![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
WPL 2024 auction; ಇಂದಿನ ಪ್ರಮುಖ ಆಕರ್ಷಣೆ ಮಲ್ಲಿಕಾ ಸಾಗರ್
Team Udayavani, Dec 9, 2023, 11:55 AM IST
![WPL 2024 auction; ಇಂದಿನ ಪ್ರಮುಖ ಆಕರ್ಷಣೆ ಮಲ್ಲಿಕಾ ಸಾಗರ್](https://www.udayavani.com/wp-content/uploads/2023/12/mallika-620x342.jpg)
ಮುಂಬೈ: ಬಹುನಿರೀಕ್ಷಿತ ವನಿತಾ ಪ್ರೀಮಿಯರ್ ಲೀಗ್ ನ ಹರಾಜು ಪ್ರಕ್ರಿಯೆ ಇಂದು (ಡಿ.9) ಮಧ್ಯಾಹ್ನ ನಡೆಯಲಿದೆ. ಒಟ್ಟು 165 ಆಟಗಾರ್ತಿಯರು ಹರಾಜು ಪಟ್ಟಿಯಲ್ಲಿದ್ದು, ಐದು ತಂಡಗಳಲ್ಲಿ 30 ಸ್ಥಾನ ಮಾತ್ರ ಖಾಲಿ ಉಳಿದಿದೆ. ಡಬ್ಲ್ಯೂಪಿಎಲ್ ನ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಲಿರುವುದು ಹರಾಜುಗಾರ್ತಿ, ಅವರೇ ಮಲ್ಲಿಕಾ ಸಾಗರ್.
ಮುಂಬೈ ಮೂಲದ ಮಲ್ಲಿಕಾ ಆರ್ಟ್ ಕಲೆಕ್ಟರ್ ಆಗಿದ್ದವರು. ಅಲ್ಲದೆ ಕಳೆದೆರಡು ದಶಕಗಳಿಂದ ಹರಾಜುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಬ್ರಿಟೀಷ್ ಆಕ್ಷನ್ ಹೌಸ್ ಕ್ರಿಸ್ಟೀಸ್ ನಲ್ಲಿ ಹರಾಜು ನಡೆಸಿದ ಮೊದಲ ಭಾರತೀಯ ಮಹಿಳೆ ಮಲ್ಲಿಕಾ.
ಅವರು 2021 ರಲ್ಲಿ ಪ್ರೊ ಕಬಡ್ಡಿ ಲೀಗ್ನಲ್ಲಿ ಹರಾಜಿನ ಭಾಗವಾಗಿದ್ದರು. ಮಲ್ಲಿಕಾ ಕಳೆದ ವರ್ಷ ಡಬ್ಲ್ಯೂಪಿಎಲ್ ಹರಾಜನ್ನು ಸಹ ನಡೆಸಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2 2024 ರ ಆವೃತ್ತಿಯ ಹರಾಜುದಾರರಾಗಿ ಹಗ್ ಎಡ್ಮೀಡ್ಸ್ ಬದಲಿಗೆ ಮಲ್ಲಿಕಾ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಐಪಿಎಲ್ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ.
Today is the BIG DAY! 🙌
How are the 5 teams placed ahead of the #TATAWPLAuction? 🤔
Our auctioneer Mallika Sagar is here with all the deets 😎👇 pic.twitter.com/LEQtjasm5w
— Women’s Premier League (WPL) (@wplt20) December 9, 2023
ಡಬ್ಲ್ಯೂಪಿಎಲ್ ಹರಾಜು 165 ಆಟಗಾರರನ್ನು (104 ಭಾರತೀಯರು ಮತ್ತು 61 ವಿದೇಶಿ) ಒಳಗೊಂಡಿದೆ. ಹರಾಜಿನಲ್ಲಿ 15 ಕ್ರಿಕೆಟಿಗರು ಸಹವರ್ತಿ ರಾಷ್ಟ್ರಗಳಿಂದ ಇರುತ್ತಾರೆ. ಐದು ತಂಡಗಳಾದ ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಜ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡ್ಡಿಂಗ್ ನಡೆಸಲಿದೆ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.