ಶ್ರವಣಬೆಳಗೊಳ ಮಹಾಮಸ್ತಾಕಾಭಿಷೇಕ,ಪ್ರವಾಸಿಗರಿಗಾಗಿ E books,QR codes


Team Udayavani, Jan 20, 2018, 4:28 PM IST

Shravanabelagola-700.jpg

ಶ್ರವಣಬೆಳಗೊಳ : ಕರ್ನಾಟಕದ ಈ ಪ್ರಾಚೀನ ಜೈನ ಯಾತ್ರಾ ಕೇಂದ್ರ 2018ರ ಫೆ.17ರಂದ ತೊಡಗಿ ಒಂದು ತಿಂಗಳ ಕಾಲ ನಡೆಯುವ ಮಹಾ ಮಸ್ತಕಾಭಿಷೇಕದ ಮಹೋನ್ನತ ಹಾಗೂ ಅದ್ದೂರಿಯ ಸಮಾರಂಭಕ್ಕೆ ಸರ್ವ ರೀತಿಯಲ್ಲಿ ಸಜ್ಜಾಗುತ್ತಿದೆ. ಇಡಿಯ ಪಟ್ಟಣಕ್ಕೆ ಪಟ್ಟಣವೇ ಸಂಪೂರ್ಣ ರೂಪಾಂತರಕ್ಕೆ ಅಣಿಯಾಗುತ್ತಿದೆ. ಭಾರತದ ಪಾಕ್ತನ ಸರ್ವೇಕ್ಷಣಾಲಯ (ASI) ಈ ಪ್ರಾಚೀನ ಯಾತ್ರಾ ತಾಣದಲ್ಲಿನ ಕಲ್ಪಿಸಿರುವ ಸೌಕರ್ಯಗಳನ್ನು ಮೇಲ್ಮಟ್ಟಕ್ಕೆ ಒಯ್ಯುವ ನಿರ್ಧಾರವನ್ನು ಕೈಗೊಂಡಿದೆ.

2018ರ ಮಹಾ ಮಸ್ತಕಾಭಿಷೇಕ ಸಮಾರಂಭಕ್ಕಾಗಿ ಬೆಂಗಳೂರು ಮತ್ತು ಹಂಪಿ ವರ್ತುಲದ ಎಎಸ್‌ಐ ಸುಪರಿಂಟೆಂಡಿಂಗ್‌ ಆರ್ಕಿಯೋಲಾಜಿಸ್ಟ್‌ ಆಗಿರುವ ಮೂರ್ತೀಶ್ವರಿ ಅವರು ಈಚೆಗೆ ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೊಂದಿಗೆ ನಡೆಸಿದ ಸಭೆಯಲ್ಲಿ  ಮಹಾ ಮಸ್ತಕಾಭಿಷೇಕ ಸಂಬಂಧ ಎಎಸ್‌ಐ ಶ್ರವಣಬೆಳಗೊಳದಲ್ಲಿ  ಕಾರ್ಯಾನುಷ್ಠ ಮಾಡಲಿರುವ ಯೋಜನೆಗಳ ವಿವರಗಳನ್ನು ನೀಡಿದ್ದಾರೆ. 

ಶ್ರವಣಬೆಳಗೊಳದ ನೈಜ ಪ್ರಾಕ್ತನ ಸಂಗತಿಗಳನ್ನು ದೃಷ್ಟಿಯಲ್ಲಿರಿಸಿಕೊಂಡ ವಿಶಿಷ್ಟ ಅಂಶಗಳ ಪಂಚಾಂಗವನ್ನು ಹೊಂದಿರುವ ವಿಶೇಷ ಜೈನ ಕ್ಯಾಲೆಂಡರನ್ನು ಹೊರತರಲು ಎಎಸ್‌ಐ ಉದ್ದೇಶಿಸಿರುವುದಾಗಿ ಮೂರ್ತೀಶ್ವರಿ ಹೇಳಿದರು.

ಫೆ.17ರಿಂದ ತೊಡಗಿ ಒಂದು ತಿಂಗಳ ಕಾಲ ನಡೆಯಲಿರುವ ಮಹಾ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ಬೃಹತ್‌ ಸಂಖ್ಯೆಯ ಯಾತ್ರಿಕರಿಗೆ ಶ್ರವಣಬೆಳಗೊಳ ಕುರಿತಾದ ಸಮಗ್ರ ಮಾಹಿತಿಗಳು ಬೇಕಾಗುತ್ತವೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಎಎಸ್‌ಐ, ಶ್ರವಣಬೆಳಗೊಳ ಐತಿಹಾಸಿಕ ಮತ್ತು ಪ್ರಾಕ್ತನ ಆಯಾಮಗಳ ಸಂಪೂರ್ಣ ಮಾಹಿತಿಗಳನ್ನು ಪ್ರವಾಸಿಗರು ಮತ್ತು ಯಾತ್ರಿಕರೊಂದಿಗೆ ಹಂಚಿಕೊಳ್ಳಲಿದೆ. 

ಕ್ರಿಸ್ತ ಶಕ 981ರಿಂದಲೂ 57 ಅಡಿ ಎತ್ತರ ಬಾಹುಬಲಿಯ ಏಕಶಿಲಾ ಮೂರ್ತಿ ವಿರಾಜಮಾನವಾಗಿರುವ ವಿದ್ಯಾಗಿರಿ ಬೆಟ್ಟದ ಪ್ರಧಾನ ದ್ವಾರಕ್ಕೆ ತಾಗಿಕೊಂಡಿರುವ ಮತ್ತು ಇದೀಗ ಮೇಲ್ಮಟ್ಟಕ್ಕೆ ಏರಿಸಲಾಗಿರುವ ಮಾಹಿತಿ ವ್ಯಾಖ್ಯಾನ ಕೇಂದ್ರದಲ್ಲಿ ಶ್ರವಣಬೆಳಗೊಳ ಕುರಿತಾದ ಸಮಗ್ರ ಐತಿಹಾಸಿಕ ಮತ್ತು ಪ್ರಾಕ್ತನ ಮಾಹಿತಿಗಳು ಲಭ್ಯವಿರುತ್ತವೆ. 

ಎಎಸ್‌ಐ ಮತ್ತು ಶ್ರವಣಬೆಳಗೊಳ ಪಟ್ಟಣ ಮತ್ತು ದೇವಾಲಯಗಳೊಂದಿಗೆ ಸಂಪರ್ಕ ಹೊಂದಿರುವ ಸಂಸ್ಥೆಗಳು ಪುಸ್ತಕ ರೂಪದಲ್ಲಿ ಒದಗಿಸಿರುವ ಮಾಹಿತಿಗಳನ್ನು ಲಭ್ಯಗೊಳಿಸುವ ನಿಟ್ಟಿನಲ್ಲಿ ವಿಶೇಷ ಕ್ಯೂಆರ್‌ (ಕ್ವಿಕ್‌ ರೆಸ್ಪಾನ್ಸ್‌) ಕೋಡ್‌ಗಳನ್ನು ಎಎಸ್‌ಐ ಪರಿಚಯಿಸಲಿದೆ. 

ಸುಮಾರು 58ರಷ್ಟು ಇರುವ ಎಲ್ಲ ಎಎಸ್‌ಐ ತಾಣಗಳನ್ನು ಸಂದರ್ಶಿಸುವುದು ವಿದೇಶಿ ಪ್ರವಾಸಿಗರಿಗೆ ಸಾಧ್ಯವಾಗದ ಕಾರಣ ಅವರು ಈ ಕ್ಯೂಆರ್‌ ಕೋಡ್‌ಗಳ ಮೂಲಕ ಅವುಗಳ ಸಂಪೂರ್ಣ ಮಾಹಿತಿಯನ್ನು ಪಡೆಯಲು ಸಾಧ್ಯವಿರುತ್ತದೆ. ಅವರು ತಮ್ಮ ಅನುಕೂಲಕರ ಹೊತ್ತಿನಲ್ಲಿ, ಬಿಡುವಿನಲ್ಲಿ ಕ್ಯೂಆರ್‌ ಕೋಡ್‌ ಬಳಸಿ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಪಡೆಯಬಹುದಾಗಿರುತ್ತದೆ. ಈ ಮೂಲಕ ಮಾಹಿತಿ ಆಧಾರಿತ ಜ್ಞಾನವು ದೂರದೂರಕ್ಕೂ , ವಿಶ್ವದ ಉದ್ದಗಲಕ್ಕೂ ತಲುಪುವುದು ಸಾಧ್ಯವಿರುತ್ತದೆ ಎಂದು ಮೂರ್ತೀಶ್ವರಿ ಹೇಳಿದರು. 

ಶ್ರವಣಬೆಳಗೊಳದಲ್ಲಿನ ಪ್ರಾಚೀನ ಶಿಲಾ ಶಾಸನಗಳು ಮತ್ತು ಮೋನೋಗ್ರಾಫ್ ಗಳನ್ನು ರಕ್ಷಿಸುವ ಕಾರ್ಯವನ್ನು ಎಎಸ್‌ಐ ಮಾಡುತ್ತಿರುವ ಕೆಲಸಗಳನ್ನು ಮೂರ್ತೀಶ್ವರಿ ಅವರು ಸ್ವಾಮೀಜಿಯವರಿಗೆ ವಿವರಿಸಿದರು. ವಿದ್ಯಾಗಿರಿ ಬೆಟ್ಟದ ಮೆಟ್ಟಲುಗಳು , ವಡಗಲ ಬಸದಿ ಮತ್ತು ಶ್ರವಣ ಬೆಳಗೊಳದ ಇನ್ನಿತರ ಹಲವು ಸಣ್ಣ ಪುಟ್ಟ ದೇಗುಲಗಳ ಸಂರಕ್ಷಣೆ ಸಂಬಂಧ ಎಎಸ್‌ಐ ಕೈಗೊಂಡಿರುವ ಕೆಲಸಗಳ ಬಗ್ಗೆ ಅವರು ಮಾಹಿತಿ ನೀಡಿದರು. 

ಗೋಮಟೇಶ್ವರ ಬೆಟ್ಟದ ಮೇಲೆ ಯಾತ್ರಿಕರು ಮತ್ತು ಪ್ರವಾಸಿಗರಿಗೆ ವಿಶ್ರಾಮ ತಾಣಗಳನ್ನು ಮಾತ್ರವಲ್ಲದೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸಬೇಕೆಂದು ಸ್ವಾಮೀಜಿ ಸಲಹೆ ನೀಡಿದರು. ಕ್ಷೇತ್ರದಲ್ಲಿ ಬಯೋ ಮತ್ತು ಇ-ಟಾಯ್‌ಲೆಟ್‌ಗಳನ್ನು ನಿರ್ಮಿಸುವ ಎಎಸ್‌ಐ ಕೆಲಸವನ್ನು ಸ್ವಾಮೀಜಿ ಪ್ರಶಂಸಿಸಿದರು. ಹಾಗೆಯೇ ಮಹಾ ಮಸ್ತಕಾಭಿಷೇಕದ ವಿಶೇಷ ಅಂಚೆ ಚೀಟಿ ಹೊರತರಲಾಗುವ ಯೋಜನೆಯನ್ನೂ ಅವರು ಮೆಚ್ಚಿದರು. 

ಮುನಿಗಳು, ಮಾತೆಯರು ಮತ್ತು ಇತರ ಸನ್ಯಾಸಿಗಳು ಮತ್ತು ಧಾರ್ಮಿಕ ಗಣ್ಯರು ಈಗಾಗಲೇ ಶ್ರವಣ ಬೆಳಗೊಳಕ್ಕೆ ಬರಲು ಆರಂಭಿಸಿದ್ದಾರೆ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. 

ಫ್ರಾನ್ಸ್‌ನ ಬೋರ್ಡಿಯೋದಿಂದ ಬಂದಿರುವ ಲಿಂಡಾ ಮತ್ತು ರೋಂಡಾ ಎಂಬ ತಾಯಿ-ಮಗಳು ಶ್ರವಣ ಬೆಳಗೊಳಕ್ಕೆ ಬಂದ ಬಳಿಕ ನಮಗೆ ಭೌತಿಕ ಸಂಪತ್ತಿನ ಜಗತ್ತು ಟೊಳ್ಳೆಂಬುದರ ಅರಿವಾಯಿತು; ಶ್ರವಣ ಬೆಳಗೊಳದಲ್ಲಿ ಆಳಕ್ಕೆ ಬೇರು ಬಿಟ್ಟಿರುವ ತತ್ವಶಾಸ್ತ್ರವನ್ನು ನಾವು ತಿಳಿದೆವು ಎಂದು ಉದ್ಗರಿಸಿರುವುದಾಗಿ ಸ್ವಾಮೀಜಿ ಉಲ್ಲೇಖೀಸಿದರು. ಇದೇ ರೀತಿ ಬೆಲ್ಜಿಯಂ ನಿಂದ ಬಂದಿರುವ ಸ್ಟೀವ್‌ ಮತ್ತು ಆತನ ಪತ್ನಿ ಬ್ರೆಂಡಾ ಶ್ರವಣ ಬೆಳಗೊಳ ಪಟ್ಟಣವನ್ನು ತಾವು ಅದರ ಸರಳತೆಗಾಗಿ ಅಪಾರವಾಗಿ ಮೆಚ್ಚಿಕೊಂಡಿರುವುದಾಗಿ ಹೇಳಿದರು. 

ಶ್ರವಣ ಬೆಳಗೊಳದ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಯಾತ್ರಿಕರಿಗೆ ಅನುಕೂಲವಾಗುವಂತೆ ಬ್ಯಾಟರಿ ಚಾಲಿತ ಬುಗ್ಗಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೇ ತಾವು ಮೊದಲು ಈ ಬುಗ್ಗಿಯಲ್ಲಿ ತಿರುಗಾಟ ನಡೆಸಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮೋಟಾರ್‌ ಸೈಕಲ್‌ ಕಂಪೆನಿಯೊಂದು ಯಾತ್ರಿಕರ ಅನುಕೂಲಕ್ಕಾಗಿ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ಪಡೆದು ಒದಗಿಸುತ್ತಿದೆ ಎಂದು ಸ್ವಾಮೀಜಿ ಹೇಳಿದರು. 

ಮೂಡಬಿದಿರೆಯ “ಎಲಿಕ್ಸಿರ್‌’ ಬ್ರ್ಯಾಂಡ್‌ನ‌ ಎಸ್‌ಕೆಎಫ್ ನೀರು ಶುದ್ಧೀಕರಣ ಉತ್ಪಾದನಾ ಘಟಕ, ರಿವರ್ಸ್‌ ಓಸ್‌ಮೋಸಿಸ್‌ನ ನೀರು ಶುದ್ಧೀಕರಣ ಯಂತ್ರ ಅಳವಡಿಸಲ್ಪಟ್ಟ ತನ್ನ ಘಟಕಗಳನ್ನು ಶ್ರವಣ ಬೆಳಗೊಳ ಪಟ್ಟಣದಲ್ಲಿ ಸ್ಥಾಪಿಸಿದೆ. 

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.