ಮಂಡ್ಯ ರೈತರ ಕಬ್ಬು ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಲಿ : ಸುಮಲತಾ ಅಂಬರೀಶ್
Team Udayavani, Jul 5, 2021, 6:02 PM IST
ಬೆಂಗಳೂರು : ಮೈಶುಗರ್ ಆರಂಭವಾಗೋವರೆಗೂ ಮಂಡ್ಯದ ರೈತರ ಕಬ್ಬು ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಲಿ ಅಂತ ಮನವಿ ಮಾಡಿದ್ದೇನೆ ಎಂದು ಸಿಎಂ ಭೇಟಿ ಬಳಿಕ ಸಂಸದೆ ಸುಮಲತಾ ಹೇಳಿದ್ದಾರೆ. ಪ್ರಸಕ್ತ ಸಮಸ್ಯೆಗಳು, ಜಿಲ್ಲೆಯ ಬಗ್ಗೆ ಚರ್ಚೆ ಮಾಡಲು ಬಂದಿದ್ದೆ. ಮೈ ಶುಗರ್ ಬಗ್ಗೆ ಎರಡು ವರ್ಷದಿಂದ 20 ಬಾರಿ ಮಾತಾಡಿದ್ದೇನೆ. ರೈತರು ತಾಳ್ಮೆ ಕಳ್ಕೊಳ್ತಿದ್ದಾರೆ. ಕಾರ್ಖಾನೆ ಆರಂಭ ಮಾಡಬೇಕು ಅಂತ ಹೇಳಿದೀನಿ ಎಂದು ಸುಮಲತಾ ಹೇಳಿದ್ದಾರೆ.
ಕಾರ್ಖಾನೆಯನ್ನು ಸರ್ಕಾರವೇ ಆರಂಭ ಮಾಡುತ್ತೆ ಅಂತ ಹೇಳಿದ್ದಾರೆ ಸಿಎಂ. ಎಚ್ಡಿಕೆ ಸಮರ್ಥನೆ ಮಾಡಿಕೊಳ್ಳಲು ಈಗ ಏನೇ ಹೇಳಬಹುದು. ಆದ್ರೆ ಅವರು ಒಮ್ಮೆ ಹೇಳಿದ ಮಾತು ಉಳಿದಕೊಂಡಿದೆ. ಎಚ್ಡಿಕೆ ತಮ್ಮಹೇಳಿಕೆ ಬಗ್ಗೆ ಕ್ಷಮೆ ಕೇಳಲಿ ಕೆಆರೆಸ್ ಡ್ಯಾಮ್ ಬಾಗಿಲಿಗೆ ಅಡ್ಡ ಮಲಗಿಸಿಬಿಟ್ಟರೆ ನೀರು ನಿಲ್ಲುತ್ತೆ ಎಂಬ ಎಂಬ ತಮ್ಮ ಹೇಳಿಕೆ ಬಗ್ಗೆ ಎಚ್ಡಿಕೆ ಸ್ಪಷ್ಟನೆ ಗೆ ಸುಮಲತಾ ಪ್ರತಿಕ್ರಿಯೆ ನೀಡಿ0ದ್ದಾರೆ.
ಎಚ್ಡಿಕೆ ಇವತ್ತು ತಮ್ಮ ಗೌರವ ಕಳೆದುಕೊಂಡಿದ್ದಾರೆ. ಕೆಆಆರ್ ಎಸ್ ಡ್ಯಾಂ ಬಿರುಕು ಬಗ್ಗೆ ಮಾಧ್ಯಮಗಳಲ್ಲೇ ವರದಿಗಳು ಬಂದಿದ್ವು. ಡ್ಯಾಂ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದಲೇ ಬಿರುಕು ಅಂತ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ನಾನು ಡ್ಯಾಂ ಬಿರುಕು ಹೇಳಿಕೆ ಕೊಟ್ಟಿದ್ದೇನೆ ಎಂದರು.
ಸರ್ಕಾರ ತನಿಖೆ ನಡೆಸಲಿ ಡ್ಯಾಂ ಬಿರುಕು ಇಲ್ಲ ಅಂತ ಕೆಲವರು ಅಷ್ಟೊಂದು ಸಮರ್ಥಿಸಿಕೊಳ್ತಿರೋದು ಯಾಕೆ? ಇದರಲ್ಲಿ ಏನೋ ಇದೆ ಅನ್ನೋ ಅನುಮಾನ ಎಲ್ರಿಗೂ ಬರುತ್ತೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!