World cup cricket ವೈಭವ ವಿಶ್ವಕಪ್‌ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದ ಆಸ್ಟ್ರೇಲಿಯ

ಬಾಬ್‌ ವೂಲ್ಮರ್‌ ನಿಗೂಢ ಸಾವು ಕೆರಿಬಿಯನ್‌ ವಿಶ್ವಕಪ್‌ಗೆ ಕಪ್ಪುಚುಕ್ಕಿಯಾಗಿ ಪರಿಣಮಿಸಿತು

Team Udayavani, Oct 1, 2023, 7:00 AM IST

1-asdasda

ವಿಶ್ವಕಪ್‌ ಇತಿಹಾಸದ ಅತ್ಯಂತ ನೀರಸ ಹಾಗೂ ಸೂಪರ್‌ ಫ್ಲಾಪ್‌ ಪಂದ್ಯಾವಳಿ ಯಾವುದು ಎಂಬ ಪ್ರಶ್ನೆಗೆ “2007ರ ವೆಸ್ಟ್‌ ಇಂಡೀಸ್‌ ವರ್ಲ್ಡ್ ಕಪ್‌’ ಎಂಬ ಉತ್ತರ ಥಟ್ಟನೆ ಹೊರಹೊಮ್ಮುತ್ತದೆ. ಇದು 16 ತಂಡಗಳು ಭಾಗವಹಿಸಿದ ಅತೀ ದೊಡ್ಡ ವಿಶ್ವಕಪ್‌ ಆದರೂ ಇಲ್ಲಿನ ಮಾದರಿ ಅಷ್ಟೇ ಕೆಟ್ಟದ್ದಾಗಿತ್ತು. ಲೀಗ್‌ ಹಂತದಲ್ಲಿ ಮೊದಲ ಪಂದ್ಯ ಸೋತೊಡನೆಯೇ ತಂಡವೊಂದು ಹೊರಬೀಳುವುದು ಅದ್ಯಾವ ಸೀಮೆಯ ಮಾದರಿ ಎಂಬ ಟೀಕೆ ಎಲ್ಲ ದಿಕ್ಕುಗಳಿಂದಲೂ ವ್ಯಕ್ತವಾಯಿತು. ಇದಕ್ಕೆ ಬಲಿಪಶುವಾದ ತಂಡಗಳೆಂದರೆ ಭಾರತ ಮತ್ತು ಪಾಕಿಸ್ಥಾನ. ಸಾಲದ್ದಕ್ಕೆ ಫೈನಲ್‌ ಪಂದ್ಯ ಕಗ್ಗತ್ತಲಲ್ಲಿ ನಡೆದು ಅಲ್ಲಿಯೂ ಐಸಿಸಿ ಉಗಿಸಿಕೊಂಡಿತು!

ಇಲ್ಲಿ ಟೆಸ್ಟ್‌ ಮಾನ್ಯತೆ ಪಡೆದ 10 ತಂಡಗಳು ಎಂದಿನಂತೆ ನೇರ ಪ್ರವೇಶ ಪಡೆದವು. ಉಳಿದ 6 ತಂಡಗಳನ್ನು 2005ರ ಐಸಿಸಿ ಟ್ರೋಫಿ ಪಂದ್ಯಾವಳಿಯ ಮೂಲಕ ಆರಿಸಲಾಯಿತು. ಬರ್ಮುಡ ಮತ್ತು ಐರ್ಲೆಂಡ್‌ ಮೊದಲ ಸಲ ವಿಶ್ವಕಪ್‌ ಆಡಲಿಳಿದವು. ಉಳಿದ 4 ತಂಡಗಳೆಂದರೆ ಕೀನ್ಯಾ, ಕೆನಡಾ, ನೆದರ್ಲೆಂಡ್ಸ್‌ ಮತ್ತು ಸ್ಕಾಟ್ಲೆಂಡ್‌.

16 ತಂಡಗಳನ್ನು 4 ವಿಭಾಗಗಳಾಗಿ ವಿಂಗಡಿಸಿದ್ದೇ ದೊಡ್ಡ ಎಡವಟ್ಟಾಗಿ ಕಂಡಿತು. ಇಲ್ಲಿ ಅಗ್ರ ಸ್ಥಾನ ಪಡೆದ ತಂಡಗಳೆರಡು ಸೂಪರ್‌-8 ಹಂತಕ್ಕೆ ಪ್ರವೇಶ ಪಡೆದವು. “ಬಿ’ ವಿಭಾಗದಲ್ಲಿದ್ದ ಭಾರತವಿಲ್ಲಿ ಮರ್ಮಾಘಾತ ಅನುಭವಿಸಿತು. ರಾಹುಲ್‌ ದ್ರಾವಿಡ್‌ ಪಡೆ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕೈಯಲ್ಲಿ ಸೋತು ಲೀಗ್‌ ಹಂತದಲ್ಲೇ ಹೊರಬಿತ್ತು. ಗೆದ್ದದ್ದು ಬರ್ಮುಡ ವಿರುದ್ಧ ಮಾತ್ರ. “ಡಿ’ ವಿಭಾಗದಲ್ಲಿದ್ದ ಪಾಕಿಸ್ಥಾನ ಕೂಡ ಇಂಥದೇ ಅವಸ್ಥೆಗೆ ಸಿಲುಕಿತು. ಹೀಗೆ ಬಲಿಷ್ಠ ಹಾಗೂ ನೆಚ್ಚಿನ ತಂಡಗಳೆರಡನ್ನೂ ಬಹಳ ಬೇಗ ಕಳೆದುಕೊಂಡ ಕಾರಣ ಕೂಟವೇ ಕಳೆಗುಂದಿತು.

ಇದಕ್ಕೂ ಮಿಗಿಲಾದ ದುರಂತವೆಂದರೆ, ಈ ಸೋಲಿನ ಬಳಿಕ ಪಾಕಿಸ್ಥಾನದ ಕೋಚ್‌ ಬಾಬ್‌ ವೂಲ್ಮರ್‌ ಕಿಂಗ್‌ಸ್ಟನ್‌ನಲ್ಲಿ ನಿಗೂಢ ಸಾವನ್ನಪ್ಪಿದ್ದು. ಇದು ಕೂಡ ಕೆರಿಬಿಯನ್‌ ವಿಶ್ವಕಪ್‌ಗೆ ಕಪ್ಪುಚುಕ್ಕಿಯಾಗಿ ಪರಿಣಮಿಸಿತು.

ಆಸ್ಟ್ರೇಲಿಯಕ್ಕೆ ಹ್ಯಾಟ್ರಿಕ್‌ ಪ್ರಶಸ್ತಿ
ಸೂಪರ್‌-8 ಹಂತ ಪ್ರವೇಶಿಸಿದ ತಂಡಗಳೆಂದರೆ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌ ಮತ್ತು ಐರ್ಲೆಂಡ್‌.

ಸೆಮಿಫೈನಲ್‌ ಅದೃಷ್ಟ ಸಂಪಾದಿಸಿದ 4 ತಂಡಗಳೆಂದರೆ ಆಸ್ಟ್ರೇಲಿಯ, ಶ್ರೀಲಂಕಾ, ನ್ಯೂಜಿಲ್ಯಾಂಡ್‌ ಮತ್ತು ದಕ್ಷಿಣ ಆಫ್ರಿಕಾ. ಇಲ್ಲಿ ಆಸ್ಟ್ರೇಲಿಯ 7 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಶ್ರೀಲಂಕಾ 81 ರನ್ನುಗಳಿಂದ ನ್ಯೂಜಿಲ್ಯಾಂಡ್‌ಗೆ ಆಘಾತವಿಕ್ಕಿತು.

ಕಳೆದೆರಡು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಮತ್ತು ಶ್ರೀಲಂಕಾ ಫೈನಲ್‌ನಲ್ಲಿ ಎದುರಾದವು. ಬ್ರಿಜ್‌ಟೌನ್‌ ಮಳೆಯ ನಡುವೆ ಪ್ರಶಸ್ತಿ ಸಮರ ಸಾಗಿತು. ಪಂದ್ಯವನ್ನು 38 ಓವರ್‌ಗಳಿಗೆ ಇಳಿಸಲಾಯಿತು. ಆಸ್ಟ್ರೇಲಿಯ 4ಕ್ಕೆ 281 ರನ್‌ ಪೇರಿಸಿತು. ಶ್ರೀಲಂಕಾಕ್ಕೆ 36 ಓವರ್‌ಗಳಲ್ಲಿ 269 ರನ್‌ ಟಾರ್ಗೆಟ್‌ ಲಭಿಸಿತು. ಅದು 8ಕ್ಕೆ 215 ರನ್‌ ಗಳಿಸಿ 53 ರನ್ನುಗಳ ಸೋಲುಂಡಿತು. ಆಸ್ಟ್ರೇಲಿಯ ವಿಶ್ವಕಪ್‌ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದ ಪ್ರಪ್ರಥಮ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ರಿಕಿ ಪಾಂಟಿಂಗ್‌ ಅಂದಿನ ಕ್ಯಾಪ್ಟನ್‌ ಆಗಿದ್ದರು. ಅವರು ಸತತ 2 ವಿಶ್ವಕಪ್‌ ಎತ್ತಿದ 2ನೇ ನಾಯಕರೆಂಬ ಹಿರಿಮೆಗೆ ಭಾಜನರಾದರು. ಕ್ಲೈವ್‌ ಲಾಯ್ಡ ಮೊದಲಿಗರು.

50 ಓವರ್‌ಗಳ ಫೈನಲ್‌ ಪಂದ್ಯವನ್ನು ಹೇಗಾದರೂ ಮಾಡಿ ಅಂದೇ ಮುಗಿಸಬೇಕೆಂಬ ಹಠಮಾರಿತನಕ್ಕೆ ಬಲಿಪಶುವಾದದ್ದು ಶ್ರೀಲಂಕಾ. ಇದು ಡೇ ಮ್ಯಾಚ್‌ ಆದ್ದರಿಂದ ಸಂಜೆಯ ಹೊತ್ತು ಕಗ್ಗತ್ತಲು ಆವರಿಸಿತ್ತು. ಲಂಕಾ ಬ್ಯಾಟ್ಸ್‌ಮನ್‌ಗಳಿಗೆ ಆಗ ಚೆಂಡೇ ಕಾಣುತ್ತಿರಲಿಲ್ಲ!
ಒಟ್ಟಾರೆ, ಹರಕೆ ಸಂದಾಯದಂತೆ ಮುಗಿದ ಈ ವಿಶ್ವಕಪ್‌ ಪಂದ್ಯಾವಳಿಯನ್ನು ನೆನಪಿಸಿಕೊಳ್ಳಲು ಯಾವ ಕ್ರಿಕೆಟ್‌ ಪ್ರೇಮಿಯೂ ಬಯಸಲಾರ!

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.