‘ನಾನು ವಿಫಲ ನಾಯಕನಂತೆ..’ ಐಸಿಸಿ ಟ್ರೋಫಿ ಗೆಲ್ಲದ ಬಗ್ಗೆ ವಿರಾಟ್ ಮುಕ್ತ ಮಾತು
Team Udayavani, Feb 25, 2023, 3:41 PM IST
ಮುಂಬೈ: “ಪಂದ್ಯಾವಳಿಗಳನ್ನು ಆಡುವುದು ಗೆಲ್ಲಲೆಂದು. ನಾನು ನಾಯಕನಾಗಿದ್ದ 2017 ಚಾಂಪಿಯನ್ಸ್ ಟ್ರೋಫಿ ಫೈನಲ್, 2019 ವಿಶ್ವಕಪ್ ಸೆಮಿಫೈನಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ವರೆಗೆ ತಲುಪಿದ್ದೇವೆ. ಈ ಮೂರು ಐಸಿಸಿ ಪಂದ್ಯಾವಳಿಗಳ ಬಳಿಕವೂ ನನ್ನನ್ನು ವಿಫಲ ನಾಯಕ ಎಂದು ಪರಿಗಣಿಸಲಾಗಿದೆ” ಇದು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಮಾತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಡ್ ಕಾಸ್ಟ್ ನಲ್ಲಿ ಮಾತನಾಡಿದ ವಿರಾಟ್, ಐಸಿಸಿ ಟ್ರೋಫಿ ಗೆಲ್ಲದ ಬಗ್ಗೆ ಮಾತನಾಡಿದರು.
ಟೀಕೆಗಳು ಯಾವುದೇ ಹಂತದಲ್ಲೂ ತನ್ನನ್ನು ತಾನೇ ಜಡ್ಜ್ ಮಾಡುವಂತೆ ಮಾಡಲಿಲ್ಲ. ತನ್ನ ಅಡಿಯಲ್ಲಿ ಬಂದ ಸಾಂಸ್ಕೃತಿಕ ಬದಲಾವಣೆಯ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ವಿರಾಟ್ ಹೇಳಿದರು.
ಇದನ್ನೂ ಓದಿ:ಔರಂಗಾಬಾದ್ ಮತ್ತು ಒಸ್ಮಾನಾಬಾದ್ ನಗರಗಳ ಹೆಸರು ಬದಲಿಸಲು ಕೇಂದ್ರ ಒಪ್ಪಿಗೆ…ಹೊಸ ಹೆಸರೇನು?
“ನಾನು ಆ ದೃಷ್ಟಿಕೋನದಿಂದ ಯಾವತ್ತೂ ನನ್ನನ್ನು ನಾನು ಜಡ್ಜ್ ಮಾಡಿಲ್ಲ. ನಾವು ತಂಡವಾಗಿ ಸಾಧಿಸಿರುವುದು ಮತ್ತು ಸಾಂಸ್ಕೃತಿಕ ಬದಲಾವಣೆಯು ನನಗೆ ಯಾವತ್ತೂ ಹೆಮ್ಮೆಯ ವಿಚಾರ. ಒಂದು ಟೂರ್ನಮೆಂಟ್ ಕೆಲಸ ಸಮಯ ಮಾತ್ರ ಇರುತ್ತದೆ. ಆದರೆ ಒಂದು ಸಂಸ್ಕೃತಿಯು ದೀರ್ಘಕಾಲದವರೆಗೆ ನಡೆಯುತ್ತದೆ. ಅದಕ್ಕಾಗಿ ನಿಮಗೆ ಸ್ಥಿರತೆ ಬೇಕು” ಎಂದು ವಿರಾಟ್ ಹೇಳಿಕೊಂಡಿದ್ದಾರೆ.
“ನಾನು ಆಟಗಾರನಾಗಿ ಐಸಿಸಿ ಟ್ರೋಫಿ ಗೆದ್ದುಕೊಂಡಿದ್ದೇನೆ. ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದೇನೆ. ಐದು ಟೆಸ್ಟ್ ಪಂದ್ಯ ಗೆದ್ದ ತಂಡದ ಸದಸ್ಯನಾಗಿದ್ದೆ. ಈ ದಿಕ್ಕಿನಲ್ಲಿ ನೀವು ಯೋಚಿಸಿದರೆ, ವಿಶ್ವಕಪ್ ಗೆಲ್ಲದೇ ಇರುವ ಅದೆಷ್ಟೋ ಆಟಗಾರರಿದ್ದಾರೆ” ಎಂದು ದ್ಯಾನಿಶ್ ಸೇಠ್ ಜತೆ ಮಾತನಾಡುತ್ತಾ ವಿರಾಟ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ