![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
Women’s T20: ಇಂಗ್ಲೆಂಡ್ ವಿರುದ್ಧ ಸರಣಿ ಸೋತ ಭಾರತ
Team Udayavani, Dec 9, 2023, 10:29 PM IST
![1-sadsdsad](https://www.udayavani.com/wp-content/uploads/2023/12/1-sadsdsad-3-620x360.jpg)
ಮುಂಬಯಿ: ಶೋಚನೀಯ ಬ್ಯಾಟಿಂಗ್ ನಡೆಸಿದ ಭಾರತದ ವನಿತೆಯರು ಇಂಗ್ಲೆಂಡ್ ಎದುರಿನ ಟಿ20 ಸರಣಿಯನ್ನು ಕಳೆದುಕೊಂಡು ನಿರಾಸೆ ಮೂಡಿಸಿದ್ದಾರೆ. ಶನಿವಾರದ 2ನೇ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್ಗಳ ಜಯ ಸಾಧಿಸಿ 2-0 ಮುನ್ನಡೆಗೈದಿತು.
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ 16.2 ಓವರ್ಗಳಲ್ಲಿ 80 ರನ್ನಿಗೆ ಕುಸಿದರೆ, ಇಂಗ್ಲೆಂಡ್ 11.2 ಓವರ್ಗಳಲ್ಲಿ 6 ವಿಕೆಟಿಗೆ 82 ರನ್ ಮಾಡಿತು. ಇಂಗ್ಲೆಂಡ್ ಸಾಂ ಕ ಬೌಲಿಂಗ್ ಮೂಲಕ ಯಶಸ್ಸು ಕಂಡಿತು. ಎಲ್ಲ 6 ಮಂದಿ ಬೌಲರ್ ಸೇರಿ ಭಾರತದ ಮೇಲೆರಗಿದರು. ಎರಡಂಕೆಯ ಗಡಿ ತಲುಪಿದ್ದು ಇಬ್ಬರು ಮಾತ್ರ. ಜೆಮಿಮಾ ರೋಡ್ರಿಗಸ್ 30 ಮತ್ತು ಸ್ಮತಿ ಮಂಧನಾ 10 ರನ್ ಗಳಿಸಿದರು. ಶಫಾಲಿ ಮತ್ತು ದೀಪ್ತಿ ಖಾತೆಯನ್ನೇ ತೆರೆಯಲಿಲ್ಲ.
ಇಂಗ್ಲೆಂಡ್ಗೆ ರೇಣುಕಾ ಸಿಂಗ್ ಮತ್ತೆ ಒಂದೇ ಓವರ್ನಲ್ಲಿ ಅವಳಿ ಆಘಾತವಿಕ್ಕಿದರೂ ಪ್ರಯೋಜನವಾಗಲಿಲ್ಲ. ಅಲೈಸ್ ಕ್ಯಾಪ್ಸಿ 25 ಮತ್ತು ನ್ಯಾಟ್ ಸ್ಕಿವರ್ ಬ್ರಂಟ್ 16 ರನ್ ಮಾಡಿ ತಂಡವನ್ನು ಆಧರಿಸಿದರು.
ದೀಪ್ತಿ ಶರ್ಮ ಕೂಡ 2 ವಿಕೆಟ್ ಉರುಳಿಸಿದರು. ಇದು ದೀಪ್ತಿ ಅವರ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಈ ಸಂದರ್ಭದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ವಿಶೇಷ ಕ್ಯಾಪ್ ಒಂದನ್ನು ನೀಡಿ ದೀಪ್ತಿ ಅವರನ್ನು ಗೌರವಿಸಿದರು.
ಈ ಪಂದ್ಯಕ್ಕಾಗಿ ಭಾರತ ಕನಿಕಾ ಅಹುಜಾ ಬದಲು ಸೀಮರ್ ತಿತಾಸ್ ಸಾಧು ಅವರನ್ನು ಆಡಿಸಿತು. ಇಂಗ್ಲೆಂಡ್ ಮಹಿಕಾ ಗೌರ್ ಬದಲು ಚಾರ್ಲಿ ಡೀನ್ ಅವರಿಗೆ ಅವಕಾಶ ನೀಡಿತು.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.