ಬಿಜೆಪಿ ಸ್ಥಿತಿ “ಮನೆಯೊಂದು ಮುನ್ನೂರು ಬಾಗಿಲು’: ಕಾಂಗ್ರೆಸ್
Team Udayavani, Nov 11, 2022, 6:30 AM IST
ಬೆಂಗಳೂರು: ಬಿಜೆಪಿ ಸ್ಥಿತಿ ಈಗ “ಮನೆಯೊಂದು ಮುನ್ನೂರು ಬಾಗಿಲು’ ಎಂಬಂತಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ ಮಾಡಿದೆ.
ಖಾಲಿ ಕುರ್ಚಿ ದರ್ಶನ ಪಡೆದ ನಳಿನ್ಕುಮಾರ್ ಕಟೀಲು ಅನಾರೋಗ್ಯ ನೆಪವೊಡ್ಡಿ ಜನಸಂಕಟ ಯಾತ್ರೆಗೆ ಗೈರು, ಮಂತ್ರಿ ಸ್ಥಾನ ಸಿಗದೆ ಮುನಿಸಿಕೊಂಡ ರಮೇಶ್ ಜಾರಕಿಹೊಳಿ ಗೈರು. ಅಂದು ಅತೃಪ್ತರ ನೇತೃತ್ವ ವಹಿಸಿದ್ದವರಿಗೆ ಬಿಜೆಪಿಯ ದ್ರೋಹದ ದರ್ಶನವಾಗಿದೆ. ಇಂದು ಮತ್ತೆ ಅತೃಪ್ತಿಯಾಗಿದೆ ಎಂದು ಹೇಳಿದೆ.
ಬಿಜೆಪಿಯನ್ನು ಜನ ತಿರಸ್ಕರಿಸುತ್ತಿದ್ದಾರೆ ಎಂಬ ಸಂಗತಿ ಯಡಿಯೂರಪ್ಪ ಅವರಿಗೆ ತಿಳಿದು ಹೋಗಿದೆ. ಸರಕಾರದ ದುರಾಡಳಿತ, ಅಭಿವೃದ್ಧಿ ಶೂನ್ಯತೆ , ಸಿಗದ ಅನುದಾನಗಳಿಂದ ಈಗಾಗಲೇ ಸೋಲಿನ ಸೂಚನೆ ಸಿಕ್ಕಿರುವ ಬಿಜೆಪಿ ಶಾಸಕರು ಸ್ಪರ್ಧಿಸದಿದ್ದರೆ ಹಣ ಉಳಿಯಲಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಜನವಿರೋಧಿ ಬಿಜೆಪಿ ಕರ್ನಾಟಕಲ್ಲಿ ಧೂಳೀಪಟವಾಗುವುದು ನಿಶ್ಚಿತ ಎಂದು ತಿಳಿಸಿದೆ.