ಹೆಬ್ರಿ ತಾಲೂಕಿಗೆ ಒಂದು ಹೋಬಳಿ ಸೇರಿಸಲು ಸಂಪುಟ ಸಭೆಯಲ್ಲಿ ತೀರ್ಮಾನ
Team Udayavani, Oct 5, 2021, 1:24 PM IST
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿಗೆ ಒಂದು ಹೋಬಳಿ ಸೇರಿಸಲು ಸಂಪುಟ ತೀರ್ಮಾನ ಮಾಡಿದೆ.
ಸಚಿವ ಸಂಪುಟ ಸಭೆಯ ನಿರ್ಧಾರಗಳು
ಸಭೆಯಲ್ಲಿಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿಗೆ ಒಂದು ಹೋಬಳಿ ಸೇರ್ಪಡೆ.
ವೃತ್ತಿಪರ ಕೋರ್ಸ್ ಗಳಲ್ಲಿ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಶುಚಿ ಕಿಟ್ ಕೊಡಲು ಸಂಪುಟ ನಿರ್ಧಾರ.
ದತ್ತ ಪೀಠ ಕುರಿತು ನ್ಯಾಯಾಲಯದ ಆದೇಶ ಪಾಲನೆಗೆ ಸಚಿವ ಸಂಪುಟ ಉಪ ಸಮಿತಿ ಸಂಪುಟ ತೀರ್ಮಾನ.
ಮೈಶುಗರ್ ಕಾರ್ಖಾನೆ ಸರ್ಕಾರವೇ ನಿರ್ವಹಣೆ ಅಥವಾ ಖಾಸಗೀಕರಣ ಸಂಪುಟ ಉಪ ಸಮಿತಿ ಶಿಫಾರಸು ಮೇರೆಗೆ ಕ್ರಮಕ್ಕೆ ಸಂಪುಟ ನಿರ್ಧಾರ.
ಪೊಲೀಸ್ ಪೇದೆ, ಮುಖ್ಯಪೇದೆ, ಸಬ್ ಇನ್ಸ್ಪೆಕ್ಟರ್ ಬಡ್ತಿಗೆ ಅನುಕೂಲವಾಗುವ ತಿದ್ದುಪಡಿ ನಿಯಮ ಜಾರಿಗೆ ಸಂಪುಟ ತೀರ್ಮಾನ.
ಇದನ್ನೂ ಓದಿ:ಕೂಲಿ ಕಾರ್ಮಿಕರ ಖಾತೆಗೆ ಜಮೆಯಾದ ಹಣ ಗುತ್ತಿಗೆದಾರರ ಖಾತೆಗೆ ವರ್ಗಾವಣೆ:ಸಾಮಾನ್ಯಸಭೆ ಬಹಿಷ್ಕಾರ