ಎರಡೂ ಉಪ ಚುನಾವಣೆ ಬಿಜೆಪಿ ಗೆಲುವುದು ನಿಶ್ಚಿತ : ನಾರಾಯಣಸ್ವಾಮಿ
Team Udayavani, Oct 27, 2021, 9:58 AM IST
ಕೊಪ್ಪಳ: ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಉಪ ಚುನಾವಣೆ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ಸುದ್ದಿಗಾರರ ಜೊತೆ ಮಾತನಾಡಿದರು. ಮೋದಿ ಎಂಬ ಸಂತನ ಆಡಳಿತ ದೇಶ ಭಕ್ತಿಯ ಆಡಳಿತದಿಂದ ಜನ ಬಿಜೆಪಿ ಗೆಲ್ಲಿಸುತ್ತಾರೆ. ಮೋದಿ, ಯಡಿಯೂರಪ್ಪ ಹಾಗೂ ಈಗಿನ ಬೋಮ್ಮಾಯಿ ಆಡಳಿತದಿಂದ ಬಿಜೆಪಿ ಗೆಲ್ಲಲಿದೆ.
ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬೋಮ್ಮಾಯಿ ಆಡಳಿತ ಇದೆ. ಈ ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿ ಯಡಿಯೂರಪ್ಪ. ಅವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ಆಡಳಿತ ಮಾಡ್ತಿದ್ದಾರೆ. ಬಿಎಸ್ ವೈ ಮಾರ್ಗದರ್ಶನದಲ್ಲಿ ಆಡಳಿತ ಮಾಡಿದವರಿಗೆ ಸೋಲಿಲ್ಲ ಎಂದರು.
ಸದಾಶಿವ ಆಯೋಗದ ವರದಿ ಜಾರಿ ವಿಚಾರ, ವರದಿ ಜಾರಿ ಆಗುತ್ತದೆ ಎಂಬ ಮಾತಿಗೆ ಈಗಲೂ ಬದ್ಧ. ಕಾಶ್ಮೀರಕ್ಕೆ 370 ತೆಗೆಯಲು ಆಗುವುದಿಲ್ಲ ಎಂದು ಎಲ್ಲರೂ ಹೇಳಿದ್ದರು. ಮೋದಿ, ಅಮಿತ್ ಷಾ ಪ್ರಯತ್ನದಿಂದ ಆರ್ಟಿಕಲ್ 370 ತೆಗೆಯಲಾಗಿದೆ. ಅದೇ ರೀತಿ ಸದಾಶಿವ ವರದಿ ಜಾರಿಗೆ ಕಾಲ ಕೂಡಿ ಬರಲಿದೆ. ಆರ್ಟಿಕಲ್ 341 ನಡಿ ಯಾವುದೇ ಜಾತಿ ತೆಗೆಯುವುದಿಲ್ಲ. ಎಲ್ಲರನ್ನೂ ಒಂದುಗೂಡಿಸಿ ಸದಾಶಿವ ಆಯೋಗದ ವರದಿ ಜಾರಿಯಾಗುತ್ತೆ. ನೂರಕ್ಕೆ ನೂರರಷ್ಟು ಸದಾಶಿವ ಆಯೋಗದ ವರದಿ ನಮ್ಮ ಸರ್ಕಾರದಲ್ಲೇ ಜಾರಿ ಆಗುತ್ತೆ ಎಂದರು.
ಉಪಚುನಾವಣೆಯಲ್ಲಿ ಯಾರು ವೈಯಕ್ತಿಕ ಮಾತನಾಡಬಾರದು. ಪಕ್ಷ ಹಾಗು ಯೋಜನೆಗಳ ಕುರಿತು ಮಾತನಾಡಬೇಕಿತ್ತು. ಇದು ರಾಜಕಾರಣಕ್ಕೆ ಕಪ್ಪು ಚುಕ್ಕೆ. ಕಾಂಗ್ರೆಸ್ , ಜೆಡಿಎಸ್ ಆರ್ ಎಸ್ ಎಸ್ ಟೀಕೆ ಮಾಡುತ್ತಿದ್ದಾರೆ. ನಾನೂ ಸಂಘ ಪರಿವಾರದಿಂದ ಬಂದವನು.
ಧರ್ಮವನ್ನು ಹೊಡೆಯುವುದು ಧರ್ಮವನ್ನು ಇಬ್ಬಾಗ ಮಾಡುವ ಕೆಲಸ ಕಾಂಗ್ರೆಸ್ , ಜೆಡಿಎಸ್ ಪಕ್ಷ ಮಾಡಿವೆ. ಸಿದ್ದರಾಮಯ್ಯ ಬಿಜೆಪಿಯಿಂದ ದಲಿತರಿಗೆ ನ್ಯಾಯ ಸಿಗುವುದಿಲ್ಲ ಎನ್ನುವ ಹೇಳಿಕೆ ವಿಚಾರ, ಈ ಬಗ್ಗೆ ನಾನು ಸಿಂದಗಿಯಲ್ಲಿ ಮಾತನಾಡುತ್ತೇನೆ. ಈ ದೇವಸ್ಥಾನದ ಜಾಗದಲ್ಲಿ ರಾಜಕಾರಣ ಮಾಡುತ್ತಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ