ಪ್ರಧಾನಿ ನರೇಂದ್ರ ಮೋದಿ ರಣಹೇಡಿ: ಬಿ.ಕೆ.ಹರಿಪ್ರಸಾದ್ ಟೀಕಾಸ್ತ್ರ
Team Udayavani, Jun 16, 2022, 10:50 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜಕೀಯವಾಗಿ ಕಾಂಗ್ರೆಸ್ ನಾಯಕರನ್ನು ಮಣಿಸದೆ, ಇಡಿ ಸೇರಿದಂತೆ ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ರಾಜಕೀಯ ಸೇಡನ್ನು ರಾಜಕೀಯವಾಗಿ ತೀರಿಸಿಕೊಳ್ಳಲಿ. ಅದು ಬಿಟ್ಟು ಸಿಬಿಐ ಐಟಿ, ಇಡಿ ದುರ್ಬಳಕೆ ಮಾಡುವುದಲ್ಲ. ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಚೆನ್ನಾಗಿ ನನಗೆ ಗೊತ್ತಿದೆ, ಅವರು ರಣ ಹೇಡಿ ಟೀಕಾಸ್ತ್ರ ಪ್ರಯೋಗ ಮಾಡಿದರು.
ಇದನ್ನೂ ಓದಿ:ಪರಿಷತ್ ಚುನಾವಣೆ: ಐತಿಹಾಸಿಕ ಗೆಲುವು ದಾಖಲಿಸಿದ ಬಿಜೆಪಿಯ ಹನುಮಂತ ನಿರಾಣಿ
ಬಿಜೆಪಿಗೂ ಅಧಿಕ ಸಂಖ್ಯೆಯಲ್ಲಿ ಫಂಡ್ ಬಂದಿದೆ. ಕೆಲವರು ಕೋಟ್ಯಾಂತರ ರೂಪಾಯಿ ನೀಡಿದ್ದಾರೆ. ಆ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಲಿ. ಜೈಲಿಗೆ ಹೋಗಿಬಂದಿರುವ ಅಮಿತ್ ಶಾ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ದೆಹಲಿ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.