ರೇಖಾ ಕದಿರೇಶ್ ಕೊಲೆ ಪ್ರಕರಣ: ಕೊಲೆ ಪ್ಲ್ಯಾನ್ ಮಾಡಿದ್ದ ಮತ್ತೊಬ್ಬ ಆರೋಪಿ ಸೆರೆ
Team Udayavani, Jul 6, 2021, 9:10 AM IST
ಬೆಂಗಳೂರು: ಛಲವಾದಿಪಾಳ್ಯ ವಾರ್ಡ್ನ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಕಾಟನ್ಪೇಟೆ ಪೊಲೀಸರು ಬಂಧಿಸಿದ್ದಾರೆ.
ಛಲವಾದಿಪಾಳ್ಯದ ಸೆಲ್ವರಾಜ್ ಪೂಬಾಳನ್ ಅಲಿಯಾಸ್ ಕ್ಯಾಪ್ಟನ್ (32 ವ) ಬಂಧಿತ. ಆರೋಪಿಯನ್ನು ಈಜಿಪುರದ ಸರ್ಕಾರಿ ಶಾಲೆಯ ಬಳಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ನಿಗಾ : ಸಚಿವ ಬೊಮ್ಮಾಯಿ
ರೇಖಾ ಹತ್ಯೆಗೆ 2020ರ ನವೆಂಬರ್ ನಲ್ಲಿ ಸಂಚು ರೂಪಿಸಲಾಗಿತ್ತು. ಅನಂತರ ಮಲಾ, ಆಕೆಯ ಪುತ್ರ ಅರುಳ್ ಮಾರ್ಚ್ನಲ್ಲಿ ತಮ್ಮ ಮನೆಯಲ್ಲಿ ಸಭೆ ನಡೆಸಿದ್ದರು. ಈ ವೇಳೆ ಪೀಟರ್ ಜತೆ ನಿಕಟ ಸಂಪರ್ಕ ಹೊಂದಿದ್ದ ಸೆಲ್ವರಾಜ್ ಕೂಡ ಭಾಗಿಯಾಗಿದ್ದ. ಅಲ್ಲದೆ, ಸಭೆಯಲ್ಲಿ ರೇಖಾ ಕೊಲೆಯಾರು ಮಾಡಬೇಕು? ಬಳಿಕ ಹೇಗೆ? ಎಲ್ಲೆಲ್ಲಿ ಅಡಗಿಕೊಳ್ಳಬೇಕು ಎಂಬದನ್ನು ವಿವರಿಸಿದ್ದ.
ಅದರಂತೆ ಜೂ.24ರಂದು ರೇಖಾ ಕೊಲೆಗೈಯಲಾಗಿತ್ತು. ಬಳಿಕ ಆರೋಪಿ ಶ್ರೀರಾಮಪುರ, ಕಾಟನ್ಪೇಟೆ, ಈಜಿಪುರ, ಆಸ್ಟಿನ್ ಟೌನ್ನಲ್ಲಿ ತನ್ನ ಸ್ನೇಹಿತರನ್ನು ಸಂಪರ್ಕಿಸಿ ಕೆಲ ಆರೋಪಿಗಳಿಗೆ ಆಶ್ರಯಕ್ಕೆ ಅವಕಾಶ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK