ಅಧಿವೇಶನದ ಬಗ್ಗೆ ಕುಮಾರಸ್ವಾಮಿ ಪತ್ರ : ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ ಎಂದ ಈಶ್ವರಪ್ಪ
Team Udayavani, Jun 25, 2021, 2:11 PM IST
ಶಿವಮೊಗ್ಗ : ಅಧಿವೇಶನ ಕರೆಯುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಪತ್ರ ಬರೆದಿರುವ ವಿಚಾರವಾಗಿ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ. ವಿರೋಧ ಪಕ್ಷವಾಗಿ ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಹೇಳಿಕೆ ಕೊಡಬೇಕು. ಹೇಳಿಕೆ ಕೊಡ್ತಿದ್ದಾರೆ. ಕೋವಿಡ್ ನ ಸಂದರ್ಭದಲ್ಲಿ ಎರಡನೇ ಅಲೆ ನಿಭಾಯಿಸುವ ಕೆಲಸ ರಾಜ್ಯ ಸರಕಾರ ಮಾಡಿದೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಕಳೆದ ಎರಡು ದಿನದ ಹಿಂದೆ ಒಂದೇ ದಿನ 11 ಲಕ್ಷ ಲಸಿಕೆ ನೀಡಿದ್ದೇವೆ. ಈ ಬಗ್ಗೆ ಅವರು ಹೇಳಲಿ, ಸುಮ್ಮನೆ ಟೀಕೆ ಮಾಡೋದಲ್ಲ. ಇದನ್ನು ಯಾಕೆ ಸ್ವಾಗತ ಮಾಡ್ತಿಲ್ಲ. ಅವರ ಟೀಕೆಗಳನ್ನು ಒಳ್ಳೆಯ ಸಲಹೆ ಅಂತಾ ಸ್ವೀಕಾರ ಮಾಡಿ ಇನ್ನು ಒಳ್ಳೆಯ ಆಡಳಿತ ಕೊಡುವ ದಿಕ್ಕಿನಲ್ಲಿ ಪ್ರಯತ್ನ ಮಾಡ್ತೀವಿ ಎಂದರು.
ಅವರು ಅಧಿವೇಶನ ಕರೆಯಿರಿ ಅಂತಾ ಕೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದ ಈಶ್ವರಪ್ಪ ಹೇಳಿದ್ದಾರೆ.