ಪ್ರಬಲ ಖಾತೆ ಮೇಲೆ ಹಿರಿಯರ ಕಣ್ಣು
Team Udayavani, Aug 6, 2021, 7:30 AM IST
ಬೆಂಗಳೂರು: ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಪ್ರಮುಖ ಖಾತೆಗಳ ಮೇಲೆ ಹಿರಿಯ ಸಚಿವರ ಕಣ್ಣು ಬಿದ್ದಿದೆ. ಪ್ರಭಾವಿ ಖಾತೆಗಳಿಗಾಗಿ ಸಿಎಂ ಬಳಿ ಬೇಡಿಕೆ ಇರಿಸಿದ್ದು, ಬಹುತೇಕ ಶುಕ್ರವಾರ ಸಚಿವರಿಗೆ ಖಾತೆಗಳ ಹಂಚಿಕೆಯಾಗುವ ಸಾಧ್ಯತೆ ಇದೆ.
ಗೃಹ, ಇಂಧನ, ಕಂದಾಯ, ಆರ್ಡಿಪಿಆರ್, ಬೃಹತ್ ಕೈಗಾರಿಕೆ, ಬೆಂಗ ಳೂರು ನಗರಾಭಿವೃದ್ಧಿ, ಜಲ ಸಂಪನ್ಮೂಲ ಖಾತೆಗಳ ಮೇಲೆ ಹಿರಿಯ ಸಚಿವರು ನಿರೀಕ್ಷೆ ಇರಿಸಿ ದ್ದಾರೆ. ಬಿಎಸ್ವೈ ಸರಕಾರದಲ್ಲಿ ಸಚಿವರಾಗಿದ್ದವರಿಗೆ ಅದೇ ಖಾತೆ ಗಳನ್ನು ನೀಡುವಂತೆ ಪಕ್ಷದ ವರಿಷ್ಠರು ಸಲಹೆ ನೀಡಿ ದ್ದಾರೆ ಎಂಬ ಮಾಹಿತಿ ಲಭ್ಯ ವಾಗಿದೆ.
ಈಶ್ವರಪ್ಪ ಗೃಹ ಖಾತೆಗೆ ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ. ಆರ್. ಅಶೋಕ್ ಗೃಹ ಅಥವಾ ಬೆಂಗ ಳೂರು ನಗರಾಭಿವೃದ್ಧಿಗೆ ಬೇಡಿಕೆ ಇರಿಸಿದ್ದಾರೆ. ಉಮೇಶ್ ಕತ್ತಿ ಗ್ರಾಮೀಣಾಭಿ ವೃದ್ಧಿ ಮತ್ತು ಪಂ. ರಾಜ್ ಅಥವಾ ಕಂದಾಯ ಖಾತೆ ದೊರೆಯುವ ನಿರೀಕ್ಷೆ ಯಲ್ಲಿದ್ದು, ನಿರಾಣಿ ಬೃಹತ್ ಕೈಗಾರಿಕೆಯ ನಿರೀಕ್ಷೆ ಯಲ್ಲಿದ್ದಾರೆ. ವಿ. ಸೋಮಣ್ಣ ಕೂಡ ಆರ್ಡಿ ಪಿಆರ್ ಅಥವಾ ಕಂದಾಯ ಖಾತೆ ದೊರೆಯುತ್ತದೆ ಎಂಬ ವಿಶ್ವಾಸ ದಲ್ಲಿ ದ್ದಾರೆ. ಗೋವಿಂದ ಕಾರಜೋಳ ಲೋಕೋಪ ಯೋಗಿ ಹಾಗೂ ಬಿ. ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಮುಂದುವರಿಯಲು ಇಚ್ಛಿಸಿ ದ್ದಾರೆ. ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಅಂಗಾರ ಹಿಂದಿನ ಖಾತೆಯಲ್ಲಿಯೇ ಮುಂದು ವರಿಯಲು ಆಸಕ್ತಿ ಹೊಂದಿ ದ್ದಾರೆ ಎನ್ನಲಾಗಿದೆ.
ವಲಸಿಗ ಸಚಿವರೂ ಈ ಹಿಂದಿನ ಖಾತೆಗಳಲ್ಲಿಯೇ ಮುಂದುವರಿ ಯಲು ಇಚ್ಛಿಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಣೆ
ವಕೀಲರಿಗೂ ತಟ್ಟಿದ ಬೇಸಿಗೆ ಬಿಸಿ: ಕಪ್ಪು ಕೋಟ್ಗೆ ವಿನಾಯಿತಿ
NDA; ಮಂಡ್ಯಕ್ಕೆ ಬಂದಿರುವ ಕುಮಾರಸ್ವಾಮಿಯನ್ನು ಸೋಲಿಸಿ ಮನೆಗೆ ಕಳಿಸಿ: ಸಿದ್ದರಾಮಯ್ಯ
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ