ಸುಂದರ ಸ್ವಪ್ನದಂತೆ ಸಾಗಿತು: ಹರ್ಮನ್ಪ್ರೀತ್ ಕೌರ್
ವನಿತಾ ಪ್ರೀಮಿಯರ್ ಲೀಗ್
Team Udayavani, Mar 28, 2023, 6:48 AM IST
ಮುಂಬಯಿ: “ಇದೊಂದು ಕನಸು… ಎಲ್ಲವೂ ಸುಂದರ ಸ್ವಪ್ನದಂತೆ ಮುಗಿದು ಹೋಯಿತು’ ಎಂಬುದಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟಕ್ಕೇರಿಸಿದ ಯಶಸ್ವಿ ನಾಯಕಿ ಹರ್ಮನ್ಪ್ರೀತ್ ಕೌರ್ ಪ್ರತಿಕ್ರಿಯಿಸಿದ್ದಾರೆ.
“ಇಂಥದೊಂದು ಪಂದ್ಯಾವಳಿಗಾಗಿ, ಈ ಒಂದು ಕ್ಷಣಕ್ಕಾಗಿ ನಾವು ಅದೆಷ್ಟೋ ವರ್ಷಗಳಿಂದ ಕಾಯುತ್ತಿದ್ದೆವು. ಪಂದ್ಯಾ ವಳಿಯನ್ನು ನಾವೆಲ್ಲ ಬಹಳಷ್ಟು ಆನಂದಿ ಸಿದೆವು, ಆಸ್ವಾದಿಸಿದೆವು. ಡ್ರೆಸ್ಸಿಂಗ್ ರೂಮ್ ವಾತಾವರಣವಂತೂ ಅತ್ಯಂತ ಸಂಭ್ರಮದಿಂದ ಕೂಡಿತ್ತು. ನಮ್ಮೆಲ್ಲರಿಗೂ ಇದೊಂದು ಕನಸಿನಂತೆ ಕಂಡಿತು…’ ಎಂಬುದಾಗಿ ಕೌರ್ ಹೇಳಿದರು.
“ವನಿತಾ ಐಪಿಎಲ್ ಪಂದ್ಯಾವಳಿ ಯಾವಾಗ ಎಂದು ಎಲ್ಲರೂ ಕಾತರದಿಂದ ಕೇಳುತ್ತಿದ್ದರು. ಅದೀಗ ಗರಿಗೆದರಿದೆ. ನಮಗಿದು ಬಹಳ ಖುಷಿ ಹಾಗೂ ಹೆಮ್ಮೆಯ ಸಂಗತಿ’ ಎಂದರು.
ಫೈನಲ್ ಪಂದ್ಯದ ಕುರಿತು ಪ್ರತಿಕ್ರಿಯಿಸಿದ ಹರ್ಮನ್ಪ್ರೀತ್ ಕೌರ್, “132 ರನ್ ಚೇಸಿಂಗ್ ವೇಳೆ ನಾವು ಆರಂಭಿಕ ಆಘಾತಕ್ಕೇನೋ ಸಿಲುಕಿದೆವು. ಆದರೆ ನಮ್ಮ ಬ್ಯಾಟಿಂಗ್ ಲೈನ್ಅಪ್ ಬಲಿಷ್ಠವಾಗಿತ್ತು. ಹೀಗಾಗಿ ಗೆಲುವಿನ ಬಗ್ಗೆ ನಂಬಿಕೆ ಇತ್ತು. ತಂಡವಾಗಿ ನಮ್ಮ ಸಾಧನೆ ಅಮೋಘವಾಗಿತ್ತು. ಧನಾತ್ಮಕ ಆಲೋಚನೆಗಳೇ ನಮ್ಮ ಯಶಸ್ಸಿನ ಮೂಲ’ ಎಂದರು.
“ಕೊನೆಯ 3-4 ಓವರ್ಗಳಲ್ಲಿ ನಾವು ಹೆಚ್ಚು ರನ್ ಬಿಟ್ಟುಕೊಟ್ಟೆವು. ಆದರೆ ಇದರಿಂದ ಪಂದ್ಯದ ಆಸಕ್ತಿ ಹೆಚ್ಚಿತು. ಟ್ರೋಫಿಯನ್ನು ಎತ್ತಿ ಹಿಡಿಯುವುದೆಂದರೆ ಅದೊಂದು ಪರಿಪೂರ್ಣ ಸಾಧನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ