ಬಳ್ಳಾರಿಯಲ್ಲಿ ಕನ್ನಡದ ಕಲಹ;ರಾಮುಲುಗೆ ಸಿದ್ದರಾಮಯ್ಯ ಕಠಿಣ ಪ್ರಶ್ನೆ!
Team Udayavani, Oct 31, 2018, 5:37 PM IST
ಬಳ್ಳಾರಿ: ಉಪಚುನಾವಣಾ ಪ್ರಚಾರದ ಕಾವು ಏರಿರುವ ವೇಳೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಶ್ರೀರಾಮುಲು ನಡುವೆ ಕನ್ನಡದ ಗಟ್ಟಿತನದ ಕುರಿತಾಗಿ ಸವಾಲುಗಳ ವಿನಿಮಯ ಆಗಿದೆ.
ಶ್ರೀರಾಮುಲುಗೆ ಸರಿಯಾಗಿ ಕನ್ನಡವೇ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಅಕ್ಟೋಬರ್ 27 ರಂದು ಪ್ರಚಾರ ಸಭೆಯಲ್ಲಿ ಕಿಡಿ ಕಾರಿದ್ದ ಶ್ರೀರಾಮುಲು ನನಗೆ ಕನ್ನಡ ಬರುತ್ತದೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಅಂತ ಹೇಳಲು ಬರುವುದಿಲ್ಲ. ಅವರಿಗೆ ಲಕ್ಷ ಅನ್ನಲೂ ಬರುವುದಿಲ್ಲ ಎಂದಿದ್ದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ ನನಗೆ ಪಕ್ಷ ಅನ್ನಲು ಬರುತ್ತದೆ. ಕ್ಷ ಅನ್ನುವುದು ಸ್ವತಂತ್ರ ಪದವ ಇಲ್ಲ, ಸಂಯುಕ್ತ ಪದವ ಅನ್ನುವುದನ್ನು ಶ್ರೀರಾಮುಲು ಹೇಳಲಿ ಎಂದು ಸಾವಲೆಸೆದರು.
ನನಗೆ ಕನ್ನಡ ಹೇಳಿ ಕೊಡಲು ಬರುತ್ತಾರೆ. ಅವರಿಗೆ ಹೃಸ್ವ ಸ್ವರ,ದೀರ್ಘ, ವ್ಯಂಜನ, ಅಲ್ಪ ಪ್ರಾಣ, ಮಹಾಪ್ರಾಣ ಏನಾದರು ಗೊತ್ತಿದೆಯಾ ಎಂದು ಪ್ರಶ್ನಿಸಿದರು.
ಯಡಿಯೂರಪ್ಪಗೆ 3 ನೇ ಮಹಡಿ ಕಾಣುತ್ತಿದೆ!
ಯಡಿಯೂರಪ್ಪ ಅವರಿಗೆ ಮಲಗಿದ ತಕ್ಷಣ ವಿಧಾನಸೌಧದ ಮೂರನೇ ಮಹಡಿ ಕಾಣುತ್ತದೆ ಎಂದು ಲೇವಡಿ ಮಾಡಿದರು.
ಶೋಭಾ ಕರಂದ್ಲಾಜೆ ಆಗಲಿ ಯಡಿಯೂರಪ್ಪ ಅವರಾಗಲಿ ನೂರು ಬಾರಿ ಹೇಳಿದರು ನಮ್ಮ ಸರ್ಕಾರ ಪತನವಾಗುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ