ನಾನು ಡೋಂಗಿತನವುಳ್ಳ ಆಸ್ತಿಕನಲ್ಲ; ದೇವರಿಗೆ ಸಂಸ್ಕೃತ,ಮಂತ್ರ ಬೇಕಿಲ್ಲ


Team Udayavani, Apr 21, 2017, 2:38 PM IST

6.jpg

ಉಡುಪಿ: ನಾನು ನಾಸ್ತಿಕನಲ್ಲ, ಆದರೆ ನಾನು ಡೋಂಗಿ ತನವುಳ್ಳ ಆಸ್ತಿಕನಲ್ಲ .ದೇವರನ್ನು ಒಲಿಸಿಕೊಳ್ಳಲು ಸಂಸ್ಕೃತ ಬೇಕಿಲ್ಲ,ಮಂತ್ರ ಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿಕೆ ನೀಡಿದ್ದಾರೆ. 

 ಶ್ರೀ ಬಾರ್ಕೂರು ಮಹಾ ಸಂಸ್ಥಾನದಲ್ಲಿ ಶ್ರೀ ವಿಶ್ವ ಸಂತೋಷ ಭಾರತಿ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ನಾಗದೇವರ ಮತ್ತು ಮೂಲ ದೈವಗಳ ಪುನಃ ಪ್ರತಿಷ್ಠಾಪನೆ ಮತ್ತು ನಾಗಮಂಡಲೋತ್ಸವ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಸಹಿಷ್ಣುತೆ ಹಿಂದೂ ಧರ್ಮದ ಮೂಲ ತತ್ವ ಇದನ್ನು ಅರ್ಥ ಮಾಡಿಕೊಂಡರೆ ನಾವು ಮನುಷ್ಯರಾಗಿ ಬಾಳಲು ಸಾಧ್ಯ ಎಂದರು. 

ಇರುವುದು ಒಂದೇ ದೇವರು ಭಕ್ತಿ ಶುದ್ಧವಾಗಿದ್ದರೆ ಸಾಕು. ಮನುಷ್ಯರ ಪರವಾಗಿ ಇದ್ದರೆ ಸಾಕು. ಕೆಲವರು ಹೇಳ್ತಾರೆ ನಾಸ್ತಿಕ ಅಂತ. ನಾನು ನಮ್ಮೂರಿನ ದೇಸ್ಥಾನಕ್ಕೆ ಹೋಗುತ್ತೇನೆ ಹೊರತು ದೇವರನ್ನು ಹುಡುಕಿಕೊಂಡು ಹೋಗುವುದಿಲ್ಲ,ಸಿದ್ದರಾಮ ದೇವಾಲಯಕ್ಕೆ, ಚಾಮುಂಡೇಶ್ವರಿ ದೇವಾಲಯಕ್ಕೆ , ತಿರುಪತಿಗೆ ಹೋಗಿದ್ದೇನೆ ಎಂದರು. 

ದೇವನೊಬ್ಬ ನಾಮ ಹಲವು. ಎಲ್ಲಾ ದೇವಸ್ಥಾನಗಳಿಗೆ ಹೋಗಬೇಕೆಂದು ದೇವರು ಹೇಳಿಲ್ಲ.ಕಷ್ಟ ಬಂದಾಗ ನಮ್ಮೂರ ದೇವರು ಸಾಕು. ಆತ್ಮಶುದ್ಧಿ ,ಮಾನವೀಯತೆ ಇಲ್ಲದಿದ್ದರೆ ಯಾವ ದೇವರು ಕೂಡ ನಿಮ್ಮ ಕಷ್ಟ  ಪರಿಹರಿಸುವುದಿಲ್ಲ ಎಂದರು. 

ಆತ್ಮದೊಳಗೆ ಒಂದು ಇಟ್ಟುಕೊಂಡು ಇನ್ನೊಂದು ಮನಸ್ಸಿನಲ್ಲಿ ಮಂತ್ರ ಹೇಳಿದ್ರೆ ಪ್ರಯೋಜನವಿಲ್ಲ. ದೇವರ ಅನುಗ್ರಹ ಪಡೆಯಲು ಮಂತ್ರ ಕಲೀಬೇಕಾ? ಸಂಸ್ಕೃತ ಬೇಕಾ ? ಯಾವುದೂ ಬೇಡ ಎಂದರು. 

ನಾನು ಯಾವುದೇ ದೇವಸ್ಥಾನಕ್ಕೆ ,ಧಾರ್ಮಿಕ ಕೇಂದ್ರಕ್ಕೆ ಯಾರಿಗೂ ವಿರುದ್ಧ ಇಲ್ಲ. ಮನುಷ್ಯತ್ವದಲ್ಲಿ ನಂಬಿಕೆ ಇಟ್ಟುಕೊಂಡವ. ಬಸವಣ್ಣ ಹೇಳಿದಂತೆ ಇವ ನಮ್ಮವ ,ನಮ್ಮವ ,ನಮ್ಮವ ಎನ್ನುವವ. ಕೆಲವರು ಇದನ್ನು ಹೇಳ್ತಾರೆ ಆ ಬಳಿಕ ಬದಿಗೆ ಕರೆದು ಇವ ಯಾವ ಜಾತಿ ಎಂದು ಕೇಳ್ತಾರೆ ಎಂದರು. 

ಇವತ್ತು ನಾವು ಸಂಸತ್‌, ವಿಧಾನಸಭೆ ,ವಿಧಾನ ಪರಿಷತ್‌ ಎಂದು ಕರೆಯುತ್ತೇವೆಯೋ ಅದಕ್ಕೆಲ್ಲಾ ಮೂಲ ಬಸವಣ್ಣನ ಅನುಭವ ಮಂಟಪ ಎಂದರು. 

ಎಲ್ಲಾ ಪದ್ದತಿಗಳನ್ನು ನಾವು ನಿರ್ಮಾಣ ಮಾಡಿಕೊಂಡಿರುವುದು. ದೇವರಿಗೂ ನಮಗೂ ನಡುವೆ ಒಂದು ಕಂದಕ ನಿರ್ಮಾಣ ಮಾಡಿರುವುದು,ಅದಕ್ಕೂ ಮಧ್ಯವರ್ತಿಗಳು.ಕೆಲವು ದೇವಸ್ಥಾನಗಳಿಗೆ ಕೆಲ ಜಾತಿಗಳಿಗೆ ಪ್ರವೇಶವಿಲ್ಲ. ಇನ್ನು ಕೆಲ ದೇವಸ್ಥಾನಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ ,ಅದು ಏಕೆ ಎಂದು ಪ್ರಶ್ನಿಸಿದರು. 

ಎಲ್ಲಾ ಧರ್ಮಗಳು ಸಮಾನ. ದಯವೇ ಧರ್ಮದ ಮೂಲ ಹೊರತು ಬೇರೆನು ಅಲ್ಲ. ಧರ್ಮವನ್ನು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು ,ದಾಸರು ,ಸಂತರು ಶರಣರು ,ಸೂಫಿಗಳು ಸರಳವಾದ ಭಾಷೆಯಲ್ಲಿ ಮನುಷ್ಯರನ್ನು ತಲುಪಿ ಎಲ್ಲರಿಗೂ ಅರ್ಥವಾದರು ಎಂದರು. 

ಬಂಟ ಸಮಾಜವನ್ನು ಹೊಗಳಿದ ಸಿಎಂ ನಿಮ್ಮ ಸಮಾಜದಲ್ಲಿ ಪುರುಷ ಮಹಿಳೆ ಎಂಬ ಭೇದ ಇಲ್ಲ , ಸಾಹಸ ಪ್ರವೃತ್ತಿ ಇರುವವರು. ಹಾಗಾಗಿ ಯಾವುದೇ ಕ್ಷೇತ್ರದಲ್ಲಿ ಬದುಕಲು ಸಾಧ್ಯವಾಗಿದೆ ಎಂದರು. 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.