ಆರ್ ಆರ್ ನಗರ ಕ್ಷೇತ್ರ ಚುನಾವಣೆ ಮುಂದೂಡಿಕೆ, ಕಾರಣ ಏನು?
Team Udayavani, May 11, 2018, 6:47 PM IST
ಬೆಂಗಳೂರು: ವೋಟರ್ ಐಡಿ ಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಮುನಿರತ್ನ ಸ್ಪರ್ಧಿಸುತ್ತಿದ್ದ ಆರ್.ಆರ್.ನಗರ ಕ್ಷೇತ್ರ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಶನಿವಾರ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಮತದಾನ ನಡೆಯಲಿದೆ. ಆದರೆ ಆರ್ .ಆರ್.ನಗರ ಕ್ಷೇತ್ರದ ಚುನಾವಣೆ ಮೇ28ರಂದು ನಡೆಯಲಿದ್ದು, ಮೇ 31ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದರು