ದೇವನಹಳ್ಳಿಯಲ್ಲಿ ಉತ್ತಮ ಮಳೆ: 10 ವಿಮಾನಗಳ ಸಂಚಾರ ವ್ಯತ್ಯಯ
Team Udayavani, Apr 5, 2023, 7:15 AM IST
ಬೆಂಗಳೂರು: ದೇವನಹಳ್ಳಿಯಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದ್ದು, ಯುಗಾದಿ ಬಳಿಕ ಮೊದಲ ವರ್ಷಧಾರೆ ರೈತರು ಮತ್ತು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ.
ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿರುಗಾಳಿ ಮಳೆಯ ಪರಿಣಾಮ 10 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಆಗಿದೆ. ಸರಿಯಾದ ಸಮಯಕ್ಕೆ ಲ್ಯಾಂಡಿಂಗ್ ಆಗದೆ ವಿಮಾನಗಳು ಹಾರಾಟ ಸಾಕಷ್ಟು ತಡವಾಗಿವೆ.
ಹಲವಾರು ವಿಮಾನಗಳನ್ನು ಇಳಿಸಲು ಸಾಧ್ಯವಾಗದೆ ಚೆನ್ನೈ, ಹೈದರಾಬಾದ್ ವಿಮಾನ ನಿಲ್ದಾಣಗಳಿಗೆ ಪಥ ಬದಲಾವಣೆ ಮಾಡಲಾಯಿತು.