ಕರ್ನಾಟಕ ಹೈಕೋರ್ಟ್ ಗೆ ಐವರು ನ್ಯಾಯಾಧೀಶರ ನೇಮಕಕ್ಕೆ ಸುಪ್ರೀಂ ಶಿಫಾರಸು
Team Udayavani, Jul 20, 2022, 7:15 PM IST
ನವದೆಹಲಿ: ಸುಪ್ರೀಂ ಕೋರ್ಟ್ ಕೊಲಿಜಿಯಂ ಐವರು ನ್ಯಾಯಾಂಗ ಅಧಿಕಾರಿಗಳನ್ನು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಶಿಫಾರಸು ಮಾಡಿದೆ.ಜುಲೈ 19 ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಶಿಫಾರಸು ಮಾಡಿದ ನ್ಯಾಯಾಂಗ ಅಧಿಕಾರಿಗಳು, ಅನಿಲ್ ಭೀಮಸೇನ್ ಕತ್ತಿ, ಗುರುಸಿದ್ದಯ್ಯ ಬಸವರಾಜ, ಚಂದ್ರಶೇಖರ ಮೃತ್ಯುಂಜಯ ಜೋಶಿ, ಉಮೇಶ್ ಮಂಜುನಾಥ ಭಟ್ ಮತ್ತು ತಳಕಡ್ ಗಿರಿಗೌಡ ಶಿವಶಂಕರೇಗೌಡ ಅವರಾಗಿದ್ದಾರೆ.
ಜುಲೈ 1 ರಂತೆ ಕರ್ನಾಟಕ ಉಚ್ಚ ನ್ಯಾಯಾಲಯವು 62 ನ್ಯಾಯಮೂರ್ತಿಗಳ ಮಂಜೂರಾದ ಬಲವಾಗಿದ್ದು ,45 ರ ಬಲದಲ್ಲಿ 17 ಖಾಲಿ ಹುದ್ದೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.