15 ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು: ಸಿ.ಟಿ. ರವಿ
Team Udayavani, Nov 17, 2019, 3:00 AM IST
ಬೀದರ: ಉಪಚುನಾ ವಣೆಯ ಎಲ್ಲ 15 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಇದು ಪಕ್ಷದ ಆಂತರಿಕ ಸಮೀಕ್ಷೆ ಮಾತ್ರವಲ್ಲ, ಜನರ ನಾಡಿಮಿಡಿ ತವೂ ಆಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯನ್ನು ಒಂದಂಕಿ ಸ್ಥಾನಕ್ಕೆ ನಿಲ್ಲಿಸುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಒಂದಂಕಿಗೆ ಇಳಿದಿದೆ ಎಂದು ವ್ಯಂಗ್ಯವಾಡಿದರು.
“ನನ್ನ ಮಸ್ಜಿದ್ ನನಗೆ ಕೊಡಿ’ ಎಂದು ಬಾಬರಿ ಮಸೀದಿ ವಿಷಯದಲ್ಲಿ ಎಂಐಎಂ ಪಕ್ಷದ ಅಧ್ಯಕ್ಷ ಅಸಾಸುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ. ಬಾಬರ್ ಪರ್ಶಿಯಾದಿಂದ ಬಂದಿದ್ದ ಒಬ್ಬ ಆಕ್ರಮಣಕಾರ. ಓವೈಸಿ, ಬಾಬರ್ ಜತೆ ಗುರುತಿಸಿಕೊಳ್ಳುವುದಾದರೆ ಅವರು ಪರ್ಶಿಯಾದಲ್ಲೇ ಮಸೀದಿಗೆ ಜಾಗ ಹುಡುಕಿಕೊಳ್ಳಲಿ.
-ಸಿ.ಟಿ.ರವಿ, ಸಚಿವ