ಅಪ್ರಾಪ್ತೆ ಮೇಲೆ ಅತ್ಯಾಚಾರ: ನಾಲ್ವರ ಸೆರೆ
Team Udayavani, Feb 12, 2020, 3:00 AM IST
ಸುಬ್ರಹ್ಮಣ್ಯ: ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.ಸುಬ್ರಹ್ಮಣ್ಯದ ಅಪ್ರಾಪ್ತೆ, ಗರ್ಭಿಣಿಯಾದ ಬಳಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಲಾಗಿರುವ ಯುವಕರು, ನೀಡಿದ್ದ ಗರ್ಭಪಾತದ ಮಾತ್ರೆ ಸೇವಿಸಿದ್ದಳು.
ಬಳಿಕ ವಿಪರೀತ ರಕ್ತಸ್ರಾವವಾದ್ದರಿಂದ ವಿಷಯಮನೆಯವರ ಗಮನಕ್ಕೆ ಬಂದಿತ್ತು. ಆ ನಂತರ ಪೊಲೀಸ್ ದೂರು ದಾಖ ಲಿಸಲಾಗಿತ್ತು. ಸಂತ್ರಸ್ತೆ ಮೊದಲು ಸಂಕೇತ್ ಮತ್ತು ವೆಂಕಟೇಶ್ ಎಂಬವರ ಮೇಲೆ ದೂರು ನೀಡಿದ್ದು, ವಿಚಾರಣೆ ವೇಳೆ ದುರ್ಗಾಪ್ರಸಾದ್, ಚಂದ್ರಶೇಖರ, ಡಿಕೇಶ್ ಹಾಗೂ ಅಶೋಕ್ ಎಂಬವರೂ ಭಾಗಿಯಾಗಿದ್ದರೆಂದು ತಿಳಿಸಿದ್ದಳು.