ರೆಡ್ ಅಲರ್ಟ್; ಭಾರೀ ಮಳೆ ಸಾಧ್ಯತೆ
Team Udayavani, Aug 6, 2019, 3:00 AM IST
ಮಣಿಪಾಲ: ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಆ.7 ಮತ್ತು 8ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಇದೇ ವೇಳೆ ಆ.6ರಂದು ಉತ್ತಮ ಮಳೆಯಾಗುವ ಆರೆಂಜ್ ಅಲರ್ಟ್ ಹೊರಡಿಸಲಾಗಿದೆ.
ಬುಧವಾರ ರಾಜ್ಯದ ಒಳನಾಡು, ಕರಾವಳಿಗಷ್ಟೇ ರೆಡ್ ಅಲರ್ಟ್ ಇದ್ದರೆ ಗುರುವಾರ ಇದನ್ನು ಪಕ್ಕದ ಕೇರಳಕ್ಕೂ ವಿಸ್ತರಿಸಲಾಗಿದೆ. 9ರಂದು ದ. ಒಳನಾಡು, ರಾಜ್ಯ ಕರಾವಳಿ ಮತ್ತು ಕೇರಳಗಳಲ್ಲಿ ಆರೆಂಜ್ ಅಲರ್ಟ್ ಇರಲಿದೆ. ಈ ವೇಳೆ ಬಲವಾದ ಗಾಳಿ ಬೀಸಲಿದ್ದು, ಕಡಲಬ್ಬರ ಸಂಭಾವ್ಯ ಎಂದು ಎಚ್ಚರಿಕೆ ನೀಡಲಾಗಿದೆ.
ಅಕಾಲಿಕ ಸಿಡಿಲು ಸಹಿತ ಗಾಳಿಮಳೆ: ಎರಡು ದಿನಗಳಿಂದ ಗಾಳಿ ಮಳೆಯ ಜತೆಗೆ ಕರಾವಳಿಯ ಅಲ್ಲಲ್ಲಿ ಸಿಡಿಲು ಮಿಂಚು ಕೂಡ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಮಳೆಗಾಲದ ಪ್ರಾರಂಭ ಮತ್ತು ಹಿಂಗಾರಿನಲ್ಲಿ ಸಿಡಿಲು ಮಿಂಚು ಇರುವುದು ಸಾಮಾನ್ಯ.
ಆದರೆ ಈ ಅವಧಿಯಲ್ಲಿ ಸಿಡಿಲು ಮಿಂಚು ವಿಶೇಷವಾಗಿದೆಯಲ್ಲದೆ ಪ್ರಾಕೃತಿಕ ಅಸಮತೋಲನದಿಂದ ಉಂಟಾಗುತ್ತಿದೆಯೇ ಎಂಬ ಪ್ರಶ್ನೆಗೆ ಕಾರಣವಾಗಿದೆ. ಸೋಮವಾರ ರಾತ್ರಿ ವೇಳೆ ಉಡುಪಿ-ಮಣಿಪಾಲದಲ್ಲಿ ಗಾಳಿ ಮಳೆಯ ಜತೆಗೆ ಸಿಡಿಲು ಮಿಂಚು ಜೋರಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ