ಗಾಯಾಳುಗಳ ವಿಚಾರಣೆಗೆ ಬೆಂಗಳೂರಿಗೆ ತಂಡ?
Team Udayavani, Feb 15, 2020, 3:05 AM IST
ಬಳ್ಳಾರಿ: ಹೊಸಪೇಟೆ ತಾಲೂಕು ಮರಿ ಯಮ್ಮನಹಳ್ಳಿ ಬಳಿ ಈಚೆಗೆ ನಡೆದಿರುವ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಸಿ.ಕೆ. ಬಾಬಾ ಮತ್ತು ವೈದ್ಯ ಡಾ| ಮಹಾಂತೇಶ್ ಅವರ ದ್ವಂದ್ವ ಹೇಳಿಕೆಗಳು ಹೊಸ ತಿರುವು ಪಡೆದುಕೊಂಡಿದೆ.
ರಸ್ತೆ ಅಪಘಾತವಾದಾಗ ಕಾರಿನಲ್ಲಿ ಮೃತ ಸಚಿನ್ ಸೇರಿ ಐವರು ಇದ್ದರು ಎಂದು ಎಸ್ಪಿ ಸಿ.ಕೆ.ಬಾಬಾ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದರೆ, ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ಹೊಸಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ| ಮಹಾಂತೇಶ್, ಮೃತ ಸಚಿನ್ ಸೇರಿ ನಾಲ್ವರು ಬಂದಿದ್ದರು. ರಾಹುಲ್, ಶಿವ ಕುಮಾರ್, ರಾಕೇಶ್ ಗಾಯಾಳುಗಳು ಮತ್ತು ಸಚಿನ್ ಮೃತದೇಹ ಬಂದಿತ್ತು ಎಂದು ಹೇಳಿದ್ದಾರೆ.
ಈ ಇಬ್ಬರ ದ್ವಂದ್ವ ಹೇಳಿಕೆಗಳು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ, ಅಪಘಾತಕ್ಕೊಳಗಾದ ಕಾರಿನಲ್ಲಿ ಸಚಿವ ಆರ್.ಅಶೋಕ್ ಪುತ್ರ ಶರತ್ ಬದ ಲಿಗೆ ವರುಣ್ ಎಂಬ ಹೆಸರನ್ನು ಸೇರಿಸ ಲಾಗಿದೆ ಎನ್ನಲಾಗುತ್ತಿದೆ. ಪೊಲೀಸರ ಎಫ್ಐಆರ್ನಲ್ಲಿ ರಾಹುಲ್ ಆರೋಪಿ, ಶಿವ ಕುಮಾರ್, ರಾಕೇಶ್, ವರುಣ್ ಗಾಯಾಳು ಗಳು, ಸಚಿನ್, ಪಾದಚಾರಿ ರವಿನಾಯಕ್ ಮೃತರು ಎಂದು ನಮೂದಿಸಲಾಗಿದೆ.
ಹಾಗಾದರೆ ವರುಣ್ ಯಾರು? ಅಪಘಾತ ದಲ್ಲಿ ಗಾಯಗೊಂಡಿದ್ದರೆ ಚಿಕಿತ್ಸೆಗಾಗಿ ಹೊಸ ಪೇಟೆ ಸರ್ಕಾರಿ ಆಸ್ಪತ್ರೆಗೆ ಏಕೆ ಹೋಗಲಿಲ್ಲ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಉದ್ಭ ವಿಸುತ್ತಿದ್ದು, ಸಚಿವರ ಪುತ್ರ ಶರತ್ನನ್ನು ರಕ್ಷಿ ಸುವ ಸಲುವಾಗಿ ವರುಣ್ ಹೆಸರನ್ನು ಸೇರಿಸಿ ದ್ದಾರೆ ಎಂಬ ಸಂಶಯಗಳು ವ್ಯಕ್ತವಾಗುತ್ತಿವೆ.
ಪೊಲೀಸರ ಪ್ರಕಾರ ಕಾರು ಚಲಾಯಿಸು ತ್ತಿದ್ದ ರಾಹುಲ್ಗೆ ಬೆನ್ನೆಲುಬು ಮುರಿದಿದೆ. ಆದರೆ, ಬೆನ್ನು ಮೂಳೆ ಮುರಿದಿರುವುದು ರಾಕೇಶ್ಗೆ ಎಂದು ವೈದ್ಯರು ಹೇಳುತ್ತಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಹೆಚ್ಚಿನ ಗಾಯ ಗಳಾಗಿಲ್ಲ ಎಂದರೆ ಅವರನ್ನು ಪೊಲೀಸರು ಏಕೆ ಬಂಧಿಸಲಿಲ್ಲ ಎಂಬ ಶಂಕೆಯೂ ವ್ಯಕ್ತ ವಾ ಗುತ್ತಿದ್ದು, ವೈದ್ಯರು ಮತ್ತು ಪೊಲೀಸರ ಹೇಳಿಕೆಗಳಿಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿವೆ.
ಬೆಂಗಳೂರಿಗೆ ತಂಡ: ಅಪ ಘಾತಕ್ಕೆ ಸಂಬಂಧಿಸಿದಂತೆ ಎಸ್ಪಿ ಸಿ.ಕೆ. ಬಾಬಾ ಯಾವುದೇ ಪ್ರತ್ಯೇಕ ತಂಡ ರಚಿಸಲ್ಲ ಎಂದು ಗುರುವಾರ ಹೇಳಿಕೆ ನೀಡಿದ್ದರು. ಆದರೆ, ಸಿಪಿಐ ಶೇಖರಪ್ಪ ನೇತೃತ್ವದ ತಂಡ ವೊಂದನ್ನು ಬೆಂಗಳೂರಿಗೆ ಕಳುಹಿಸಿ ಗಾಯಾಳುಗಳನ್ನು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ. ಇದರಿಂದ ಮಾಧ್ಯಮಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಪೊಲೀ ಸರು ಘಟನೆಯಲ್ಲಿ ಸಚಿವ ಆರ್.ಅಶೋಕ್ ಪುತ್ರ ಶರತ್ ಇಲ್ಲವೆಂಬುದನ್ನು ಸಾಬೀತುಪಡಿ ಸಲು ಹೊರಟಂತಿದೆ ಎನ್ನಲಾಗುತ್ತಿದೆ.
ಸಿಪಿಐ ಶೇಖರಪ್ಪ ನೇತೃತ್ವದಲ್ಲಿ ವಿಚಾರಣೆ: ರಸ್ತೆ ಅಪಘಾತ ನಡೆದ ಫೆ.10ರಂದು ನಮ್ಮ ಗಾಡಿ ಪಂಕ್ಚರ್ ಆಗಿದ್ದ ಹಿನ್ನೆಲೆಯಲ್ಲಿ ಮೃತ ರವಿನಾಯ್ಕ ಮತ್ತು ನಾನು ಪಂಕ್ಚರ್ ಹಾಕಿಸಿಕೊಳ್ಳಲು ಹೋಗಿದ್ದೆವು. ರಸ್ತೆ ಬದಿ ಟಿ ಕುಡಿಯುತ್ತಾ ನಿಂತಿದ್ದಾಗ ಅತ್ಯಂತ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆಯಿತು.
ನೋಡ ನೋಡುತ್ತಿದ್ದಂತೆಯೇ ಘಟನೆ ನಡೆದು ನಾನು ಮೂಛೆì ಹೋದೆ. ನಂತರ ಏನಾಯ್ತು ಎನ್ನುವುದು ಗೊತ್ತಾಗಲೇ ಇಲ್ಲ. ಕಾರಲ್ಲಿ ನಾಲ್ಕೈದು ಜನ ಇದ್ದರು. ಎಚ್ಚರವಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದೇನೆ. ಕಾರಲ್ಲಿರುವುದು ಸಚಿವರ ಪುತ್ರರೋ ಯಾರೊ ಗೊತ್ತಿಲ್ಲ. ಅಪಘಾತಕ್ಕೆ ವೇಗವೇ ಕಾರಣವಾಗಿದ್ದು ನಮಗೆ ನ್ಯಾಯಕೊಡಿಸಿ ಎಂದು ಮಾಧ್ಯಮಗಳ ಬಳಿ ಲಕ್ಷ್ಮಣ ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…