ಆಸ್ಪತ್ರೆಗೆ ಬರಲು ಸಾಧ್ಯವಾಗದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತೇವೆ : ಅಶ್ವತ್ಥ್ ನಾರಾಯಣ್
Team Udayavani, May 8, 2021, 1:20 PM IST
ಬೆಂಗಳೂರು : ರೆಮಿಡಿಸ್ವೇರ್ ಇಂಜೆಕ್ಷನ್ ಅಲಾಟ್ ಆಗಿತ್ತು, 70 ಸಾವಿರ ಡೋಸ್ ಬಾಕಿ ಇದೆ. ಇನ್ನೂ ಬೇಡಿಕೆ ಹೆಚ್ಚಾಗಿದೆ. ಮುಂದಿನ 16 ನೇ ತಾರೀಖಿನ ವರೆಗೂ ಬೇಡಿಕೆ ಇದೆ. ಪ್ರತಿ ದಿನ 37 ಸಾವಿರ ರೆಮಿಡಿಸ್ವೇರ್ ಡೋಸ್ ಇರುತ್ತೆ. ಈ ಕೋಟಾಗಳನ್ನು ಬಳಸಿಕೊಳ್ಳಲಾಗುತ್ತದೆ. ನಮಗೆ ಕೊಡದೆ ಇದ್ದರೆ ಆ ಕಂಪನಿಗಳಿಗೆ ನೋಟಿಸ್ ಕೊಡುತ್ತೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಶನಿವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಸಮಾಜ , ದೇಶ, ವಿಶ್ವ ಕೋವಿಡ್ ಸಾಂಕ್ರಾಮಿಕ ರೋಗ ನಿವಾರಣೆ ಮಾಡುವ ಕಡೆ ಗಮನ ಕೊಡುತ್ತಿದೆ. ಎಲ್ಲಾ ರೀತಿಯ ಸೌಕರ್ಯ ಅವಶ್ಯಕತೆ ಇದೆ. ಬೇಡಿಕೆಗೆ ತಕ್ಕಂತೆ ಅವಶ್ಯಕತೆಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಕೆಲಸ ಸಮರ್ಥವಾಗಿ ನಡೆಯುತ್ತಿದೆ. ಪ್ರತಿಯೊಬ್ಬ ಸೋಂಕಿತನಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಮಾತ್ರೆ, ಔಷಧ, ಆಹಾರ ಎಲ್ಲವನ್ನು ನೀಡಲಾಗುತ್ತಿದೆ ಎಂದರು.
ರಾಜ್ಯದ ಎಲ್ಲಾ ಕಡೆ 250 ಕೇಂದ್ರಗಳನ್ನು ನಮ್ಮ ಪಕ್ಷದ ವತಿಯಿಂದ ಎಲ್ಲಾ ಕಡೆ ಮಾಡಲಾಗುತ್ತಿದೆ. ಮಾನವ ಸಂಪನ್ಮೂಲ ಕೂಡ ಇಲ್ಲಿ ಬಳಕೆ ಆಗುತ್ತಿದೆ. ಇದು ಶ್ಲಾಘನೀಯ. ಇದಕ್ಕೆ ವ್ಯವಸ್ಥೆ ಮಾಡುವುದಕ್ಕೆ ಆಕ್ಸಿಜನ್ ಬೇಡಿಕೆ ಹೆಚ್ಚು ಆಗುತ್ತಿದೆ. ಕೋವಿಡ್ ಗೆ 70 ಸಾವಿರ ಬೆಡ್ ನಿಗದಿಯಾಗಿದೆ. ಖಾಸಗಿಯಲ್ಲಿ 20 ಸಾವಿರ ಬೆಡ್ ಇದೆ. ಆಕ್ಸಿಜನ್ ಬೇಡಿಕೆ ಹೆಚ್ಚು ಇದೆ. ಇವತ್ತು 950 ಮೆಟ್ರಿಕ್ ಟನ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಹೆಚ್ಚು ಹೆಚ್ಚು ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. 1200 ಮೆಟ್ರಿಕ್ ಟನ್ ಕೇಂದ್ರ ಸರ್ಕಾರ ಕೊಡುವುದಿದೆ. ಎಲ್ಲಾ ಮೆಡಿಕಲ್ ಕಾಲೇಜು, ತಾಲ್ಲೂಕಿನ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಹೆಚ್ಚಿಗೆ ಮಾಡಲಾಗುತ್ತೆ. ಆಕ್ಸಿಜನ್ ಬೆಡ್ ಕೂಡ ಹೆಚ್ಚು ಮಾಡುತ್ತಿದ್ದೇವೆ. ಇವುಗಳ ಬೇಡಿಕೆ ಕೂಡ ಹೆಚ್ಚು ಇದೆ.
ಪ್ರಾರಂಭ ಆರೋಗ್ಯ ಕೇಂದ್ರಗಳಿಗೆ ಯಾರು ಬರುವುದಕ್ಕೆ ಆಗಲ್ಲ ಅವರಿಗೆ ಮನೆಗೆ ಟ್ರೀಟ್ಮೆಂಟ್ ನೀಡುತ್ತೇವೆ. ಟ್ರಾಸ್ಟಿಕ್ ಆಸ್ಪತ್ರೆಗಳನ್ನು ಮಾಡುತ್ತಿದ್ದೇವೆ. ಡಿಸ್ಚಾರ್ಜ್ , ಅಡ್ಮಿಟ್ ಮಾಡಿಕೊಳ್ಳುವಾಗ ಸಮಯ ವ್ಯರ್ಥ ಆಗುತ್ತಿತ್ತು ಆರ್ ಟಿ ಪಿ ಸಿ ಆರ್ 1.50,000 ಸರ್ಕಾರದ ನೇತೃತ್ವದಲ್ಲಿ ಟೆಸ್ಟ್ ಆಗ್ತಿದೆ. ರ್ಯಾಡ್ ಟೆಸ್ಟ್ ಗಳನ್ನು ಮುಂದೆ ಮಾಡುತ್ತಿದ್ದೇವೆ. ಇದು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾಡುತ್ತೇವೆ ಎಂದರು.
24 ಗಂಟೆ ಒಳಗೆ ಈ ಆರ್ ಟಿ ಪಿ ಎಸ್ ರಿಪೋರ್ಟ್ ಕೊಡಬೇಕು. ಇದನ್ನು ಕೆಲವು ಗಂಟೆಗಳಲ್ಲಿ ಕೊಡುವ ಕೆಲಸ ಆಗ್ತಿದೆ. ಕೋವಿಡ್ ಲಕ್ಷಣಗಳು ಮೀರಿ ಜೀವಕ್ಕೆ ಅಪಾಯ ಆಗುತ್ತಿದೆ. ಈ ಎಲ್ಲಾ ಸಮಸ್ಯೆ ನಿವಾರಣೆ ಮಾಡುತ್ತಿದ್ದೇವೆ. ರಾಜ್ಯದ ಎಲ್ಲಾ ಕಡೆ ಔಷಧ ಮಾತ್ರೆಗಳನ್ನು ಸಂಪೂರ್ಣವಾಗಿ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಇನ್ನೂ ಎರಡು ದಿನಗಳಲ್ಲಿ ಅದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತೇವೆ.
15 ಕೋಟಿ ಲಸಿಕೆಗಳನ್ನು ಈಗಾಗಲೇ ಕೊಟ್ಟಿದೆ. 1 ಕೋಟಿ ಲಸಿಕೆ ನಮ್ಮ ರಾಜ್ಯಕ್ಕೆ ಕೊಟ್ಟಿದೆ. ಅಂಕಿಅಂಶಗಳನ್ನು ನೋಡಿದಾಗ ನಮಗೆ ಕಚ್ಚಾ ಮೆಟಿರಿಯಲ್ ಬೇರೆ ಬೇರೆ ದೇಶದ ಜೊತೆಗೆ ಮಾತಾಡಿ ನಮಗೆ ಕೊಟ್ಟಿದ್ದಾರೆ. ಎಲ್ಲಾ ವ್ಯಾಕ್ಸಿನ್ ಕೊಡಲು ಸರ್ಕಾರ ಆರ್ಥಿಕ ಸಹಾಯ ಮಾಡಿದೆ. ಜುಲೈ ತಿಂಗಳಿಗೆ ಹೆಚ್ಚು ಹೆಚ್ಚು ವ್ಯಾಕ್ಸಿನ್ ತಯಾರಿಗೆ ಮಾಡಲಾಗುತ್ತಿದೆ. 17 ರಿಂದ 18 ಕೋಟಿ ವ್ಯಾಕ್ಸಿನ್ ತಯಾರಿಕೆ ಆಗುತ್ತಿದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಇದೆ. ಎಲ್ಲಾ ಸವಾಲುಗಳನ್ನು ಎದುರಿಸಲಾಗುತ್ತಿದೆ.
2000 ಕೋವಿಡ್ ಕೇರ್ ಸೆಂಟರ್ ಇವೆ ಅವೆಲ್ಲವೂ ಸ್ಟೆಪ್ ಡೌನ್ ಆಸ್ಪತ್ರೆಗಳು. ಸರ್ಕಾರ ಕೋವಿಡ್ ಕೇರ್ ಸೆಂಟರ್ ಗಳನ್ನು ಕೂಡ ಮಾಡಲಾಗಿದೆ. ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಮಾಡಿ ರೋಗಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ರೋಗಿಗಳು ನೇರ ಆಸ್ಪತ್ರೆಗಳು ಬರುವುದಕ್ಕೆ ಆಗಿಲ್ಲ ಅಂದ್ರೆ ಅವರಿಗೆ ನೇರ ಮನೆಗೆ ಹೋಗಿ ಟ್ರೀಟ್ಮೇಂಟ್ ಕೊಡುತ್ತೇವೆ.
ಖಾಸಗಿ ಆಸ್ಪತ್ರೆಗಳಿಗೆ ಕೂಡ ಆರ್ಥಿಕ ಸಹಾಯ ಮಾಡುತ್ತೇವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕೂಡ ಉತ್ತಮ ಕಾರ್ಯ ನಿರ್ವಹಿಸುತ್ತಿವೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ