ಗಾಯಾಳುಗಳ ವಿಚಾರಣೆಗೆ ಬೆಂಗಳೂರಿಗೆ ತಂಡ?


Team Udayavani, Feb 15, 2020, 3:05 AM IST

gayaalugala

ಬಳ್ಳಾರಿ: ಹೊಸಪೇಟೆ ತಾಲೂಕು ಮರಿ ಯಮ್ಮನಹಳ್ಳಿ ಬಳಿ ಈಚೆಗೆ ನಡೆದಿರುವ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಪಿ ಸಿ.ಕೆ. ಬಾಬಾ ಮತ್ತು ವೈದ್ಯ ಡಾ| ಮಹಾಂತೇಶ್‌ ಅವರ ದ್ವಂದ್ವ ಹೇಳಿಕೆಗಳು ಹೊಸ ತಿರುವು ಪಡೆದುಕೊಂಡಿದೆ.

ರಸ್ತೆ ಅಪಘಾತವಾದಾಗ ಕಾರಿನಲ್ಲಿ ಮೃತ ಸಚಿನ್‌ ಸೇರಿ ಐವರು ಇದ್ದರು ಎಂದು ಎಸ್‌ಪಿ ಸಿ.ಕೆ.ಬಾಬಾ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದರೆ, ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ಹೊಸಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ| ಮಹಾಂತೇಶ್‌, ಮೃತ ಸಚಿನ್‌ ಸೇರಿ ನಾಲ್ವರು ಬಂದಿದ್ದರು. ರಾಹುಲ್‌, ಶಿವ ಕುಮಾರ್‌, ರಾಕೇಶ್‌ ಗಾಯಾಳುಗಳು ಮತ್ತು ಸಚಿನ್‌ ಮೃತದೇಹ ಬಂದಿತ್ತು ಎಂದು ಹೇಳಿದ್ದಾರೆ.

ಈ ಇಬ್ಬರ ದ್ವಂದ್ವ ಹೇಳಿಕೆಗಳು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ, ಅಪಘಾತಕ್ಕೊಳಗಾದ ಕಾರಿನಲ್ಲಿ ಸಚಿವ ಆರ್‌.ಅಶೋಕ್‌ ಪುತ್ರ ಶರತ್‌ ಬದ ಲಿಗೆ ವರುಣ್‌ ಎಂಬ ಹೆಸರನ್ನು ಸೇರಿಸ ಲಾಗಿದೆ ಎನ್ನಲಾಗುತ್ತಿದೆ. ಪೊಲೀಸರ ಎಫ್‌ಐಆರ್‌ನಲ್ಲಿ ರಾಹುಲ್‌ ಆರೋಪಿ, ಶಿವ ಕುಮಾರ್‌, ರಾಕೇಶ್‌, ವರುಣ್‌ ಗಾಯಾಳು ಗಳು, ಸಚಿನ್‌, ಪಾದಚಾರಿ ರವಿನಾಯಕ್‌ ಮೃತರು ಎಂದು ನಮೂದಿಸಲಾಗಿದೆ.

ಹಾಗಾದರೆ ವರುಣ್‌ ಯಾರು? ಅಪಘಾತ ದಲ್ಲಿ ಗಾಯಗೊಂಡಿದ್ದರೆ ಚಿಕಿತ್ಸೆಗಾಗಿ ಹೊಸ ಪೇಟೆ ಸರ್ಕಾರಿ ಆಸ್ಪತ್ರೆಗೆ ಏಕೆ ಹೋಗಲಿಲ್ಲ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಉದ್ಭ ವಿಸುತ್ತಿದ್ದು, ಸಚಿವರ ಪುತ್ರ ಶರತ್‌ನನ್ನು ರಕ್ಷಿ ಸುವ ಸಲುವಾಗಿ ವರುಣ್‌ ಹೆಸರನ್ನು ಸೇರಿಸಿ ದ್ದಾರೆ ಎಂಬ ಸಂಶಯಗಳು ವ್ಯಕ್ತವಾಗುತ್ತಿವೆ.

ಪೊಲೀಸರ ಪ್ರಕಾರ ಕಾರು ಚಲಾಯಿಸು ತ್ತಿದ್ದ ರಾಹುಲ್‌ಗೆ ಬೆನ್ನೆಲುಬು ಮುರಿದಿದೆ. ಆದರೆ, ಬೆನ್ನು ಮೂಳೆ ಮುರಿದಿರುವುದು ರಾಕೇಶ್‌ಗೆ ಎಂದು ವೈದ್ಯರು ಹೇಳುತ್ತಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಹೆಚ್ಚಿನ ಗಾಯ ಗಳಾಗಿಲ್ಲ ಎಂದರೆ ಅವರನ್ನು ಪೊಲೀಸರು ಏಕೆ ಬಂಧಿಸಲಿಲ್ಲ ಎಂಬ ಶಂಕೆಯೂ ವ್ಯಕ್ತ ವಾ ಗುತ್ತಿದ್ದು, ವೈದ್ಯರು ಮತ್ತು ಪೊಲೀಸರ ಹೇಳಿಕೆಗಳಿಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿವೆ.

ಬೆಂಗಳೂರಿಗೆ ತಂಡ: ಅಪ ಘಾತಕ್ಕೆ ಸಂಬಂಧಿಸಿದಂತೆ ಎಸ್‌ಪಿ ಸಿ.ಕೆ. ಬಾಬಾ ಯಾವುದೇ ಪ್ರತ್ಯೇಕ ತಂಡ ರಚಿಸಲ್ಲ ಎಂದು ಗುರುವಾರ ಹೇಳಿಕೆ ನೀಡಿದ್ದರು. ಆದರೆ, ಸಿಪಿಐ ಶೇಖರಪ್ಪ ನೇತೃತ್ವದ ತಂಡ ವೊಂದನ್ನು ಬೆಂಗಳೂರಿಗೆ ಕಳುಹಿಸಿ ಗಾಯಾಳುಗಳನ್ನು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ. ಇದರಿಂದ ಮಾಧ್ಯಮಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಪೊಲೀ ಸರು ಘಟನೆಯಲ್ಲಿ ಸಚಿವ ಆರ್‌.ಅಶೋಕ್‌ ಪುತ್ರ ಶರತ್‌ ಇಲ್ಲವೆಂಬುದನ್ನು ಸಾಬೀತುಪಡಿ ಸಲು ಹೊರಟಂತಿದೆ ಎನ್ನಲಾಗುತ್ತಿದೆ.

ಸಿಪಿಐ ಶೇಖರಪ್ಪ ನೇತೃತ್ವದಲ್ಲಿ ವಿಚಾರಣೆ: ರಸ್ತೆ ಅಪಘಾತ ನಡೆದ ಫೆ.10ರಂದು ನಮ್ಮ ಗಾಡಿ ಪಂಕ್ಚರ್‌ ಆಗಿದ್ದ ಹಿನ್ನೆಲೆಯಲ್ಲಿ ಮೃತ ರವಿನಾಯ್ಕ ಮತ್ತು ನಾನು ಪಂಕ್ಚರ್‌ ಹಾಕಿಸಿಕೊಳ್ಳಲು ಹೋಗಿದ್ದೆವು. ರಸ್ತೆ ಬದಿ ಟಿ ಕುಡಿಯುತ್ತಾ ನಿಂತಿದ್ದಾಗ ಅತ್ಯಂತ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆಯಿತು.

ನೋಡ ನೋಡುತ್ತಿದ್ದಂತೆಯೇ ಘಟನೆ ನಡೆದು ನಾನು ಮೂಛೆì ಹೋದೆ. ನಂತರ ಏನಾಯ್ತು ಎನ್ನುವುದು ಗೊತ್ತಾಗಲೇ ಇಲ್ಲ. ಕಾರಲ್ಲಿ ನಾಲ್ಕೈದು ಜನ ಇದ್ದರು. ಎಚ್ಚರವಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದೇನೆ. ಕಾರಲ್ಲಿರುವುದು ಸಚಿವರ ಪುತ್ರರೋ ಯಾರೊ ಗೊತ್ತಿಲ್ಲ. ಅಪಘಾತಕ್ಕೆ ವೇಗವೇ ಕಾರಣವಾಗಿದ್ದು ನಮಗೆ ನ್ಯಾಯಕೊಡಿಸಿ ಎಂದು ಮಾಧ್ಯಮಗಳ ಬಳಿ ಲಕ್ಷ್ಮಣ ಅಳಲು ತೋಡಿಕೊಂಡಿದ್ದಾರೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.