ಕಾಂಗ್ರೆಸ್ ನವರನ್ನು ಜನ ಮರೆತು ಬಿಟ್ಟಿದ್ದಾರೆ : ಬಿ.ಸಿ. ಪಾಟೀಲ್
Team Udayavani, Jul 5, 2021, 2:40 PM IST
ಹಾವೇರಿ: ಕಾಂಗ್ರೆಸ್ ನವರನ್ನು ಜನ ಮರೆತು ಬಿಟ್ಟಿದ್ದಾರೆ. ಯಾವುದೇ ಅರ್ಜಿ ಅವರಿಗೆ ಬರ್ತಿಲ್ಲ. ಹೀಗಾಗಿ ಡಿ.ಕೆ ಶಿವಕುಮಾರ್ ಹೋಲ್ ಸೇಲ್ ಟೆಂಡರ್ ಕರೆದುಬಿಟ್ಟಿದ್ದಾರೆ. ಯಾರಬೇಕಾದರೂ ಬರಬಹುದು ಎಂದು ಪ್ರೀ ಟೆಂಡರ್ ಕರೆದಿದ್ದಾರೆ.
ಡಿ.ಕೆ ಶಿವಕುಮಾರ ಕನಸು ಕಾಣುತ್ತಿದ್ದಾರೆ ಆ ಕನಸುಗಳು ನನಸಾಗಲ್ಲ ಎಂದು ಬಾಂಬೆ ಟೀಂ ಮತ್ತೆ ಕಾಂಗ್ರೆಸ್ ಸೇರಬಹುದು ಎಂಬ ಡಿಕೆಶಿ ಬಹಿರಂಗ ಆಹ್ವಾನ ನೀಡಿದ ವಿಚಾರವಾಗಿ ಹಿರೇಕೇರೂರಿನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ.
ಸಿ.ಪಿ ಯೋಗೇಶ್ವರ್ ಅಂಬಾರಿ ಕಥೆ ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಟಾಂಗ್ ನೀಡಿದ ವಿಚಾರವಾಗಿ, ಸಿ.ಪಿ ಯೋಗೇಶ್ವರ್ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತ ಪಡಿಸಿದ ಬಿ.ಸಿ ಪಾಟೀಲ್, ನಾವು ಸಿ.ಪಿ. ಯೋಗೇಶ್ವರ್ ಅವರಷ್ಟು ಬುದ್ಧಿವಂತರಲ್ಲ. ಅಂಬಾರಿ ಹೊರೋ ಶಕ್ತಿ ಆನೆಗಿದ್ದರೆ ಆನೆನೂ ಹೊರಬಹುದು, ಆನೆ ಮರಿನೂ ಹೊರಬಹುದು ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರ ಕೌರವ ಬ್ಯಾಟಿಂಗ್ ಮಾಡಿದರು.