ಮುರ್ಮು ಭೇಟಿ ಸಂದರ್ಭ ಗೈರು: ಬಿಜೆಪಿ ಶಾಸಕರಿಗೆ ನೋಟಿಸ್
Team Udayavani, Jul 17, 2022, 5:15 AM IST
ಬೆಂಗಳೂರು: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಗೈರು ಹಾಜರಾಗಿದ್ದ ಬಿಜೆಪಿ ಶಾಸಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಮುರ್ಮು ಭೇಟಿ ಸಂದರ್ಭ ಪಕ್ಷದ ಎಲ್ಲ ಶಾಸಕರು ಹಾಗೂ ಸಂಸದರು ಹಾಜರಿರುವಂತೆ ಸೂಚನೆ ನೀಡಲಾಗಿತ್ತಾದರೂ 21 ಶಾಸಕರು ಗೈರು ಹಾಜರಾಗಿದ್ದರು. ಕೆಲವರು ಮುಂಚಿತ ವಾಗಿ ಅನುಮತಿ ಪಡೆದಿ ದ್ದರು. ಇತರರಿಗೆ ನೋಟಿಸ್ ನೀಡಲಾ ಗಿದೆ ಎಂದು ತಿಳಿದು ಬಂದಿದೆ.
ಮತದಾನ ತರಬೇತಿ
ಮತದಾನ ಮಾಡಲು ಬಿಜೆಪಿ ಶಾಸಕರಿಗೆ ತರಬೇತಿ ನೀಡಲು ತೀರ್ಮಾನಿಸಿದೆ. ಅದಕ್ಕಾಗಿ ಶಾಸಕ ರನ್ನು ಶನಿವಾರ (ಜು. 16) ಸಂಜೆಯೇ ಬೆಂಗಳೂರಿನ ಹೊಟೇಲ್ಗೆ ಕರೆಸಲಾಗಿದ್ದು, ರವಿವಾರ ಇಡೀ ದಿನ ತರಬೇತಿ ನೀಡಲಾಗುವುದು. ಸೋಮವಾರ ಹೊಟೇಲ್ನಿಂದಲೇ ಮತದಾನಕ್ಕೆ ಕರೆದುಕೊಂಡು ಹೋಗಲಾಗುವುದು.
ಬೆಂಗಳೂರಲ್ಲಿ ಮತ
ಹಾಕಲಿರುವ ಶ್ರೀನಿವಾಸ ಪ್ರಸಾದ್ ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅನಾರೋಗ್ಯದ ಕಾರಣ ಬೆಂಗಳೂರಿನಲ್ಲೇ ಮತದಾನ ಮಾಡಲಿದ್ದು, ಸ್ಪೀಕರ್ ಕಚೇರಿಯಿಂದ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?