ಪ್ರತ್ಯೇಕ ಧರ್ಮದ ಕೂಗು, ತಿರುಕನ ಕನಸು
Team Udayavani, Jan 12, 2020, 3:06 AM IST
ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ರಾಜ್ಯಾದ್ಯಂತ ವಿವಾದ ಉಂಟಾದಾಗ ಡಾ.ಚಿದಾನಂದಮೂರ್ತಿಯವರು “ಪ್ರತ್ಯೇಕ ಧರ್ಮ ತಿರುಕನ ಕನಸು, ವೀರಶೈವ-ಲಿಂಗಾಯತ ಒಂದೇ, ಅದು ಹಿಂದೂ ಧರ್ಮ’ ಎಂದು ಪ್ರತಿಪಾದಿಸಿದ್ದರು.
2017 ಜುಲೈ 26 ರಂದು “ಉದಯವಾಣಿ’ಗೆ ಸಂದರ್ಶನ ನೀಡಿದ್ದ ಅವರು, ಲಿಂಗಾಯತರು, ವೀರಶೈವರು ಇಬ್ಬರೂ ಹಿಂದೂಗಳೇ. ಹಿಂದೂ ಧರ್ಮದ ಆಚರಣೆ, ಶಿವ, ಓಂ, ಪರಲೋಕ ಎಲ್ಲವನ್ನೂ ನಂಬುತ್ತಾರೆ. ಪ್ರತ್ಯೇಕ ಧರ್ಮ ಪರಿಹಾರವಲ್ಲ ಎಂದಿದ್ದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಮೀಸಲಾತಿ ಸೌಲಭ್ಯ ಎಂಬುದು ಅರ್ಹತೆ ಇರುವ ಎಲ್ಲರಿಗೂ ಸಿಗಲಿ. ಪ್ರತ್ಯೇಕ ಧರ್ಮ ಮಾನ್ಯತೆ ಕೊಡದೆ ಮೀಸಲಾತಿ ಅಥವಾ ಸವಲತ್ತು ಕೊಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದರು.
ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ ಎಂಬ ಮಾತುಗಳನ್ನು ಕಟುವಾಗಿ ಖಂಡಿಸಿದ್ದ ಅವರು, ಇದು ಮೂರ್ಖತನದ ಮಾತು. ಇತಿಹಾಸ, ವಿಚಾರ, ಪರಂಪರೆ, ಸಂಸ್ಕೃತಿ ತಿಳಿಯದವರು ಆಡುವ ಮಾತಿದು. ಅಖೀಲ ಭಾರತ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ವೀರಶೈವರು ಹಿಂದೂಧರ್ಮಕ್ಕೆ ಸೇರಿದವರು ಎಂದು ನಿರ್ಣಯ ಮಾಡಲಾಗಿತ್ತು. ಅದರ ದಾಖಲೆಯೂ ನನ್ನ ಬಳಿ ಇದೆ ಎಂದು ಹೇಳಿದ್ದರು.
ಪ್ರತ್ಯೇಕ ಧರ್ಮದ ವಿಚಾರ ಯಡಿಯೂರಪ್ಪ ಅಥವಾ ಇನ್ಯಾರದೋ ಪ್ರಶ್ನೆಯಲ್ಲ. ವೀರಶೈವರು-ಲಿಂಗಾಯತರ ಪ್ರಶ್ನೆ. ಇವರೆಲ್ಲರೂ ಹಿಂದೂಗಳು. ಇದು ಸೂಕ್ಷ್ಮ ಮತ್ತು ಗಂಭೀರ ವಿಷಯ. ಇದರಲ್ಲಿ ಸರ್ಕಾರ ಅಥವಾ ಆಳುವ ಪಕ್ಷ-ಪ್ರತಿಪಕ್ಷಗಳು ಹುಡುಗಾಟಿಕೆ ಆಡುವುದು ಸರಿಯಲ್ಲ ಎಂದೇ ಖಡಕ್ ಆಗಿ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ
ಪ್ರವಾಹದ ನೀರಿನಲ್ಲಿ ಪಂಪ್ ಸೆಟ್ ತರಲು ಹೋದ ರೈತರು… ನೀರಿಗಿಳಿಯದಂತೆ ಮನವಿ ಮಾಡಿದ ಸಚಿವರು
ರಬಕವಿ-ಬನಹಟ್ಟಿ: ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ
ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!
Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!
Hubli; ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು
ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.