಟೆಯ ಸ್ಮರಣಿಕೆಯನ್ನು ನೀಡಲಾ ಗುವುದು. ಇದರಲ್ಲಿ ಅವರ ಹೆಸರು ಹಾಗೂ ಜೆರ್ಸಿ ಸಂಖ್ಯೆ ಒಳಗೊಂಡಿದೆ.

ಗೌರವ ಸ್ವೀಕರಿಸಿ ಮಾತಾಡಿದ ಎಬಿ ಡಿ ವಿಲಿಯರ್ ತಮ್ಮ ಹಾಗೂ ಆರ್‌ಸಿಬಿ ತಂಡದೊಂದಿಗಿನ ಬಾಂಧವ್ಯವನ್ನು ಖುಷಿಯಿಂದ ಹಂಚಿಕೊಂಡರು. “ಇಡೀ ಆರ್‌ಸಿಬಿ ತಂಡ ಇಲ್ಲಿ ಸೇರಿದೆ. ನಿಜ ಹೇಳಬೇಕೆಂದರೆ, ನಾನು ಬಹಳ ಭಾವುಕನಾಗಿದ್ದೇನೆ. ಟಿವಿಯಲ್ಲಿ ನಿಮ್ಮ ಆಟವನ್ನು ನೋಡುತ್ತಲೇ ಇದ್ದೇನೆ. ಈ ವರ್ಷದ ಪ್ರದರ್ಶನ ಚೆನ್ನಾಗಿತ್ತು. ವಿರಾಟ್‌ ಕೊಹ್ಲಿ ಮಾತುಗಳು ಸ್ಫೂರ್ತಿದಾಯಕವಾಗಿದ್ದವು. ನನ್ನ ಪಾಲಿಗೆ ಇದೊಂದು ವಿಶೇಷ ಅನುಭವ…’ ಎಂದು ಎಬಿಡಿ ಹೇಳಿದರು.

ಆರ್‌ಸಿಬಿ ಹೃದಯಕ್ಕೆ ಹತ್ತಿರ
ಆರ್‌ಸಿಬಿ ಯಾವತ್ತೂ ನನ್ನ ಹೃದ ಯಕ್ಕೆ ಹತ್ತಿರವಾಗಿಯೇ ಇದೆ ಎಂದು ನುಡಿದವರು ಕ್ರಿಸ್‌ ಗೇಲ್‌.”ಆರ್‌ಸಿಬಿ ತಂಡದೊಂದಿಗೆ ನನ್ನ ನೆನಪುಗಳು ಸದಾ ಮಧುರ. ಸ್ಪೆಷಲ್‌ ಆಟಗಾರರು, ಸ್ಪೆಷಲ್‌ ತರಬೇತುದಾರರ ನಂಟು ನನ್ನದಾಗಿತ್ತು. ನಿನ್ಮೊಂದಿಗೆ ಇದ್ದೇ ಈ ಮಾತುಗಳನ್ನು ಆಡಬೇಕಿತ್ತು. ಎಬಿಡಿ ಹೇಳಿದಂತೆ ನನ್ನ ಪಾಲಿಗೆ ಇದೊಂದು ಭಾವುಕ ಗಳಿಗೆ’ ಎಂದು ಕ್ರಿಸ್‌ ಗೇಲ್‌ ಹೇಳಿದರು.

ಎಬಿಡಿ ಮತ್ತು ಗೇಲ್‌ ಐಪಿಎಲ್‌ ಆಡಿದ ಇಬ್ಬರು ಲೆಜೆಂಡ್ರಿ ಕ್ರಿಕೆಟಿಗರು. ಇಬ್ಬರೂ ಆರ್‌ಸಿಬಿ ಪರ ಏಕಕಾಲದಲ್ಲಿ ಆಡಿದ್ದು ವಿಶೇಷ.

ಎಬಿಡಿ 184 ಐಪಿಎಲ್‌ ಪಂದ್ಯ ಗಳನ್ನಾಡಿದ್ದು, 5,162 ರನ್‌ ಬಾರಿಸಿದ್ದಾರೆ. 3 ಶತಕ ಹಾಗೂ 40 ಅರ್ಧ ಶತಕಗಳನ್ನು ಇದು ಒಳಗೊಂಡಿದೆ. ಎಡಗೈ ಡ್ಯಾಶರ್‌ ಗೇಲ್‌ 142 ಪಂದ್ಯ ಆಡಿದ್ದಾರೆ. ಬಾರಿಸಿದ್ದು 4,965 ರನ್‌. 6 ಶತಕ, 31 ಅರ್ಧ ಶತಕಗಳೊಂದಿಗೆ ಐಪಿಎಲ್‌ನಲ್ಲಿ ಮೆರೆದಾಡಿದ್ದಾರೆ.

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.