10 ಗಂಟೆಗೆ ಕಚೇರಿಯಲ್ಲಿರಿ…: ಸಚಿವಾಲಯದ ನೌಕರರಿಗೆ ಖಡಕ್ ಸೂಚನೆ
ಸೂಕ್ತ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ....
Team Udayavani, Jul 25, 2022, 6:50 PM IST
ಬೆಂಗಳೂರು: ನಿಗದಿತ ಸಮಯದ ವೇಳೆ ಕಚೇರಿಯಲ್ಲಿರಬೇಕು, ಕಡ್ಡಾಯ ಕರ್ತವ್ಯಪಾಲನೆ ಮಾಡಬೇಕು ಎಂದು ಸಚಿವಾಲಯದ ನೌಕರರಿಗೆ ಖಡಕ್ ಸೂಚನೆ ನೀಡಲಾಗಿದೆ.
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿರಬೇಕು, ಸಮಯ ಪ್ರಜ್ಙೆ,ಕಾರ್ಯನಿಷ್ಠೆ ಕೊರತೆ ಯಾಗಬಾರದು, ದೂರದೂರುಗಳಿಂದ ಜನ ಸಮಸ್ಯೆ ಹೊತ್ತು ತರುತ್ತಾರೆ. ಆದರೆ, ಆ ವೇಳೆ ಅಧಿಕಾರಿ,ಸಿಬ್ಬಂದಿ ಇಲ್ಲವೆಂಬ ಮಾಹಿತಿಯಿದೆ. ನಿಗದಿತ ಕಾಲಾವಧಿಗಿಂತ ವಿಳಂಬವಾಗಿ ಹಾಜರಾಗುವುದು, ಕಚೇರಿ ಅವಧಿಯಲ್ಲಿ ಸ್ಥಳದಲ್ಲಿಲ್ಲದಿರುವುದು ಕಂಡು ಬಂದಿದೆ. ಇನ್ನು ಮುಂದೆ ಕಡ್ಡಾಯವಾಗಿ ಕಚೇರಿಯಲ್ಲಿರಬೇಕು,ಬೇರೆಡೆ ತೆರಳಬೇಕಾದರೆ ಅನುಮತಿ ಕಡ್ಡಾಯ, ಮೇಲ್ವಿಚಾರಕರ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಇಲ್ಲವಾದರೆ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಸರಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪದೇ ಪದೇ ಸುತ್ತೋಲೆ ಹೊರಡಿಸಲಾಗಿದೆ, ಪದೇ ಪದೇ ಆರೋಪಗಳು ಕೇಳಿಬಂದಿವೆ, ಹೀಗಾಗಿ ಕಡ್ಡಾಯ ಕರ್ತವ್ಯ ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!