ಕೇಂದ್ರ ಸರಕಾರದ ಗುಜರಿ ನೀತಿ ಯಥಾವತ್ ಜಾರಿಗೆ ಅಧಿಸೂಚನೆ
Team Udayavani, Aug 5, 2022, 6:10 AM IST
ಬೆಂಗಳೂರು: ಕೇಂದ್ರ ಸರಕಾರ ಘೋಷಿಸಿದ ಮಹತ್ವಾಕಾಂಕ್ಷಿ ವಾಹನಗಳ ಗುಜರಿ ನೀತಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದ್ದು, ಈ ಸಂಬಂಧ ಈಚೆಗೆ ಅಧಿಸೂಚನೆಯನ್ನು ಹೊರಡಿಸಿದೆ.
2021ರ ಸೆಪ್ಟೆಂಬರ್ನಲ್ಲಿ ಘೋಷಿಸಿದ ಉದ್ದೇಶಿತ ನೀತಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ನೀತಿಯ ಜಾರಿ ಮತ್ತು ಸಂಬಂಧಿಸಿದ ಯಾವುದೇ ವಿಚಾರಣೆಗಳಿಗಾಗಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳ ನೇತೃತ್ವದಲ್ಲಿ ಮೇಲ್ಮನವಿ ಪ್ರಾಧಿಕಾರವನ್ನಾಗಿ ಅಧಿಸೂಚಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಶೀಘ್ರದಲ್ಲೇ ನೀತಿ ಜಾರಿ ಕುರಿತಂತೆ ಸರಕಾರ ರಾಜ್ಯಪತ್ರ ಹೊರಡಿಸಲಿದ್ದು, ಅನಂತರದಲ್ಲಿ ಅನುಷ್ಠಾನಗೊಳ್ಳಲಿದೆ.