ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ವೀಕ್ಷಿಸಿದ ರಾಜ್ಯಪಾಲರು
Team Udayavani, Apr 1, 2022, 9:45 PM IST
ಬೆಂಗಳೂರು: ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನಡೆಸಿದ “ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವನ್ನು ವಿವಿಧ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ದೂರದರ್ಶನದ ಮೂಲಕ ವೀಕ್ಷಣೆ ಮಾಡಿದರು.
ಈ ವೇಳೆ ಮಲ್ಲೇಶ್ವರ 13ನೇ ಅಡ್ಡಸ್ತೆಯ ಕೆ.ಪಿ.ಎಸ್ ಶಾಲೆ, ಪೂರ್ಣಪ್ರಜ್ಞಾ ಎಜುಕೇಶನ್ ಸೆಂಟರ್, ಸ್ಟೆಲ್ಲಾ ಮೇರೀಸ್ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಸಂತೇಬೀದಿ, ಯಶವಂತಪುರ, ಸರ್ಕಾರಿ ಪ್ರೌಢಶಾಲೆ ಭಾರತೀಯ ವಿಜ್ಞಾನ ಮಂದಿರ, ನಿರ್ಮಲಾ ರಾಣಿ ಪ್ರೌಢ ಶಾಲೆ, ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆ, ಹಿಮಾಂಶು ಕಲಾ ಜ್ಯೋತಿ ವಿದ್ಯಾಪೀಠ, ಎಂಎಲ್ಎ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಎಲ್ಲಾ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡ ರಾಜ್ಯಪಾಲರು, ಕಾರ್ಯಕ್ರಮದ ಬಳಿಕ ರಾಜಭವನವನ್ನು ತೋರಿಸಿದರು. ಅಲ್ಲಿರುವ ಪಾರಂಪರಿಕ ವಸ್ತುಗಳು, ಹಿಂದಿನ ರಾಜ್ಯಪಾಲರು ಮಾಹಿತಿಗಳು ವಿವರಗಳನ್ನು ಹಂಚಿಕೊಂಡರು. ಕೊನೆಗೆ ವಿದ್ಯಾರ್ಥಿಗಳು ರಾಜ್ಯಪಾಲರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಿಕ್ಷಣಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.