ಪ್ಲೇ ಆಫ್ ಪ್ರವೇಶಿಸಿದ ಯುಪಿ ; ಗ್ರೇಸ್‌ ಹ್ಯಾರಿಸ್‌, ಮೆಕ್‌ಗ್ರಾತ್‌ ಗ್ರೇಟ್‌ ಬ್ಯಾಟಿಂಗ್‌

ಗುಜರಾತ್‌, ಆರ್‌ಸಿಬಿ ಮನೆಗೆ

Team Udayavani, Mar 21, 2023, 6:25 AM IST

ಪ್ಲೇ ಆಫ್ ಪ್ರವೇಶಿಸಿದ ಯುಪಿ ; ಗ್ರೇಸ್‌ ಹ್ಯಾರಿಸ್‌, ಮೆಕ್‌ಗ್ರಾತ್‌ ಗ್ರೇಟ್‌ ಬ್ಯಾಟಿಂಗ್‌

ಮುಂಬಯಿ: ದೊಡ್ಡ ಮೊತ್ತದ ರೋಚಕ ಹಣಾಹಣಿಯಲ್ಲಿ ಗುಜರಾತ್‌ ಜೈಂಟ್ಸ್‌ ತಂಡವನ್ನು 3 ವಿಕೆಟ್‌ಗಳಿಂದ ಉರುಳಿಸಿದ ಯುಪಿ ವಾರಿಯರ್ ವನಿತಾ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯ ಪ್ಲೇ ಆಫ್ ಸುತ್ತನ್ನು ಪ್ರವೇಶಿಸಿದೆ. ಇದರೊಂದಿಗೆ ಪರಾಜಿತ ಗುಜರಾತ್‌ ಹಾಗೂ ಇನ್ನೂ ಒಂದು ಪಂದ್ಯವನ್ನು ಆಡಲಿರುವ ಆರ್‌ಸಿಬಿ ಮನೆಗೆ ಮರಳಿವೆ. ಇನ್ನುಳಿದಿ ರುವುದು ಮುಂಬೈ, ಡೆಲ್ಲಿ ಮತ್ತು ಯುಪಿ ನಡುವಿನ ಒಂದರಿಂದ 3ನೇ ಸ್ಥಾನದ ವರೆಗಿನ ಪೈಪೋಟಿ ಮಾತ್ರ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದು ಕೊಂಡ ಗುಜರಾತ್‌ ಜೈಂಟ್ಸ್‌ 6 ವಿಕೆಟಿಗೆ 178 ರನ್‌ ಗಳಿಸಿ ಸವಾಲೊಡ್ಡಿದರೆ, ಯುಪಿ ವಾರಿಯರ್ 19.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 181 ರನ್‌ ಬಾರಿಸಿತು. 7 ಪಂದ್ಯಗಳಲ್ಲಿ 4ನೇ ಜಯ ಸಾಧಿಸಿತು. ಅಲಿಸ್ಸಾ ಹೀಲಿ ಪಡೆ ಇನ್ನೂ ಒಂದು ಪಂದ್ಯವನ್ನು ಆಡಲಿದ್ದು, ಕೂಟದ ಕೊನೆಯ ಲೀಗ್‌ ಪಂದ್ಯದಲ್ಲಿ ಡೆಲ್ಲಿಯನ್ನು ಎದುರಿಸಲಿದೆ.

ಭಾರೀ ಮೊತ್ತದ ಚೇಸಿಂಗ್‌ ವೇಳೆ ಯುಪಿ ಆರಂಭಿಕ ಕುಸಿತಕ್ಕೆ ಸಿಲುಕಿತು. ದೇವಿಕಾ ವೈದ್ಯ (7), ಅಲಿಸ್ಸಾ ಹೀಲಿ (12) ಮತ್ತು ಕಿರಣ್‌ ನವಿYರೆ (4) ಬೇಗನೇ ಆಟ ಮುಗಿಸಿ ಹೊರಬಿದ್ದರು. ಆದರೆ 4ನೇ ವಿಕೆಟಿಗೆ ಜತೆಗೂಡಿದ ಟಹ್ಲಿಯಾ ಮೆಕ್‌ಗ್ರಾತ್‌-ಗ್ರೇಸ್‌ ಹ್ಯಾರಿಸ್‌ ಪ್ರಚಂಡ ಪ್ರಹಾರಕ್ಕೆ ಮುಂದಾದರು. 8.5 ಓವರ್‌ಗಳಲ್ಲಿ 78 ರನ್‌ ಹರಿದು ಬಂತು.

ಹ್ಯಾರಿಸ್‌ ಅವರಂತೂ ಮುನ್ನುಗ್ಗಿ ಬೀಸುತ್ತಲೇ ಹೋಗಿ 2ನೇ ಅರ್ಧ ಶತಕ ಬಾರಿಸಿದರು. ಅವರ ಮೊದಲ ಫಿಫ್ಟಿ ಕೂಡ ಗುಜರಾತ್‌ ವಿರುದ್ಧವೇ ದಾಖಲಾಗಿತ್ತು. ಅದು ಕೂಡ ಚೇಸಿಂಗ್‌ ಪಂದ್ಯವಾಗಿತ್ತು. ಆ ಪಂದ್ಯವನ್ನೂ ಯುಪಿ 3 ವಿಕೆಟ್‌ಗಳಿಂದ ಗೆದ್ದಿತ್ತು. ಆಗ ಹ್ಯಾರಿಸ್‌ ಅಜೇಯ 59 ರನ್‌ ಹೊಡೆದಿದ್ದರು. ಈ ಬಾರಿ 41 ಎಸೆತಗಳಿಂದ 72 ರನ್‌ ಸಿಡಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ ನಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್‌ ಸೇರಿತ್ತು. ಹ್ಯಾರಿಸ್‌ ಹೊರತುಪಡಿಸಿ ಯುಪಿ ಸರದಿಯಲ್ಲಿ ಯಾರೂ ಸಿಕ್ಸರ್‌ ಬಾರಿಸಲಿಲ್ಲ. ಮೆಕ್‌ಗ್ರಾತ್‌ 38 ಎಸೆತ ನಿಭಾಯಿಸಿ 57 ರನ್‌ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 11 ಬೌಂಡರಿ. ಕೊನೆಯಲ್ಲಿ ಸೋಫಿ ಎಕ್‌Éಸ್ಟೋನ್‌ ಗೆಲುವಿನ ಬೌಂಡರಿ ಬಾರಿಸಿದರು.

ಗುಜರಾತ್‌ ಅಮೋಘ ಆರಂಭ
ಗುಜರಾತ್‌ ಆರಂಭ ಅಮೋಘ ವಾಗಿತ್ತು. ಪವರ್‌ ಪ್ಲೇಯಲ್ಲಿ ಲಾರಾ ವೋಲ್ವಾರ್ಟ್‌-ಸೋಫಿಯಾ ಡಂಕ್ಲಿ ಸಿಡಿದು ನಿಂತರು. ಈ ಅವಧಿಯಲ್ಲಿ 3 ವಿಕೆಟ್‌ ಉರುಳಿದರೂ 50 ರನ್‌ ಹರಿದು ಬಂತು.

4ನೇ ವಿಕೆಟಿಗೆ ಒಟ್ಟುಗೂಡಿದ ಡಿ. ಹೇಮಲತಾ ಮತ್ತು ಆ್ಯಶ್ಲಿ ಗಾರ್ಡನರ್‌ ಸೇರಿಕೊಂಡು ಯುಪಿ ಬೌಲಿಂಗ್‌ ದಾಳಿಯನ್ನು ಪುಟಿಗಟ್ಟಿದರು. 93 ರನ್‌ ಪೇರಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಗಾರ್ಡನರ್‌ 39 ಎಸೆತಗಳಿಂದ ಸರ್ವಾಧಿಕ 60 ರನ್‌, ಹೇಮಲತಾ 33 ಎಸೆತ ಎದುರಿಸಿ 57 ರನ್‌ ಬಾರಿಸಿದರು. ಇಬ್ಬರಿಂದಲೂ 6 ಬೌಂಡರಿ, 3 ಸಿಕ್ಸರ್‌ ಸಿಡಿಯಲ್ಪಟ್ಟಿತು.

ಗುಜರಾತ್‌ ಲೀಗ್‌ ವ್ಯವಹಾರ ಮುಗಿಸಿದ್ದು, 8 ಪಂದ್ಯಗಳಲ್ಲಿ 6ನೇ ಸೋಲನುಭವಿಸಿತು.

ಸಂಕ್ಷಿಪ್ತ ಸ್ಕೋರ್‌
ಗುಜರಾತ್‌ ಜೈಂಟ್ಸ್‌- 6 ವಿಕೆಟಿಗೆ 178 (ಗಾರ್ಡನರ್‌ 60, ಹೇಮಲತಾ 57, ಡಂಕ್ಲಿ 23, ಪಾರ್ಶವಿ 29ಕ್ಕೆ 2, ರಾಜೇಶ್ವರಿ 39ಕ್ಕೆ 2). ಯುಪಿ ವಾರಿ ಯರ್-19.5 ಓವರ್‌ಗಳಲ್ಲಿ 7 ವಿಕೆಟಿಗೆ 181 (ಹ್ಯಾರಿಸ್‌ 72, ಮೆಕ್‌ಗ್ರಾತ್‌ 57, ಗಾರ್ತ್‌ 29ಕ್ಕೆ 2).

ಟಾಪ್ ನ್ಯೂಸ್

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ

smi irani

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwe

Wrestlers ಮೌನ ಪ್ರತಿಜ್ಞೆ; ಮನೆಗಳಿಗೆ ಮರಳಿದ ಹೋರಾಟ ನಿರತರು

maguraza

Engagement: ಸೆಲ್ಫಿ ಕೇಳಿದ ಅಭಿಮಾನಿಯೊಂದಿಗೇ ಮಾಜಿ ವಿಂಬಲ್ಡನ್‌ ಚಾಂಪಿಯನ್‌ ನಿಶ್ಚಿತಾರ್ಥ!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಧೋನಿ ಆಸ್ಪತ್ರೆಗೆ ದಾಖಲು!

MS Dhoni: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಧೋನಿ ಆಸ್ಪತ್ರೆಗೆ !

wtc final

World Test Championship ಫೈನಲ್‌: 4 ದಿನ “ಫುಲ್‌ ಹೌಸ್‌” ನಿರೀಕ್ಷೆ

wrestlers

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

1-sad-dsa

Bhimanna T Naik ದುಃಖ ತಪ್ತ ಕುಟುಂಬಕ್ಕೆ‌ ಸಕಾಲಿಕ ನೆರವಾದ ಶಾಸಕ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ