ಪಂತ್ ಬದಲಿಗೆ ಟೆಸ್ಟ್ ವಿಕೆಟ್ ಕೀಪರ್ ಯಾರು? ರವಿ ಶಾಸ್ತ್ರಿ ಹೇಳುವುದೇನು
Team Udayavani, Feb 6, 2023, 6:18 PM IST
ಮುಂಬೈ: ಕೆಲವೇ ದಿನಗಳಲ್ಲಿ ಬಹುನಿರೀಕ್ಷಿತ ಬಾರ್ಡರ್- ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭವಾಗಲಿದೆ. ಆದರೆ ಇತ್ತೀಚಿನ ಎರಡು ಬಾರ್ಡರ್- ಗಾವಸ್ಕರ್ ಸರಣಿಯಲ್ಲಿ ಭಾರತದ ಪರ ಮಿಂಚಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಭಾರತದ ಸೇವೆಗೆ ಲಭ್ಯರಾಗುತ್ತಿಲ್ಲ. ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಪಂತ್ ಗಾಯಗೊಂಡಿದ್ದು, ಇನ್ನು ಕೆಲವು ತಿಂಗಳು ಅವರು ಕ್ರಿಕೆಟ್ ಆಡುವುದು ಕಷ್ಟ ಸಾಧ್ಯವಾಗಿದೆ.
ಈ ಬಾರಿಯ ಸರಣಿಯಲ್ಲಿ ಭಾರತ ತಂಡದಲ್ಲಿ ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಆದರೆ ಆಡುವ ಬಳಗದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎನ್ನುವುದು ಖಚಿತವಾಗಿಲ್ಲ.
ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ಗೆ ಮೊದಲು ಭಾರತದ ಆಡುವ ಬಳಗದಲ್ಲಿ ಉತ್ತಮ ಕ್ವಾಲಿಟಿಯ ವಿಕೆಟ್ ಕೀಪರ್ ಆಡಬೇಕು ಎಂದಿದ್ದಾರೆ.
ಇದನ್ನೂ ಓದಿ:ಬುಗಾಟ್ಟಿಚೇರಾನ್ ಪ್ರೊಫಿಲೀ ಕಾರು ಬರೋಬ್ಬರಿ 88.23 ಕೋಟಿ ರೂಪಾಯಿಗಳಿಗೆ ಹರಾಜು
ಸರಣಿಯಲ್ಲಿ ಪಿಚ್ ನೋಡಿ ಕೀಪರ್ ಆಯ್ಕೆ ಮಾಡಬೇಕು. ಒಂದು ವೇಳೆ ಸ್ಪಿನ್ ಗೆ ಅನುಕೂಲವಾಗುವ ಪಿಚ್ ಇದ್ದರೆ ಆಗ ಉತ್ತಮ ವಿಕೆಟ್ ಕೀಪರ್ ಗೆ ಅವಕಾಶ ನೀಡಬೇಕು ಎಂದು ಶಾಸ್ತ್ರಿ ಹೇಳಿದರು.
“ಉತ್ತಮ ಕೀಪರ್ ಏಕೆಂದರೆ ರವೀಂದ್ರ ಜಡೇಜಾ, ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್ ಅವರಂತಹ ಹುಡುಗರಿಗೆ ಸ್ಟಂಪ್ ಗಳ ಹಿಂದೆ ಉತ್ತಮ ಕೀಪರ್ ಅಗತ್ಯವಿರುತ್ತದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟಿ20 ವಿಶ್ವಕಪ್ ವಿಜೇತ ತಂಡದೊಂದಿಗೆ ಕ್ರಿಕೆಟ್ ಆಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್; ವಿಡಿಯೋ
ವೃತ್ತಿಜೀವನದ 800ನೇ ಗೋಲು ಗಳಿಸಿದ ಲಿಯೋನೆಲ್ ಮೆಸ್ಸಿ; ವಿಡಿಯೋ ನೋಡಿ
ಪಾಕಿಸ್ಥಾನದಲ್ಲೇ ನಡೆಯಲಿದೆ ಏಷ್ಯಾಕಪ್ ಕೂಟ; ಭಾರತಕ್ಕೆ ವಿಶೇಷ ವ್ಯವಸ್ಥೆ?
ಮಹಿಳಾ ಪ್ರೀಮಿಯರ್ ಲೀಗ್: ಇಂದು ಪ್ಲೇಆಫ್- ಮುಂಬೈಗೆ ಯುಪಿ ಎದುರಾಳಿ
ಐಪಿಎಲ್, ವಿಶ್ವಕಪ್ಗೆ ಶ್ರೇಯಸ್ ಐಯ್ಯರ್ ಇಲ್ಲ
MUST WATCH
ಹೊಸ ಸೇರ್ಪಡೆ
ಝಾಕಿರ್ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ
‘ಪ್ರಣಯಂ’ ಹಾಡು ಬಂತು; ಸೋನು ನಿಗಂ ಕಂಠಸಿರಿಯಲ್ಲಿ ‘ಮಳೆಗಾಲ ಬಂತು ಸನಿಹ’
ಮಂಗಳೂರು: ಪೊಲೀಸರಿಂದ 11 ಕೆಜಿ ಗಾಂಜಾ ಸಹಿತ ಮಾದಕ ವಸ್ತು ನಾಶ
ಕೇಂದ್ರ ಸರಕಾರದಿಂದ ಉತ್ತರ ಕನ್ನಡ ಜಿಲ್ಲೆಗೆ 232 ಕೋ.ರೂ. ಅನುದಾನ
ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!