23ಕ್ಕೆ ಸೋಲಿಲ್ಲದ ಸರದಾರ ಖರ್ಗೆ ಮನೆಗೆ
Team Udayavani, May 13, 2019, 3:00 AM IST
ಕಲಬುರಗಿ:” ಯಾರು ಕುಂಟರು, ಯಾರು ಕಳ್ಳೆತ್ತು ಹಾಗೂ ಯಾರ ಶಕ್ತಿ ಏನು ಎನ್ನುವುದು ಮೇ 23ಕ್ಕೆ ಗೊತ್ತಾಗಲಿದೆ. ಅಲ್ಲದೇ ಅಂದು ಸೋಲಿಲ್ಲದ ಸರದಾರ ಡಾ| ಮಲ್ಲಿಕಾರ್ಜುನ ಖರ್ಗೆ ಮನೆಗೆ ಹೋಗುವುದು ನಿಶ್ಚಿತ’ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ತಮ್ಮನ್ನು ಕಡೆಗಣಿಸಿ ಮಗನ ಹಾದಿ ಸುಗಮ ಮಾಡಿದ್ದಕ್ಕೆ ಬೇಸತ್ತೇ ಪಕ್ಷದಿಂದ ತಾವಲ್ಲದೇ ಬಾಬುರಾವ ಚಿಂಚನಸೂರ, ಡಾ| ಎ.ಬಿ.ಮಾಲಕರಡ್ಡಿ, ಡಾ| ಉಮೇಶ ಜಾಧವ ಹೊರ ಬಂದಿದ್ದೇವೆ. ಸೋತವರು ತಮ್ಮನ್ನೇನು ಸೋಲಿಸುತ್ತಾರೆ ಎನ್ನುವುದಕ್ಕೆ ಮೇ 23ರಂದು ಉತ್ತರ ಸಿಗಲಿದೆ. ಅಲ್ಲದೇ ರಾಜಕೀಯ ಧೃವೀಕರಣಗೊಂಡು ಹೊಸ ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಲಿದೆ ಎಂದರು.