ಆರ್ ಎಸ್ಎಸ್ ಶ್ರೀಮಂತ ಎನ್ಜಿಓ: ಬಿಕೆ ಹರಿಪ್ರಸಾದ್
Team Udayavani, May 4, 2022, 12:06 PM IST
ಬೆಂಗಳೂರು: ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ. ಪ್ರತಿಯೊಂದು ಯೋಜನೆಯಲ್ಲಿ ಕಮಿಷನ್ ಹೋಗುತ್ತಿದೆ. ಇದಕ್ಕೆ ಆರ್ ಎಸ್ ಎಸ್ ಕುಮ್ಮಕ್ಕು ಇದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್ ಎಸ್ ಎಸ್ ಶ್ರೀಮಂತ ಎನ್ ಜಿಓ ಆಗಿದೆ. ಆರ್ ಆರ್ ಎಸ್ ಗೆ ಅಷ್ಟೊಂದು ಹಣ ಹೇಗೆ ಬಂತು. ಪ್ರತಿಯೊಬ್ಬ ಸಚಿವರ ಬಳಿ ಆರ್ ಎಸ್ ಎಸ್, ಒಎಸ್ ಡಿ ಇದ್ದಾರೆ. ಇವರ ಮೂಲಕ ಹಣ ಕಲೆಕ್ಷನ್ ಮಾಡುತ್ತಾರೆ. ಹವಿನಪುರದಲ್ಲಿ ಕುಳಿತು ಹಣ ಕಲೆಕ್ಷನ್ ಮಾಡುತ್ತಾರೆ. ನಿನ್ನೆ ಅಮೀತ್ ಶಾ ಬಂದಿದ್ದರು. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:ದೆಹಲಿಯಿಂದ ಸೂಚನೆ ಬಂದ ನಂತರ ಕ್ಯಾಬಿನೆಟ್ ವಿಸ್ತರಣೆ: ಸಿಎಂ ಬೊಮ್ಮಾಯಿ
ಅಶ್ವಥ್ ನಾರಾಯಣ ಮಲ್ಲೇಶ್ವರದಲ್ಲಿ ಗುಳಂ ನಾರಾಯಣ ಆಗಿದ್ದಾರೆ. ಅವರ ಸಹೋದರ ಹಣ ಪಡೆದಿದ್ದು ನೇರವಾಗಿ ಸಾಭೀತಾಗಿದೆ. ಹಾಗಾಗಿ ಕೂಡಲೇ ಅಶ್ವಥ್ ನಾರಾಯಣ್ ರಾಜೀನಾಮೆ ನೀಡಬೇಕು, ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ರಾಜೀನಾಮೆ ನೀಡಬೇಕು. ಸಂಪೂರ್ಣವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.