ಶೀಘ್ರವೇ ನೂತನ ಮರಳು ನೀತಿ ಜಾರಿ: ಸಚಿವ ಪಾಟೀಲ
Team Udayavani, May 17, 2020, 7:41 AM IST
ಗದಗ: ನೂತನ ಮರಳು ನೀತಿಗೆ ಸಂಪುಟ ಸಮಿತಿ ಒಪ್ಪಿಗೆ ನೀಡಿದ್ದು, ಶೀಘ್ರ ಅನುಷ್ಠಾನಕ್ಕೆ ಬರಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲ ಹಂತದಲ್ಲಿ ಶಿವಮೊಗ್ಗದಿಂದ ಆರಂಭವಾಗಲಿದೆ. ನೂತನ ಮರಳು ನೀತಿಯಡಿ ಮೈಸೂರು ಮಿನರಲ್ಸ್ ಲಿ. ಹಾಗೂ ಹಟ್ಟಿ ಗೋಲ್ಡ್ ಮೈನ್ಸ್ ಏಜೆನ್ಸಿಗಳಿಗೆ ಮಾತ್ರ ಮರಳು ತೆಗೆಯಲು ಅವಕಾಶ ನೀಡಲಾಗಿದೆ.
ಆಯಾ ಏಜೆನ್ಸಿಗಳ ಮೂಲಕ ಅಣೆಕಟ್ಟುಗಳ ಹಿಂಭಾಗದಲ್ಲಿ ಸಂಗ್ರಹವಾಗಿರುವ ಮರಳು ತೆಗೆಯಲಾ ಗುತ್ತದೆ. ಜತೆಗೆ ಗ್ರಾಪಂ ಮಟ್ಟದಲ್ಲೂ ಮರಳು ತೆಗೆಯಲು ಕ್ರಮ ವಹಿಸಲಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ಮರಳು ದೊರೆಯಲಿದೆ ಎಂದರಲ್ಲದೇ ಜನಸಾಮಾನ್ಯರಿಗೆ 700-750 ರೂ. ದರಕ್ಕೆ ಪ್ರತಿ ಮೆಟ್ರಿಕ್ ಟನ್ ಮರಳು ದೊರೆಯುವಂತೆ ಮಾಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.