Ankola; ನೀರುಪಾಲಾಗಿದ್ದ ಟ್ಯಾಂಕರ್‌ ಇಂಧನ ಖಾಲಿ ಮಾಡಿದ್ದು ಸುರತ್ಕಲ್‌ನ ಯುವಕರು!


Team Udayavani, Jul 21, 2024, 6:55 AM IST

1-a-tank-aa

ಸುರತ್ಕಲ್‌: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ಸಂಭವಿಸಿ ನದಿ ಪಾಲಾ ಗಿದ್ದ ಎಲ್‌ಪಿಜಿ ಗ್ಯಾಸ್‌ ಟ್ಯಾಂಕರ್‌ನ ಅನಿಲ ಸೋರಿಕೆ ಯನ್ನು ಜೀವ ಪಣಕ್ಕಿಟ್ಟು ನಿಭಾಯಿಸುವಲ್ಲಿ ಯಶಸ್ವಿ ಯಾದವರು ಸುರತ್ಕಲ್‌ ಎಚ್‌ಪಿಸಿಎಲ್‌ ಸ್ಥಾವರದ ಗುತ್ತಿಗೆ ಸಿಬಂದಿ.

ಮಂಗಳೂರು ಎಚ್‌ಪಿಸಿಎಲ್‌ ಕಂಪೆನಿಯ ಗುತ್ತಿಗೆಯ ಎಸ್‌ ಪಿ ಎಂಜಿನಿಯರಿಂಗ್‌ ವರ್ಕ್ಸ್ ನ ಕಾರ್ಮಿ ಕರು ಎನ್‌ಡಿಆರ್‌ಎಫ್‌, ನೌಕಾ ದಳ ಹಾಗೂ ಅಗ್ನಿಶಾಮಕ ಸಿಬಂದಿ ಜತೆ ಸೇರಿ ಅನಿಲವನ್ನು ಖಾಲಿ ಮಾಡಿದ್ದಾರೆ. ಬಾಳ ಗ್ರಾಮದ ಸಂಕೇತ ಪೂಜಾರಿ, ಕುಳಾಯಿಗುಡ್ಡೆ ನಿವಾಸಿ ಮನೋಜ್‌, ಜನತಾ ಕಾಲನಿಯ ರತನ್‌, ಕಾವೂರಿನ ಸಂತೋಷ್‌ ಅವರು ನೇರ ಕಾರ್ಯಾಚರಣೆ ಕೈಗೊಂಡವರು. ಎಚ್‌ಪಿಸಿಎಲ್‌ ಸಂಸ್ಥೆಯ ಸುರûಾ ಅಧಿಕಾರಿ ಶಿವರಾಜ್‌ ಚೌಹಾಣ್‌ ಮಾರ್ಗದರ್ಶನ ನೀಡಿದರು.

ಸ್ವಲ್ಪ ಹೆಚ್ಚು ಕಡಿಮೆಯಾದರೂ ಸ್ಫೋಟವಾಗುವ ಸಾಧ್ಯತೆ ಮಧ್ಯೆ ತಮ್ಮ ಜೀವವನ್ನು ಪಣಕ್ಕಿಟ್ಟು ಯಶಸ್ವಿ ಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದರು ಎನ್ನುತ್ತಾರೆ ಎಸ್‌ಪಿ ಎಂಜಿನಿಯರಿಂಗ್‌ ವರ್ಕ್ಸ್ ಮಾಲಕ ಶಿವಪ್ರಸಾದ್‌ ಶೆಟ್ಟಿ .

ಕಾರ್ಯಾಚರಣೆ ಹೇಗೆ ನಡೆಯಿತು?
ನೀರಲ್ಲಿ ಟ್ಯಾಂಕರ್‌ ಕೊಚ್ಚಿಕೊಂಡು ಹೋಗುವ ಸಂದರ್ಭ ಅದರ ಹಿಂಭಾಗದಲ್ಲಿರುವ ಮೀಟರ್‌ಗೆàಜ್‌ಗೆ ಹಾನಿಯಾಗಿ ಸೋರಿಕೆ ಆರಂಭವಾಗಿತ್ತು. ಸೋರಿಕೆ ತಡೆಯುವುದು ಮೊದಲ ಸವಾಲಾಗಿತ್ತು. ಕಿಡಿ ಹೊತ್ತಿ ಅಪಾಯವಾಗದಂತೆ ಯಾವುದೇ ಕಬ್ಬಿಣದ ಆಯುಧ ಬಳಸದೆ ಕೇವಲ ಮರದ ರೀಪು ಸಹಿತ ಸುರಕ್ಷಾ ಕ್ರಮ ತೆಗೆದುಕೊಂಡು ಸೋರಿಕೆ ತಡೆಗಟ್ಟಲಾಯಿತು. ಬಳಿಕ ಅಗ್ನಿಶಾಮಕ, ಎನ್‌ಡಿಆರ್‌ಎಫ್‌ ತಂಡದೊಂದಿಗೆ ತೆರಳಿ ಇಂಧನ ಖಾಲಿ ಮಾಡಲು ಯತ್ನ ನಡೆಯಿತಾದರೂ ಟ್ಯಾಂಕರ್‌ ನೀರಿನ ರಭಸಕ್ಕೆ ಓಲಾಡುತ್ತಿದ್ದರಿಂದ ಸಾಧ್ಯವಾಗಲಿಲ್ಲ. ಬಳಿಕ ದಡದವರೆಗೆ ಎಳೆಯಲು ಸಿದ್ಧತೆ ನಡೆಸಿ, ನೀರಿನಲ್ಲಿಯೇ ಇಂಧನ ಖಾಲಿ ಮಾಡಲಾಯಿತು. ಶುಕ್ರವಾರ ಸಂಜೆ 6ರವರೆಗೆ ಕಾರ್ಯಾಚರಣೆ ನಡೆದಿತ್ತು.

ಟ್ಯಾಂಕರ್‌ನ ಗೇಜ್‌ಗೆ ಹಾನಿಯಾಗಿತ್ತು. ಟ್ಯಾಂಕ ರ್‌ನ ಕ್ಯಾಬಿನ್‌ ಇರಲಿಲ್ಲ. ಅದರಲ್ಲಿದ್ದ 18 ಟನ್‌ ಇಂಧ ನವನ್ನು ನೀರಿನಲ್ಲೇ ಖಾಲಿ ಮಾಡಿದೆವು. ಅಗ್ನಿಶಾಮಕದ ನೆರವಿನಿಂದ ಪ್ರಶರ್‌ ಮೂಲಕ ಇಂಧನವನ್ನು ಪೂರ್ತಿ ಖಾಲಿ ಮಾಡಿದೆವು. ನೀರಿನಲ್ಲಿಯೇ ಇದ್ದುದರಿಂದ ಯಾವುದೇ ಕಿಡಿ ಹೊತ್ತಿ ಸ್ಫೋಟವಾಗುವ ಅವಕಾಶ ಕಡಿಮೆ. ಆದರೂ ಸಾಕಷ್ಟು ಮುಂಜಾಗ್ರತೆ ವಹಿಸಿದ್ದೆವು ಎನ್ನುತ್ತಾರೆ ತಂಡದ ರತನ್‌.

Ad

ಟಾಪ್ ನ್ಯೂಸ್

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

ಸುಜೀರು: ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾದ ಯುವತಿ ಚೇತರಿಕೆ

ಸುಜೀರು: ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾದ ಯುವತಿ ಚೇತರಿಕೆ

Madikeri: 2 ದನ, ಎಮ್ಮೆ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

Madikeri: 2 ದನ, ಎಮ್ಮೆ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

Belthangady: ಹೊಸಂಗಡಿ, ಗರ್ಡಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ

Belthangady: ಹೊಸಂಗಡಿ, ಗರ್ಡಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

SAvsZIM: South Africa innings victory

SAvsZIM: ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CPY-Ramanagar

ನನಗೆ ಸಚಿವ ಸ್ಥಾನ ಬೇಕಿಲ್ಲ, ಡಿ.ಕೆ.ಶಿವಕುಮಾರ್‌ ಸಿಎಂ ಆದ್ರೆ ಸಾಕು: ಸಿ.ಪಿ.ಯೋಗೇಶ್ವರ್‌

Dharwad: ಸಿಎಂ ಬದಲಾವಣೆ ಸೀನ್ ಸದ್ಯಕ್ಕಿಲ್ಲ: ಸಚಿವೆ ಹೆಬ್ಬಾಳ್ಕರ್

Dharwad: ಸಿಎಂ ಬದಲಾವಣೆ ಸೀನ್ ಸದ್ಯಕ್ಕಿಲ್ಲ: ಸಚಿವೆ ಹೆಬ್ಬಾಳ್ಕರ್

BJP Karnataka: We are not bigger than the party….: Kumar Bangarappa

BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

13 IAS officers including D.Kannada CEO transferred

IAS Transfer: ದ.ಕನ್ನಡ ಜಿಲ್ಲಾ ಸಿಇಒ ಸೇರಿ 13 ಐಎಎಸ್‌ ಅಧಿಕಾರಿಗಳ ವರ್ಗಾವಣೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

ಹೃದಯಾಘಾತ: ಸುರತ್ಕಲ್‌ ಪರಿಸರದ ಇಬ್ಬರ ಸಾವು

ಸುಜೀರು: ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾದ ಯುವತಿ ಚೇತರಿಕೆ

ಸುಜೀರು: ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾದ ಯುವತಿ ಚೇತರಿಕೆ

Madikeri: 2 ದನ, ಎಮ್ಮೆ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

Madikeri: 2 ದನ, ಎಮ್ಮೆ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

Belthangady: ಹೊಸಂಗಡಿ, ಗರ್ಡಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ

Belthangady: ಹೊಸಂಗಡಿ, ಗರ್ಡಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ

ಕೊಚ್ಚಿ ಹೋಗುವ ಪರಿಸ್ಥಿತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ..!

ಕೊಚ್ಚಿ ಹೋಗುವ ಪರಿಸ್ಥಿತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.