ಹಾಸನ ಟಿಕೆಟ್: ಮತ್ತೆ ಗೌಡರ ಅಂಗಳಕ್ಕೆ “ಚೆಂಡು’
Team Udayavani, Feb 27, 2023, 5:45 AM IST
ಬೆಂಗಳೂರು: “ನಾ ಕೊಡೆ, ನೀ ಬಿಡೆ’ ಎಂಬಂತಾಗಿರುವ ಹಾಸನ ಕ್ಷೇತ್ರದ ಟಿಕೆಟ್ ವಿಚಾರ ಅಂತಿಮವಾಗಿ ಎಚ್.ಡಿ. ದೇವೇಗೌಡರ ಸಮ್ಮುಖ ಬಗೆಹರಿಯುವ ಹಂತಕ್ಕೆ ತಲುಪಿದೆ.
ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ರವಿವಾರ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತಾದರೂ ಎಚ್. ಡಿ. ರೇವಣ್ಣ ಒತ್ತಡದಿಂದ ರದ್ದುಗೊಂಡಿದ್ದು ಮುಂದಿನ ವಾರ ದೇವೇಗೌಡರ ನಿವಾಸದಲ್ಲೇ ಸಭೆ ನಡೆಯುವ ಸಾಧ್ಯತೆಯಿದೆ.
ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಹಗ್ಗಜಗ್ಗಾಟ ಬೇಡ ಎಂದು ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿಯವರು ಎರಡೂ ಕಡೆಯವರ ಜತೆ ಸಮನ್ವಯ ಸಾಧಿಸಿ ಸಮಸ್ಯೆ ಬಗೆಹರಿಸಲು ಕಸರತ್ತು ನಡೆಸುತ್ತಿದ್ದಾರೆಂದು ಹೇಳಲಾಗಿದೆ.
ಹಾಸನ -ಹೊಳೆನರಸೀಪುರ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್ಗೆ ರೇವಣ್ಣ ಕುಟುಂಬ ಪಟ್ಟು ಹಿಡಿದಿದೆ. ಆದರೆ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.