ವಿಡಿಯೋ: ಮತ್ತೆ ತಾಳ್ಮೆ ಕಳೆದುಕೊಂಡ ಶಕಿಬ್; ಜನರ ದಂಡಿನ ನಡುವೆಯೇ ಅಭಿಮಾನಿಗೆ ಹಲ್ಲೆ
Team Udayavani, Mar 11, 2023, 11:17 AM IST
ಢಾಕಾ: ಬಾಂಗ್ಲಾದೇಶದ ಟೆಸ್ಟ್ ಹಾಗೂ ಟಿ-20 ತಂಡದ ನಾಯಕ ಶಕಿಬ್ ಅಲ್ ಹಸನ್ ಮತ್ತೆ ತಮ್ಮ ತಾಳ್ಮೆಯನ್ನು ಕಳೆದುಕೊಂಡ ಘಟನೆ ಚಟ್ಟೋಗ್ರಾಮ್ನಲ್ಲಿ ನಡೆದಿದೆ.
ಮಾರ್ಚ್ 9 ರಂದು ಚಟ್ಟೋಗ್ರಾಮ್ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಗೆದ್ದ ಬಳಿಕ ಶಕಿಬ್ ಅಲ್ ಹಸನ್ ಕೆಲ ಸಮಯದ ಬಳಿಕ ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ. ಈ ವೇಳೆ ಶಕಿಬ್ ಸಾಗುವ ಮಾರ್ಗದಲ್ಲಿ ಅನೇಕ ಕ್ರೀಡಾಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ.
ಸಾಕಷ್ಟು ಭದ್ರತೆ ಇದ್ದರೂ ಶಕಿಬ್ ಅವರಿಗೆ ಅಭಿಮಾನಿಗಳ ದಂಡಿನ ನಡುವೆ ಸಾಗಿ ಬರಲು ಕಷ್ಟವಾಗುತ್ತಿತ್ತು. ಕಾರಿನ ಬಳಿ ಬರುವಾಗ ಅಭಿಮಾನಿಯೊಬ್ಬ ಶಕಿಬ್ ಅವರ ಕ್ಯಾಪ್ ತೆಗೆಯಲು ಯತ್ನಿಸಿದ್ದಾನೆ. ಇದಕ್ಕೆ ಗರಂ ಆದ ಶಕಿಬ್ ಜನರ ದಂಡಿನ ನಡುವೆಯೇ ಅಭಿಮಾನಿಗೆ ಕ್ಯಾಪ್ ನಿಂದಲೇ ಎರಡು – ಮೂರು ಬಾರಿ ಹಲ್ಲೆಗೈದಿದ್ದಾರೆ.
ಶಕಿಬ್ ಅವರ ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಶಕಿಬ್ ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲಲ್ಲ 2021 ರಲ್ಲಿ ಢಾಕಾ ಪ್ರಿಮಿಯರ್ ಲೀಗ್ ವೇಳೆ ಅಂಪೈರ್ ಅವರೊಂದಿಗೆ ಶಕಿಬ್ ವಾಗ್ವಾದಕ್ಕೆ ಇಳಿದು ವಿಕೆಟ್ ನ್ನು ಕಾಲಿನಿಂದು ಒದ್ದು, ಕಿತ್ತು ಬಿಸಾಕಿದ್ದರು. 2019 ರಲ್ಲಿ ಫಿಕ್ಸಿಂಗ್ ನಡೆದ ವರದಿಯನ್ನು ಹೇಳದ ಕಾರಣ ಐಸಿಸಿನಿಂದ ಶಕಿಬ್ 2 ವರ್ಷ ಬ್ಯಾನ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ